ರೈಸಿಂಗ್ ಕನ್ನಡ:
ಬೀದರ್:
ಈ ಪೋಟೋ ನೋಡಿ ಬಹುಶಃ ಇಂಥಾ ದೃಶ್ಯ ನೋಡೋಕ್ಕೆ ಸಿಗೋದು ಅಪರೂಪ.. ಯಾವ ಪ್ರಚಾರವು ಇಲ್ಲ. ಯಾವ ಚುನಾವಣೆಯ ಗಿಮಿಕ್ ಸಹ ಇಲ್ಲಾ.
ಈ ಚಿತ್ರದಲ್ಲಿ ಇರೋದು ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್.ಬೀದರ್ ಜಿಲ್ಲಾ ಪಂಚಾಯತಿ ಸಿಇಓ ಜ್ಞಾನೇಂದ್ರಕುಮಾರ್ ಗಙಗವಾರ್,ಬೀದರ್ ಎಸಿ ಶ್ರೀಧರ್ ಅವರು ಬಲು ಅಪರೂಪದ ಚಿತ್ರ ಇದು.ಗಡಿ ಜಿಲ್ಲೆ ಬೀದರ್ ಔರಾದ್ ತಾಲೂಕಿನ ವಡಗಾಂ ಗ್ರಾಮಕ್ಕೆ ಹಠಾತ್ತನೆ ಭೇಟಿಗೆ ಹೋದಾಗ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸ್ವತಃ ಕೈ ಪಂಪ್ ಹೊಡೆದು ಕೊಡ ನೀರು ತುಂಬಿದ್ದರು.
ಮಳೆಗಾಲದಲ್ಲೂ ಸಚಿವರ ತವರು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ,ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಮತ್ತು ಬೀದರ್ ಎಸಿ ಶ್ರೀಧರ್ ಕೈ ಪಂಪ್ ಮಾಡಿ ನೀರಿನ ಸಮಸ್ಯೆ ಆಲಿಸಿದರು . ಬರೋಬ್ಬರಿ 40 ಬಾರಿ ಪಂಪ್ ಮಾಡಿದ ಬಳಿಕ ಒಂದು ಕೊಡ ನೀರು ತುಂಬಿದೆ.ಬಳಿ ಅದೇ ನೀರು ಕುಡಿದು ದಾಹ ತೀರಿಸಿಕೊಂಡರು.ಎಸಿ ರೂಮ್ ಅಲ್ಲಿ ಇದ್ದು ಬಾಟಲಿ ನೀರು ಕುಡಿಯುವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಚಿತ್ರದಿಂದ ಕಲಿಯುವುದು ಬಹಳಷ್ಟಿದೆ.
ಗ್ರಾಮಾಂತರ ಜನರು ಕುಡಿಯುವ ನೀರನ್ನೆ ಕುಡಿದ ಈ ಮೂವರು ಅಧಿಕಾರಿಗಳು ಜನರ ಮಧ್ಯೆ ಸಾಮಾನ್ಯ ರಂತೆ ಕಂಡು ಬಂದಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ಜಿಲ್ಲಾಧಿಕಾರಿಯಾಗಿ ಎಸಿ ಕಚೇರಿಯಲ್ಲಿ ಕುಳಿತು ಜನರ ಸಮಸ್ಯೆ ಆಲಿಸಲು ಅಧಿಕಾರಿಗಳಿಗೆ ಕಳುಹಿಸಿ ಆರಾಮಾಗಿರೋ ಅಧಿಕಾರಿಗಳಿಗೆ ಬೀದರ್ ಜಿಲ್ಲಾಧಿಕಾರಿ ಆರ್.ರಾಮಚಂದ್ರ ತಮ್ಮ ಕರ್ತವ್ಯ ಹೇಗಿರಬೇಕು ಎನ್ನುವುದು ತೋರಿಸುವ ಮೂಲಕ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?