Featured
ByElection : ಕೆ.ಆರ್. ಪೇಟೆ ಟಿಕೆಟ್ಗಾಗಿ ಜೆಡಿಎಸ್ನಲ್ಲಿ ಫ್ಯಾಮಿಲಿ ಫೈಟ್ : ನಿಖಿಲ್ ವರ್ಸಸ್ ಭವಾನಿ ರೇವಣ್ಣ..! ಯಾರಿಗೆ ಟಿಕೆಟ್..?

ಮಂಡ್ಯ : ಉಪ ಚುನಾವಣಾ ಕಣ ರಂಗೇರಿದ್ದು, ಎಲ್ಲಾ ಪಕ್ಷಗಳಲ್ಲಿ ಟಿಕೆಟ್ಗಾಗಿ ಪೈಪೋಟಿ ಶುರುವಾಗಿದೆ. ಆದ್ರೆ, ಜೆಡಿಎಸ್ನಲ್ಲಿ ಟಿಕೆಟ್ಗಾಗಿ ಫ್ಯಾಮಿಲಿ ಫೈಟ್ ಜೋರಾಗಿಯೇ ನಡೀತಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಹೆಚ್.ಡಿ. ದೇವೇಗೌಡರು, ನಿಮ್ಮ ಕುಟುಂಬದಿಂದ ಯಾರಾದ್ರೂ ಚುನಾವಣೆಗೆ ನಿಲ್ತಾರ ಅಂತ ಕೇಳಿದ್ರೆ, ನಿಮಗೇನು ಬೇರೆ ಕೆಲಸ ಇಲ್ವಾ ಅಂತ ಉತ್ತರ ನೀಡಿದ್ರು. ಆದ್ರೀಗ, ಕೆ.ಆರ್. ಪೇಟೆಗೆ ಉಪ ಚುನಾವಣೆ ನಡೆಯಲಿದ್ದು, ಜೆಡಿಎಸ್ ಅಭ್ಯರ್ಥಿ ಯಾರು ಅನ್ನೋ ಕುತೂಹಲ ಜೋರಾಗಿದೆ.
ಯಾಕಂದ್ರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ, ಕೆ.ಆರ್. ಪೇಟೆಯ ಬೈ ಎಲೆಕ್ಷನ್ಗೆ ಅಭ್ಯರ್ಥಿ ಆಗೋ ಸಾಧ್ಯತೆ ಇದೆ. ಮಗನನ್ನ ಹೇಗಾದರೂ ಮಾಡಿ, ರಾಜಕೀಯಕ್ಕೆ ತರಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಇದಕ್ಕೆ ತಕ್ಕಂತೆ ನಿಖಿಲ್ ಕುಮಾರಸ್ವಾಮಿ ಕೂಡ, ಕೆ.ಆರ್.ಪೇಟೆ ಭಾಗದಲ್ಲಿ ಸುತ್ತಾಟ ನಡೆಸ್ತಿದ್ದಾರೆ. ಮಂಡ್ಯ ಪ್ರವಾಸ ಮಾಡ್ತಿರೋ ನಿಖಿಲ್, ಕೆ.ಆರ್.ಪೇಟೆ ಭಾಗದಲ್ಲಿ ಹೆಚ್ಚು ಹೆಚ್ಚು ಓಡಾಟ ಮಾಡ್ತಿದ್ದಾರೆ. ಹೀಗಾಗಿ, ಸಹಜವಾಗಿಯೇ ನಿಖಿಲ್ ಕುಮಾರಸ್ವಾಮಿ, ಕೆ.ಆರ್. ಪೇಟೆಯಿಂದ ಜೆಡಿಎಸ್ ಅಭ್ಯರ್ಥಿಯಾಗೋ ಸಾಧ್ಯತೆ ಇದೆ.
ಮತ್ತೊಂದೆಡೆ ಹೆಚ್.ಡಿ. ರೇವಣ್ಣ ಪತ್ನಿ, ಭವಾನಿ ರೇವಣ್ಣ ಕೂಡ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ. ಕೆ.ಆರ್. ಪೇಟೆಗೆ ತನಗೆ ಟಿಕೆಟ್ ನೀಡುವಂತೆ ಮಾವ ಹೆಚ್.ಡಿ. ದೇವೇಗೌಡರ ಬಳಿ ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕೆ.ಆರ್.ಪೇಟೆ ಟಿಕೆಟ್ಗಾಗಿ ನಿಖಿಲ್ ವರ್ಸಸ್ ಭವಾನಿ ರೇವಣ್ಣ ನಡುವೆ ಪೈಪೋಟಿ ಶುರುವಾಗಿದೆ ಅನ್ನೋದು ರಾಜಕೀಯ ವಲಯದ ಚರ್ಚೆ. ಇದೇ ವಿಚಾರವಾಗಿ ಖಾಸಗಿ ಸುದ್ದಿವಾಹಿನಿಯಲ್ಲೂ ಸುದ್ದಿ ಪ್ರಸಾರವಾಗಿದೆ.
ಈ ಮಧ್ಯೆ, ಒಂದ್ವೇಳೆ ನಿಖಿಲ್ ಕುಮಾರಸ್ವಾಮಿಗೆ ಕೆ.ಆರ್. ಪೇಟೆಗೆ ಟಿಕೆಟ್ ನೀಡಿದ್ರೆ, ತನಗೆ ಹುಣಸೂರಿನಿಂದ ಟಿಕೆಟ್ ನೀಡಿ ಎಂದು ಭವಾನಿ ರೇವಣ್ಣ ಕೇಳಿದ್ದಾರೆ ಎನ್ನಲಾಗಿದೆ. ಸದ್ಯ, ಇದ್ಯಾವುದು ಅಧಿಕೃತವಲ್ಲ. ನೋಡೋಣ, ಮುಂದೇನಾಗುತ್ತೆ ಅನ್ನೋದು ಇನ್ನೊಂದು ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?