Connect with us

Featured

ಬಯಸಿದ್ದೆಲ್ಲ ಕೊಡುವ ಕಾಮಧೇನು ಹಸುವಿನ ಕತೆ ಒಮ್ಮೆ ಕೇಳಿ :!!

ಕಾಮಧೇನು ಎಂದರೆ ಕಾಮಿಸಿದ್ದನ್ನೆಲ್ಲ ಕೊಡುವವಳು ಎಂದರ್ಥ. ಕಾಮಧೇನು ಹಸುವು ಎಲ್ಲ ಹಸುಗಳ ತಾಯಿಯಾಗಿದ್ದು, ಅವಳ ಜನನದ ಕತೆ ವಿಶಿಷ್ಠವಾಗಿದೆ.

ಕಾಮಧೇನು(Kamadhenu) ಹೆಸರು ಕೇಳದವರಿಲ್ಲ. ಆಕೆಯು ಎಲ್ಲ ಹಸುಗಳ ತಾಯಿ. ಹಿಂದೂ ಸಂಸ್ಕೃತಿಯ ಭಾಗವಾಗಿರುವ ಕಾಮಧೇನು ಕೇಳಿದ್ದನ್ನೆಲ್ಲ ಕರುಣಿಸುವವಳು, ಅಪರಿಮಿತ ಕರುಣೆ ಉಳ್ಳವಳು ಎಂಬ ಖ್ಯಾತಿ ಪಡೆದಿದ್ದಾಳೆ. ಭಾರತೀಯ ಪುರಾಣ ಕತೆಗಳು ಕಾಮಧೇನುವನ್ನು ಬ್ರಹ್ಮ ಪುತ್ರರೂ, ಶಿವ ಭಕ್ತರೂ ಆದ 11 ರುದ್ರರ ತಾಯಿ ಎನ್ನುತ್ತವೆ

ಕಾಮಧೇನುವು ಮಾನವ ಹೃದಯವು ಬಯಸಬಹುದಾದ ಎಲ್ಲವನ್ನೂ ಪೂರೈಸುತ್ತಾಳೆ. ಅವಳ ಬಗ್ಗೆ ಅನೇಕ ಕಥೆಗಳಿವೆ, ಮತ್ತು ಅವೆಲ್ಲವೂ ಬಹಳ ಆಸಕ್ತಿದಾಯಕವಾಗಿವೆ.

ಕಾಮಧೇನುವಿನ ಕಥೆಯು ವೇದಗಳಲ್ಲಿ ಕಂಡುಬರುತ್ತದೆ, ಅದು ತುಂಬಾ ಹಳೆಯದು. ಈ ಹಸುವಿನ ನಾಲ್ಕು ಕಾಲುಗಳು ವೇದಗಳ ನಾಲ್ಕು ಗ್ರಂಥಗಳನ್ನು ಸಂಕೇತಿಸುತ್ತವೆ. ಹಲ್ಲುಗಳು ಮಾನವ ಜೀವನದ ಗುರಿಗಳಾದ ನಾಲ್ಕು ಪುರುಷಾರ್ಥ(Purusharth)ಗಳನ್ನು ಸಂಕೇತಿಸುತ್ತವೆ. ಕೊಂಬುಗಳು ದೇವರುಗಳನ್ನು ಸಂಕೇತಿಸಿದರೆ, ಭುಜಗಳು ಅಗ್ನಿಯ ಸಂಕೇತವಾಗಿದೆ. ಆದ್ದರಿಂದ ಪವಿತ್ರವಾದುದೆಲ್ಲವೂ ಈ ಗೋವಿನಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಕಾಮಧೇನುವಿನ ಸಾರವನ್ನು ಹೊಂದಿದ ಹಸುಗಳನ್ನು ಬಹಳ ಪವಿತ್ರವೆಂದು ಭಾವಿಸಲಾಗುತ್ತದೆ.

Advertisement

ಕಾಮಧೇನುವು ಐದು ವಿಭಿನ್ನ ರೂಪಗಳಲ್ಲಿ ಅಸ್ತಿತ್ವದಲ್ಲಿದೆ ಎನ್ನಲಾಗುತ್ತದೆ: ನಂದ, ಸುನಂದಾ, ಸುರಭಿ, ಸುಮನ ಮತ್ತು ಸುಶೀಲ. ಇತರ ಹೆಸರುಗಳು ಸಬಲಾ ಮತ್ತು ಮಾತೃಕಾ. ಈಕೆಯ ಪುತ್ರಿ ನಂದಿನಿ(Nandini). ಸತ್ಯಯುಗದಲ್ಲಿ ಕಾಮಧೇನುವು ತನ್ನ ನಾಲ್ಕು ಕಾಲುಗಳಿಂದ ಭೂಮಿಯ ಮೇಲೆ ಸಬಲಳಾಗಿ ನಿಂತಿದ್ದಳು. ತ್ರೇತಾಯುಗದಲ್ಲಿ ಮೂರು ಕಾಲುಗಳು, ಪರಿಪೂರ್ಣತೆಗಿಂತ ಕಡಿಮೆಯ ಎರಡನೇ ಹಂತ ಮತ್ತು ಕಲಿಯುಗದಲ್ಲಿ ಕೇವಲ ಒಂದು ಕಾಲು ಮಾತ್ರ ಭೂಮಿಯ ಮೇಲಿಟ್ಟಿದ್ದಾಳೆ ಎನ್ನಲಾಗುತ್ತದೆ.

ಕಾಮಧೇನು ಹಸುವಿನ ಕಥೆ.
(Story of kamadhenu)
ವಿವಿಧ ಗ್ರಂಥಗಳು ಕಾಮಧೇನುವಿನ ಜನ್ಮ ಕಥೆಯ ವೈವಿಧ್ಯಮಯ ಆವೃತ್ತಿಗಳನ್ನು ಒದಗಿಸುತ್ತವೆ. ಅವುಗಳಲ್ಲಿ ಹೆಚ್ಚು ವ್ಯಾಪಕವಾಗಿರುವುದು ಈ ದೈವಿಕ ಹಸುವು ಸಮುದ್ರ ಮಂಥನದ ಸಮಯದಲ್ಲಿ ಕ್ಷೀರ ಸಾಗರದಿಂದ ಹೊರಹೊಮ್ಮಿತು ಎಂಬುದು.

ಹಿಂದೂ ಪುರಾಣ(Mythology)ದ ಈ ಕಥೆಯಲ್ಲಿ, ದೇವತೆಗಳು ಮತ್ತು ರಾಕ್ಷಸರು ಅಮರತ್ವದ ಹಾಲನ್ನು ಪಡೆಯಲು ಸಾಗರವನ್ನು ಮಥಿಸಿದರು. ಆ ಮಂಥನದಿಂದ ಅಮೃತ ಮಾತ್ರವಲ್ಲ, 14 ರೀತಿಯ ಪವಿತ್ರ ವಸ್ತುಗಳು ಹೊರಬಂದವು. ಅವುಗಳಲ್ಲೊಂದು ಕಾಮಧೇನು. ಈ ಕಾಮಧೇನುವನ್ನು ಏನು ಮಾಡುವುದೆಂದು ದೇವತೆಗಳು ಚರ್ಚಿಸಿ ಆಕೆಯನ್ನು ಸಪ್ತಋಷಿಗಳಿಗೆ ನೀಡಲು ನಿರ್ಧರಿಸುತ್ತಾರೆ. ಸದಾ ಯಜ್ಞಯಾಗಾದಿಗಳಲ್ಲಿ ತೊಡಗಿರುವ ಋಷಿವರ್ಯರಿಗೆ ಹಾಲು ಮತ್ತು ತುಪ್ಪವನ್ನು ಕಾಮಧೇನು ಒದಗಿಸುತ್ತಾಳೆ ಎಂಬುದು ಇದಕ್ಕೆ ಕಾರಣ. ಕಾಲಾನಂತರದಲ್ಲಿ ವಸಿಷ್ಠರ ಕೈ ಸೇರುತ್ತಾಳೆ ಕಾಮಧೇನು.
ಸಂಸ್ಕೃತ ಮಹಾಕಾವ್ಯ ಮಹಾಭಾರತದ ಪುಸ್ತಕವಾದ ಅನುಶಾಸನ ಪರ್ವದ ಪ್ರಕಾರ, ಕಾಮಧೇನುವು ಪ್ರಪಂಚದ ಸೃಷ್ಟಿಕರ್ತ ದಕ್ಷನ ಮಗಳು. ಈತನನ್ನು ಪ್ರಜಾಪತಿ ಎಂದೂ ಕರೆಯುತ್ತಾರೆ. ಸಾಗರಗಳ ಮಂಥನದಿಂದ ಸೃಷ್ಟಿಯಾದ ಅಮರತ್ವದ ಅಮೃತವನ್ನು ಸೇವಿಸಿದ ನಂತರ ಅವಳು ದಕ್ಷನಿಂದ ಜೀವ ಪಡೆದಳು. ಆದ್ದರಿಂದ ಕೆಲವು ದಂತಕಥೆಗಳಲ್ಲಿ ಹಸುವನ್ನು ಪ್ರಪಂಚದ ತಾಯಿ ಮತ್ತು ಬ್ರಹ್ಮ ದೇವರ ಮಗು ಎಂದು ಪರಿಗಣಿಸಲಾಗುತ್ತದೆ.

ಎಲ್ಲಾ ಹಸುಗಳಿಗೂ ತಾಯಿ
ಮತ್ಸ್ಯ ಪುರಾಣ(Mathsya Puran)ದ ಒಂದು ಆವೃತ್ತಿಯ ಪ್ರಕಾರ, ಅವಳು ಬ್ರಾಹ್ಮಣರು ಮತ್ತು ಎಲ್ಲಾ ಹಸುಗಳ ತಾಯಿಯೂ ಹೌದು.

ದೇವಿ ಭಾಗವತ ಪುರಾಣದ ಕತೆ ಬೇರೆಯೇ ಇದೆ. ಕೃಷ್ಣ ಮತ್ತು ರಾಧೆಗೆ ಬಾಯಾರಿಕೆಯಾದಾಗ ಭಗವಂತನು ಹಸು ಸುರಭಿ ಅಥವಾ ಕಾಮಧೇನುವನ್ನು ಸೃಷ್ಟಿಸಿದನು. ಅದರಿಂದ ಸುರಿದ ಹಾಲು ಅವರ ಬಾಯಾರಿಕ ತಣಿಸಿತು. ಆದರೆ, ಹಾಲು ಸುರಿವುದು ನಿಲ್ಲದೆ ಹಾಲಿನ ಸಾಗರವಾಯಿತು. ಆಗ ಕಾಮಧೇನುವಿನಿಂದ ಸಾವಿರಾರು ಹಸುಗಳು ಹುಟ್ಟಿ ಗೋಪಿಯರಿಗೆ ಸೇರಿದವು.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ