Featured
BIG EXCLUSIVE : ರಿಲೀಫ್ ಸಿಕ್ಕಿದ್ದು ಬಿಜೆಪಿಗೆ..! ಅನರ್ಹ ಶಾಸಕರಿಗೆ ಮಂತ್ರಿ ಭಾಗ್ಯವಿಲ್ಲ, ಅಲೆದಾಟ ತಪ್ಪಲ್ಲ..!

ರೈಸಿಂಗ್ ಕನ್ನಡ : ಸುಪ್ರೀಂಕೋರ್ಟ್ ಏನೋ ಕರ್ನಾಟಕ ಉಪ ಚುನಾವಣೆಗೆ ತಡೆ ನೀಡಿದೆ. ಇದರಿಂದ ಸದ್ಯಕ್ಕೆ ಅನರ್ಹ ಶಾಸಕರು ಖುಷಿಯಾಗಿದ್ದಾರೆ. ಅತ್ತ ಕಾಂಗ್ರೆಸ್ ನಾಯಕರು ಮುಂದೇನು, ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿದ್ದಾರೆ. ಈ ನಡುವೆ, ಸುಪ್ರೀಂಕೋರ್ಟ್ನ ಆದೇಶದಿಂದ ಫುಲ್ ರಿಲೀಫ್ ಸಿಕ್ಕಿದ್ದು ಮಾತ್ರ ಬಿಜೆಪಿ ಹಾಗೂ ಸಿಎಂ ಯಡಿಯೂರಪ್ಪಗೆ. ಈ ಮೂಲಕ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದಂತೆ, ಬಿಜೆಪಿ ನಿಟ್ಟುಸಿರು ಬಿಟ್ಟಿದೆ.
ಯೆಸ್, ಒಂದ್ವೇಳೆ ಎಲೆಕ್ಷನ್ ನಡೆದಿದ್ರೆ, ಈಗಾಗಲೇ ಬಿಜೆಪಿ ಬಂಡಾಯದ ಬೇಗುದಿಯಲ್ಲಿ ಬೇಯುತ್ತಿದೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡಬೇಕಾದ ಅನಿವಾರ್ಯದ ಜೊತೆ ಬಂಡಾಯ, ಬಿಜೆಪಿ ಕಾರ್ಯಕರ್ತರು, ನಾಯಕರ ಅಸಮಾಧಾನ ಎದುರಿಸಬೇಕಾಗಿತ್ತು. ಈಗಾಗಲೇ ಅದರ ಅನುಭವ ಬಿಜೆಪಿ ನಾಯಕರಿಗೆ ಆಗಿದೆ. ಸದ್ಯ ಎಲೆಕ್ಷನ್ ರದ್ದಾಗಿರೋದ್ರಿಂದ, ಬಂಡಾಯ ಶಮನ ಆದಂತೆ ಆಗಿದೆ. ಅಲ್ಲದೆ, ಎಲ್ಲೆಲ್ಲಿ ಬಂಡಾಯ ಆಗಿತ್ತು.. ಮುಂದೇನು ಮಾಡಬೇಕು..? ಬಂಡಾಯ ಶಮನಕ್ಕೆ ಯಾವೆಲ್ಲಾ ಕ್ರಮ ಅನುಸರಿಸಬೇಕು ಅನ್ನೋದಕ್ಕೆ ಬಿಜೆಪಿಗೆ ಸಮಯಾವಕಾಶ ಸಿಕ್ಕಿದೆ. ಈ ನಿಟ್ಟಿನಲ್ಲಿ ಬಿಜೆಪಿ ಗೆದ್ದಂತೆ.
ಒಂದೆಡೆ ಬಂಡಾಯದಿಂದ ಗೆದ್ರೆ, ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆಗೆ ಟೈಮ್ ಸಿಕ್ಕಿದೆ. ಅನರ್ಹ ಶಾಸಕರಿಗೆ ಸದ್ಯಕ್ಕೆ ಮಂತ್ರಿಗಿರಿ ಕೊಡಲ್ಲ. ಅಲ್ಲಿಗೆ ಸಂಪುಟ ವಿಸ್ತರಣೆಯೂ ನಡೆಯಲ್ಲಿ. ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಗೆ ಕಾಯ್ತಿದ್ದ ನಾಯಕರೂ ಸುಮ್ಮನಿರಬೇಕು. ಹೀಗಾಗಿ, ಸಂಪುಟ ವಿಸ್ತರಣೆಯಂದ ಆಗಬಹುದಾದ ಅಸಮಾಧಾನದಿಂದಲೂ ಬಿಜೆಪಿ ಪಾರಾಗಿದ್ದು, ಯಡಿಯೂರಪ್ಪ ಸರ್ಕಾರ ಸೇಫ್ ಆಗಿದೆ.
ಒಟ್ನಲ್ಲಿ, ಯಾರದ್ದೋ ಹೆಸರಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ ಅಂದ್ರೆ ತಪ್ಪಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?