Featured
ರಾಹುಲ್-ಪ್ರಿಯಾಂಕ ಡ್ಯಾನ್ಸ್ಗೆ ಬಿಜೆಪಿ ವ್ಯಂಗ್ಯ : ಕಾಂಗ್ರೆಸ್ನಿಂದ ತೀಕ್ಷ್ಣ ತಿರುಗೇಟು

ರೈಸಿಂಗ್ ಕನ್ನಡ :
ಹೇಳಿ ಕೇಳಿ ಈಗ ಪಂಚ ರಾಜ್ಯಗಳ ಚುನಾವಣಾ ಸಮರ ನಡೀತಿದೆ. ಹೀಗಿರುವಾಗ ಎಲ್ಲರೂ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದು, ವಿವಿಧ ರೀತಿಯ ಗಿಮಿಕ್ಗಳನ್ನ ಮಾಡ್ತಿದ್ದಾರೆ. ಈ ನಡುವೆ, ರಾಹುಲ್ ಗಾಂಧಿ ತಮಿಳುನಾಡು, ಕೇರಳ, ಪುದುಚೆರಿಯಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ, ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ರಾಹುಲ್ ಗಾಂಧಿ ಡ್ಯಾನ್ಸ್ ಮಾಡಿ, ಸಖತ್ ವೈರಲ್ ಆಗಿದೆ.
ಅತ್ತ, ರಾಹುಲ್ ತಂಗಿ ಪ್ರಿಯಾಂಕ ಗಾಂಧಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಖತ್ ಜೋರಾಗಿಯೇ ಪ್ರಚಾರ ಮಾಡ್ತಿದ್ದಾರೆ. ಅಸ್ಸಾಂನ ಟೀ ಎಸ್ಟೇಟ್ಗಳಲ್ಲಿ ಪ್ರಚಾರದ ವೇಳೆ, ಪ್ರಿಯಾಂಕ ಕೂಡ ಬುಡಕಟ್ಟು ಮಹಿಳೆಯರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ದಕ್ಷಿಣ ಧ್ರುವಕ್ಕೊಂದು, ಉತ್ತರ ಧ್ರುವಕ್ಕೊಂದು!
ಯುವರಾಜ @RahulGandhi ದಕ್ಷಿಣ ಭಾರತದಲ್ಲಿ ಕುಣಿಯುತ್ತಿದ್ದರೆ,
ಯುವರಾಣಿ @priyankagandhi ಉತ್ತರ ಭಾರತದಲ್ಲಿ ಕುಣಿಯುತ್ತಿದ್ದಾರೆ.
ಚುನಾವಣೆಯ ಮುನ್ನ ಇಂತಹ ಕಸರತ್ತು ನಡೆಸಿ, ಸೋತ ಬಳಿಕ ರಜೆಯ ಮೇಲೆ ವಿದೇಶಕ್ಕೆ ತೆರಳುವುದು.
ಇದು ಗಾಂಧಿ ಕುಟುಂಬದ ಕಥೆ ಮತ್ತು ವ್ಯಥೆ! pic.twitter.com/Pu5jRaLlO2— BJP Karnataka (@BJP4Karnataka) March 1, 2021
ಆದ್ರೆ, ರಾಹುಲ್ ಹಾಗೂ ಪ್ರಿಯಾಂಕ ಗಾಂಧಿ ಡ್ಯಾನ್ಸ್ ಮಾಡಿರೋದಕ್ಕೆ ಕರ್ನಾಟಕ ಬಿಜೆಪಿ ವ್ಯಂಗ್ಯವಾಡಿದೆ. ದಕ್ಷಿಣ ಧ್ರುವಕ್ಕೊಂದು, ಉತ್ತರ ಧ್ರುವಕ್ಕೊಂದು ಟೀಕಿಸಿರೋ ಬಿಜೆಪಿ ಯುವರಾಜ ರಾಹುಲ್, ದಕ್ಷಿಣ ಭಾರತದಲ್ಲಿ ಕುಣಿಯುತ್ತಿದ್ದರೆ, ಯುವರಾಣಿ ಪ್ರಿಯಾಂಕ ಗಾಂಧಿ ಉತ್ತರ ಭಾರತದಲ್ಲಿ ಕುಣಿಯುತ್ತಿದ್ದಾರೆ. ಚುನಾವಣೆಯ ಮುನ್ನ ಇಂತಹ ಕಸರತ್ತು ನಡೆಸಿ, ಸೋತ ಬಳಿಕ ರಜೆಯ ಮೇಲೆ ವಿದೇಶಕ್ಕೆ ತೆರಳುವುದು. ಇದು ಗಾಂಧಿ ಕುಟುಂಬದ ಕಥೆ ಮತ್ತು ವ್ಯಥೆ ಎಂದು ಬಿಜೆಪಿ ಟೀಕಿಸಿದೆ.
'@RahulGandhi ಆವರು ಮೀನುಗಾರರು, ವಿದ್ಯಾರ್ಥಿಗಳು, ವಕೀಲರು ಹಾಗೂ ಸಣ್ಣ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ನಿಮ್ಮ ದುಬಾರಿ ಪಕೀರರಿಗೆ ನವಿಲಿಗೆ ಕಾಳು ಹಾಕುವುದು, ಖಾಲಿ ಟನಲ್ಗೆ ಕೈ ಬೀಸುವುದು, ಶೋಕಿಯ ಫೋಟೋಶೂಟ್ ಬಿಟ್ಟು ರಾಹುಲ್ರಂತೆ ಜನಸಂವಾದ ನಡೆಸುವ ತಾಕತ್ತಿದೆಯೇ ಹೇಳಿ.
ವೇದಿಕೆಯ ವ್ಯವಸ್ಥೆ @INCKarnataka
ಮಾಡುತ್ತದೆ https://t.co/LXbB8ohdJM pic.twitter.com/6l9IYt9ESQ— Karnataka Congress (@INCKarnataka) March 1, 2021
ಇದಕ್ಕೆ ಖಡಕ್ ಆಗಿಯೇ ಉತ್ತರ ನೀಡಿರೋ ರಾಜ್ಯ ಕಾಂಗ್ರೆಸ್, ರಾಹುಲ್ ಗಾಂಧಿ, ಮೀನುಗಾರರು, ವಿದ್ಯಾರ್ಥಿಗಳು, ವಕೀಲರು ಹಾಗೂ ಸಣ್ಣ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ನಿಮ್ಮ ದುಬಾರಿ ಪಕೀರರಿಗೆ ನವಿಲಿಗೆ ಕಾಳು ಹಾಕುವುದು, ಖಾಲಿ ಟನಲ್ಗೆ ಕೈ ಬೀಸುವುದು, ಶೋಕಿಯ ಫೋಟೋಶೂಟ್ ಬಿಟ್ಟು ರಾಹುಲ್ರಂತೆ ಜನಸಂವಾದ ನಡೆಸುವ ತಾಕತ್ತಿದೆಯೇ ಹೇಳಿ. ಬೇಕಿದ್ದರೇ ನಾವೇ ವೇದಿಕೆ ವ್ಯವಸ್ಥೆ ಮಾಡ್ತೀವಿ ಎಂದು ಪ್ರಧಾನಿ ಮೋದಿಗೆ ಚರ್ಚೆಗೆ ಬರುವಂತೆ ಸವಾಲ್ ಹಾಕಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಬರ್ತಿದ್ದಂತೆ ಅವರ ಮೇಲೆ ಇವರು, ಇವರ ಮೇಲೆ ಅವರ ಕೆಸರೆರಚಾಟ ಶುರುವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?