ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಐಪಿಎಲ್ ಡೇಟ್ ಪ್ರಕಟವಾಗಿದ್ದೇ ತಡ, ಆಟಗಾರರಿಗಿಂತ ಹೆಚ್ಚಾಗಿ ಅಭಿಮಾನಿಗಳು ಟೂರ್ನಿಗಾಗಿ ಹಾತೊರೆಯುತ್ತಿದ್ದಾರೆ. ಅದ್ರಲ್ಲೂ ಈ ವರ್ಷದ ಐಪಿಎಲ್ ತುಂಬಾನೆ ವಿಚಾರಗಳಿಗಾಗಿ ಡಿಫ್ರೆಂಟ್ ಆಗಿರಲಿದೆ. ಮೊದಲನೆಯದ್ದಾಗಿ, ಟೂರ್ನಿ ಮಾರ್ಚ್ನಿಂದ ಮೇ ವರೆಗೆ ನಡೆಯೋದ್ರ ಬದಲಾಗಿ, ಸೆಪ್ಟೆಂಬರ್ನಿಂದ ನವೆಂಬರ್ ನಡುವೆ ನಡೆಯಲಿದೆ. ಈ ಬಾರಿ ಐಪಿಎಲ್ ಯುಎಇಯ ಮೂರು ನಗರಗಳಲ್ಲಿ ಅಂದ್ರೆ, ಅಬುಧಾಬಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದೆ.
ಇನ್ನು ಬದಲಾದ ಸನ್ನಿವೇಷದಲ್ಲಿ ಕೆಲ ತಂಡಗಳಿಗೆ ಬದಲಾವಣೆ ಬಯಸೋಕೆ ಇದು ಸೂಕ್ತ ಸಮಯವಾಗಿದೆ. ಅದ್ರಲ್ಲೂ ಆರ್ಸಿಬಿ ಕೂಡ ಒಂದು. ಯಾಕಂದ್ರೆ, ಆರ್ಸಿಬಿ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಈ ಸಾಲಿನಲ್ಲಿ, ಕ್ರಿಕೆಟ್ ಪಂಡಿತರ ಪ್ರಕಾರ ಆರ್ಸಿಬೆಗೆ ಗೆಲುವಿನ ಅವಕಾಶ ಹೆಚ್ಚಾಗಿದೆಯಂತೆ. ಯಾಕಂದ್ರೆ, ಯುಎಯಿನಲ್ಲಿ ಸಮತೋಲಿತ ತಂಡದೊಂದಿಗೆ ಕಣಕ್ಕಿಳಿದ್ರೆ ಮಾತ್ರ ಪ್ರಶಸ್ತಿ ಗೆಲ್ಲೋಕೆ ಸಾಧ್ಯ. ಆ ಸಮತೋಲನ ಆರ್ಸಿಬಿ ತಂಡದಲ್ಲಿದೆ ಎಂದು ಅಭಿಪ್ರಾಯಗಳು ಕೇಳಿಬಂದಿವೆ.
ಇನ್ನೂ ಆರ್ಸಿಬಿ ಗೆಲ್ಲಬೇಕು ಅಂದ್ರೆ, ತಂಡದಲ್ಲಿ ಮಹತ್ವದ ಕೆಲಸವೊಂದು ಆಗಬೇಕಿದೆಯಂತೆ. ಯಾವುದೂ ಆ ಕೆಲಸ ಅನ್ನೋದನ್ನ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಬ್ರೆಟ್ ಲಿ ತಿಳಿಸಿಕೊಟ್ಟಿದ್ದಾರೆ. ಇದು ಆರ್ಸಿಬಿ ತಂಡಕ್ಕೆ ಅವರು ನೀಡಿರೋ ಸಲಹೆಯಾಗಿದೆ.
“ವಿರಾಟ್ ಕೊಹ್ಲಿ, ಯುಎಇನಲ್ಲಿ ತಮ್ಮ ಕ್ರಿಕೆಟ್ ಅನ್ನ ಆನಂದಿಸಬೇಕೆಂದು, ಜೊತೆಯಲ್ಲೇ ನಾಯಕ ಮತ್ತು ಆಟಗಾರನಾಗಿ ಎಲ್ಲ ಒತ್ತಡಗಳನ್ನು ತಾನೇ ತೆಗೆದುಕೊಳ್ಳಬೇಕು. ಒತ್ತಡದಲ್ಲಿ ಎಂತಹವರು ವಿಫಲರಾಗಿಬಿಡ್ತಾರೆ. ಆದ್ರೆ, ವಿರಾಟ್ಗೆ ಎಲ್ಲಾ ಒತ್ತಡಗಳನ್ನೂ ಸಹಿಸಿಕೊಳ್ಳೋ ಶಕ್ತಿಯಿದೆ. ಜೊತೆಯಲ್ಲೇ ಎಲ್ಲಾ ಆಟಗಾರರನ್ನೂ ಪೋಷಿಸಿವುದನ್ನ ಬದಗಿಟ್ಟು, ಕೇವಲ ತಂಡದ ಗೆಲುವಿಗಷ್ಟೇ ಗಮನಹರಿಸಬೇಕು. ಟೀಮ್ ಇಂಡಿಯಾದಲ್ಲಿದ್ದಾಗ ತೋರೋ ಯಶಸ್ಸಿನ ಪ್ರಯತ್ನವನ್ನ ಆರ್ಸಿಬಿಯಲ್ಲೂ ತೋರಬೇಕು.” ಬ್ರೆಟ್ ಲೀ, ಮಾಜಿ ಕ್ರಿಕೆಟಿಗ, ಆಸ್ಟ್ರೇಲಿಯಾ
ಇನ್ನೂ ಭಾರತೀಯ ಕ್ರಿಕೆಟ್ನ ಮಾಜಿ ನಾಯಕ, ಸಂಜಯ್ ಮಂಜ್ರೇಕರ್ ಕೂಡ ಆರ್ಸಿಬಿ ತಂಡವನ್ನ ಶ್ಲಾಘಿಸಿದ್ದಾರೆ. ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಹೊರತುಪಡಿಸಿದ್ರೆ, ಫಿಂಚ್ ತಂಡಕ್ಕೆ ಮತ್ತೊಬ್ಬ ಅಸ್ತ್ರವಾಗಲಿದ್ದಾರೆ ಎಂದಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?