Connect with us

Featured

ಬಿಚ್ಚುಗತ್ತಿ ನೋಡಲೇಬೇಕಾದ ಸಿನಿಮಾ : ಇಲ್ಲಿವೆ ನೋಡಿ 6 ಕಾರಣಗಳು..!

ರೈಸಿಂಗ್ ಕನ್ನಡ ಸಿನಿಮಾ : ಪರ ಭಾಷಾ ಸಿನಿಮಾಗಳಿಗೆ ಕನ್ನಡ ಸಿನಿಮಾಗಳು ಸಡ್ಡು ಹೊಡೆಯುತ್ತಿರುವ ಕಾಲವಿದು. ಕೆಜಿಎಫ್​ ಬಳಿಕ ಕನ್ನಡ ಸಿನಿಮಾಗಳ ರೇಂಜ್​ ಬದಲಾಗಿದೆ. ಆ ಸಾಲಿಗೆ ಹೊಸ ಸೇರ್ಪಡೆ ಅಂದ್ರೆ ಅದು ಬಿಚ್ಚುಗತ್ತಿ ಸಿನಿಮಾ. ಬಿಚ್ಚುಗತ್ತಿ ಸಿನಿಮಾದ ಟ್ರೈಲರ್​ ನೋಡಿದ್ಮೇಲೆ ಈ ರೀತಿಯ ಕನ್ನಡ ಸಿನಿಮಾಗಳು ಗೆಲ್ಲಲೇಬೇಕು ಅಂತ ಪ್ರತಿಯೊಬ್ಬರಿಗೂ ಅನ್ನಿಸುತ್ತೆ. ಇಷ್ಟಕ್ಕೂ ಈ ಮಾತನ್ನ ಯಾಕೆ ಹೇಳ್ತಿದ್ದೀವಿ..? ಬಿಚ್ಚುಗತ್ತಿ ಸಿನಿಮಾವನ್ನ ಯಾಕೆ ನೋಡಬೇಕು ಅನ್ನೋದಕ್ಕೆ ಇಲ್ಲಿವೆ ನೋಡಿ 6 ಕಾರಣಗಳು. ಇದೇ ಫೆಬ್ರವರಿ 28ಕ್ಕೆ ಬಿಚ್ಚುಗತ್ತಿ ಸಿನಿಮಾ ಬಿಡುಗಡೆ ಆಗ್ತಿದೆ.

  1. ಐತಿಹಾಸಿಕ ಸಿನಿಮಾ

ಬಿಚ್ಚುಗತ್ತಿ ಸಿನಿಮಾ ಹೇಳಿ ಕೇಳಿ ಐತಿಹಾಸಿಕ ಸಿನಿಮಾ. ಕ್ರೈಮ್​, ಲವ್​ ಸ್ಟೋರಿ, ಸಸ್ಪೆನ್ಸ್​​, ಕಾಲ್ಪನಿಕ ಕಥೆಗಳೇ ಹೆಚ್ಚು ಹೆಚ್ಚಾಗಿ ಸಿನಿಮಾಗಳು ಆಗುತ್ವೆ. ಐತಿಹಾಸ ಸಿನಿಮಾಗಳು ಬರೋದೆ ಕಡಿಮೆ. ಇಂಥಹ ಸಂದರ್ಭದಲ್ಲಿ ಕನ್ನಡದಲ್ಲಿ ಐತಿಹಾಸಿಕ ಸಿನಿಮಾ ಬರ್ತಿರೋದು ಖುಷಿಯ ವಿಚಾರ.

2. ಅದ್ಭುತ ಮೇಕಿಂಗ್​

ಬಿಚ್ಚುಗತ್ತಿ ಸಿನಿಮಾದ ಟೀಸರ್, ಟ್ರೈಲರ್ ನೋಡಿದ್ರೆ, ವಾವ್ಹ್​ ಅನ್ಸುತ್ತೆ. ಅಷ್ಟೊಂದು ಅದ್ಧೂರಿಯಾಗಿ ಟ್ರೈಲರ್​ ಇದೆ. ಟ್ರೈಲರ್ ನೋಡಿದ್ರೆನೇ ಗೊತ್ತಾಗುತ್ತೆ, ಸಿನಿಮಾದ ಕ್ವಾಲಿಟಿ ಯಾವ ಮಟ್ಟಕ್ಕೆ ಇದೆ ಅಂತ. ಅಷ್ಟೊಂದು ಅದ್ಭುತ ಮೇಕಿಂಗ್​ ಅನ್ನ ನಾವು ಟ್ರೈಲರ್​ನಲ್ಲಿ ಕಾಣಬಹುದು. ಕೆಜಿಎಫ್​, ಅವನೇ ಶ್ರೀಮನ್ನರಾಯಣ ಸಿನಿಮಾಗಳ ಬಳಿಕ ಕನ್ನಡದಲ್ಲಿ ಆ ಮಟ್ಟದ ಮೇಕಿಂಗ್ ಇರೋ ಸಿನಿಮಾ ಅದ್ರರೆ ಅದು ಬಿಚ್ಚುಗತ್ತಿ ಅನ್ನೋದ್ರಲ್ಲಿ ಡೌಟೇ ಇಲ್ಲ.

3. ವೀರ ಮದಕರಿ ನಾಯಕರ ಅಜ್ಜ ಭರಮಣ್ಣ ನಾಯಕರ ಕಥೆ

ಮೊದಲೇ ಹೇಳಿದಂತೆ ಇದು ಐತಿಹಾಸಿಕ ಸಿನಿಮಾ. ದುರ್ಗದ ನಾಯಕ ವೀರ ಮದಕರಿ ಅವರ ಅಜ್ಜ ಭರಮಣ್ಣ ನಾಯಕರ ಕಥೆಯೇ ಈ ಬಿಚ್ಚುಗತ್ತಿ ಸಿನಿಮಾ. ಚಿತ್ರದುರ್ಗವನ್ನ ಆಳಿದ್ದ ಭರವಣ್ಣ ನಾಯಕರು ವೀರ ಹಾಗೂ ಮಹಾಪರಾಕ್ರಮಿ. ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ನಡೆಸಿದ ಯುದ್ಧಗಳ ಕಥೆಯೇ ಈ ಬಿಚ್ಚುಗತ್ತಿ.

Advertisement

4. 18ನೇ ಶತಮಾನದ ಪರಿಕರಗಳ ಬಳಕೆ

ಯೆಸ್​. ಹೇಳಿ ಕೇಳಿ ಇದು ಐತಿಹಾಸಿಕ ಸಿನಿಮಾ. ಸುಮಾರು 1700 ಕಾಲಘಟ್ಟದಲ್ಲಿ ನಡೆದ ಇತಿಹಾಸದ ಕಥೆ ಇದು. ಹೀಗಾಗಿ, ಆ ಕಾಲದಲ್ಲಿ ಬಳಸಲಾಗಿದ್ದ ಪರಿಕರಗಳನ್ನೇ ಸಿನಿಮಾಗೆ ಬಳಸಲಾಗಿದೆಯಂತೆ. ಚಿತ್ರದುರ್ಗದ ಕೋಟೆ ಸುತ್ತಮುತ್ತ ಸೆಟ್​ ಹಾಕಿ ಸಿನಿಮಾ ಚಿತ್ರೀಕರಿಸಲಾಗಿದೆ. ಯುದ್ಧದ ಸನ್ನಿವೇಶಗಳಿಗೆ ಹಾಗೂ ಸಿನಿಮಾದ ಶೂಟಿಂಗ್​ ಗಾಗಿ ಆಗಿನ ಕಾಲದ ಅನೇಕ ಪರಿಕರಗಳನ್ನ ಬಳಸಿಕೊಳ್ಳಲಾಗಿದೆಯಂತೆ.

5. ಸೈರಾ, ಬಾಹುಬಲಿಗೆ ಬಿಚ್ಚುಗತ್ತಿ ಸಡ್ಡು..!

ಬಿಚ್ಚುಗತ್ತಿ ಸಿನಿಮಾವನ್ನ ಕನ್ನಡದ ಬಾಹುಬಲಿ ಅಂದ್ರೆ ತಪ್ಪಲ್ಲ. ಯಾಕಂದ್ರೆ, ಸಿನಿಮಾದ ಕ್ವಾಲಿಟಿ, ಮೇಕಿಂಗ್​ ಅಷ್ಟೊಂದು ಅದ್ಭುತವಾಗಿದೆ. ಪರಭಾಷಾ ಸಿನಿಮಾಗಳು ಈ ಮಟ್ಟಕ್ಕೆ ಬಂದ್ರೆ, ವಾವ್ಹ್​ ಸೂಪರ್ ಅಂತಿವಿ. ಈಗ ಕನ್ನಡದಲ್ಲೇ ಬಾಹುಬಲಿಯಂತಹ ಸಿನಿಮಾ ಬಂದಿದೆ. ಸರಿಯಾಗಿ ಪ್ರಮೋಷನ್ ಮಾಡಿದ್ರೆ ಖಂಡಿತ ಬಿಚ್ಚುಗತ್ತಿ ಸಿನಿಮಾ ಕನ್ನಡದ ಬಾಹುಬಲಿ ಆಗೋದ್ರಲ್ಲಿ ಸಂಶಯವೇ ಇಲ್ಲ.

6. ಬಿಚ್ಚುಗತ್ತಿ ಸಿನಿಮಾದ ಪಾತ್ರವರ್ಗ

ಬಿಚ್ಚುಗತ್ತಿ ಸಿನಿಮಾವನ್ನ ಹರಿ ಸಂತೋಷ್​ ಡೈರೆಕ್ಟ್ ಮಾಡಿದ್ದಾರೆ. ಈ ಹಿಂದೆ ಕಾಲೇಜ್ ಕುಮಾರ್​, ಅಲೆಮಾರಿ, ವಿಕ್ಟರಿ 2 ಸಿನಿಮಾಗಳನ್ನ ಹರಿ ಸಂತೋಷ್ ನಿರ್ದೇಶನ ಮಾಡಿ, ಮೆಚ್ಚುಗೆ ಗಳಿಸಿದ್ರು. ಇದೀಗ ಬಿಚ್ಚುಗತ್ತಿ ಸಿನಿಮಾ ಮಾಡುವ ಮೂಲಕ ಬೆರಗು ಮೂಡಿಸಿದ್ದಾರೆ. ನಾಯಕ ರಾಜವರ್ಧನ್​ ಸಿನಿಮಾಗಾಗಿ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ. ಡಿಂಗ್ರಿ ನಾಗರಾಜ್​ ಪುತ್ರ ರಾಜವರ್ಧನ್​​, ಪಾತ್ರಕ್ಕಾಗಿ ತಮ್ಮ ದೇಹವನ್ನ ಹುರಿಗೊಳಸಿ, ತೂಕವನ್ನೂ ಹೆಚ್ಚಿಸಿಕೊಂಡಿದ್ದಾರೆ. ಇನ್ನು, ಗ್ಲಾಮರಸ್​, ಡಿ ಗ್ಲಾಮರಸ್​​ ಪಾತ್ರಗಳಿಗೂ ಸೈ ಎನ್ನುವ ನಟಿ ಹರಿಪ್ರಿಯ ವಿಭಿನ್ನ ಪಾತ್ರ ಮಾಡಿದ್ದು, ಕತ್ತಿ ಹಿಡಿದಿದ್ದಾರೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ