ಪಾವಗಡ : ಈ ಘಟನೆ ಊಹಿಸಿಕೊಳ್ಳೋಕೂ ಒಂದ್ ರೀತಿ ಮುಜುಗರ ಅಂದ್ರೆ ತಪ್ಪಲ್ಲ. ಆಧುನಿಕತೆ, ಟೆಕ್ನಾಲಜಿ, ಸ್ಪೇಸ್ ಎಂದೆಲ್ಲಾ ನಾವು ಮಾತಾಡ್ತೀವಿ. ಆದ್ರೆ, ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಇಂಥದ್ದೊಂದು ಅವಮಾನ ಆಗಿದೆ ಅಂದ್ರೆ, ಸಾಮಾನ್ಯ ಜನರ ಸ್ಥಿತಿ ಏನು ಅನ್ನೋ ಪ್ರಶ್ನೆ ಎದುರಾಗ್ತಿದೆ.
ಇಷ್ಟಕ್ಕೂ ಆಗಿದ್ದೇನು ಅಂದ್ರೆ, ಸಂಸದ ಎ.ನಾರಾಯಣಸ್ವಾಮಿ ಅವರು ಪಾವಗಡದ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಹೋಗಿದ್ರು. ಅಲ್ಲಿನ ಗೊಲ್ಲರಹಟ್ಟಿ ಗ್ರಾಮವನ್ನು ಗುಡಿಸಲು ಮುಕ್ತ ಮಾಡಿ, ಸಿಎಸ್ಆರ್ ಫಂಡ್ ಮೂಲಕ ಮನೆಗಳನ್ನ ಕಟ್ಟಿಸಿಕೊಡುವ ಪ್ಲಾನ್ ಅವರದ್ದಾಗಿತ್ತು. ಆದ್ರೆ, ಸಂಸದ ಎ.ನಾರಾಯಣಸ್ವಾಮಿ ದಲಿತರು ಅನ್ನೋ ಕಾರಣಕ್ಕೆ ಅವರನ್ನ ಗ್ರಾಮಕ್ಕೆ ಪ್ರವೇಶವೇ ನೀಡಲಿಲ್ಲ.
ಎ.ನಾರಾಯಣಸ್ವಾಮಿ ತಂಡದಲ್ಲಿದ್ದ ಎಲ್ಲರಿಗೂ ಗ್ರಾಮಕ್ಕೆ ಪ್ರವೇಶ ನೀಡಲಾಯ್ತು. ಆದ್ರೆ, ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಮಾತ್ರ ಪ್ರವೇಶ ನೀಡಲೇ ಇಲ್ಲ. ಹರಿಜನರು ಗೊಲ್ಲರಹಟ್ಟಿಗೆ ಪ್ರವೇಶ ಮಾಡಿದ್ರೆ, ಮೈಲಿಗೆ ಆಗುತ್ತೆ ಅನ್ನೋದು ಅವರ ನಂಬಿಕೆ. ನೂರಾರು ವರ್ಷಗಳಿಂದ ಇಲ್ಲಿನ ಗೊಲ್ಲರ ಚಿತ್ರಲಿಂಗೇಶ್ವರ ದೇವರು ಮತ್ತು ಹರಿಜನರ ನಡುವೆ ಕೆಟ್ಟ ಘಟನೆ ನಡೆದಿತ್ತಂತೆ. ಹೀಗಾಗಿ, ಹರಿಜನರನ್ನ ಗೊಲ್ಲರಹಟ್ಟಿಗೆ ಸೇರಿಸಿಕೊಳ್ಳುವಂತಿಲ್ಲ.
ಇಷ್ಟೆಲ್ಲಾ ಅಪಮಾನವಾದರೂ, ಊರಿನ ಜನರನ್ನ ಮನವೊಲಿಸಲು ಸಂಸದ ಎ.ನಾರಾಯಣಸ್ವಾಮಿ ಸೇರಿದಂತೆ ಅಲ್ಲಿಂದ ಜನ ಟ್ರೈ ಮಾಡಿದ್ರು. ಆದ್ರೆ, ಗ್ರಾಮದ ಜನ ಒಪ್ಪಲೇ ಇಲ್ಲ. ಅವಮಾನ ಆದರೂ, ಸೌಜನ್ಯದಿಂದ ಆ ಸ್ಥಳದಿಂದ ಸಂಸದ ಎ.ನಾರಾಯಣಸ್ವಾಮಿ ಹೊರಟು ಬಂದ್ರು. ಅಭಿವೃದ್ಧಿಗೆ ಹೋದ ಸಂಸದರಿಗೆ ಊರಿನವರೇ ಅವಮಾನ ಮಾಡಿ ಕಳುಹಿಸಿದ್ರು.
ಸಂಸದರಿಗೇ ಈ ರೀತಿ ಆಗಿದ್ರೆ, ಸಾಮಾನ್ಯ ಜನರ ಪಾಡೇನೂ..? ಇನ್ನೂ ಜಾತಿ, ಕಂದಾಚಾರ, ಅನಾಚಾರ ಇಷ್ಟೆಲ್ಲಾ ನಡೀತಿದ್ರೂ ಸರ್ಕಾರಗಳು ಏನ್ ಮಾಡ್ತಿವೆಯೋ ಏನೋ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?