ರೈಸಿಂಗ್ ಕನ್ನಡ :
ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ ಇದೇ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆಯ ಫಲಿತಾಂಶಗಳನ್ನ ತಡವಾಗಿ ಕೊಡುತ್ತಿದ್ದಾರೆ. ಇದರ ಜೊತೆಗೆ ಬೆಡ್ಗಳ ಕೊರೆತೆ ಸೋಂಕಿತರನ್ನ ಪರದಾಡುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಸೋಂಕಿತರನ್ನ ಪತ್ತೆ ಹಚ್ಚಲು ಕಾಲ್ ಡಿಟೇಲ್ ರೆಕಾರ್ಡ್ಗಳ ಮೂಲಕ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನ ಪತ್ತೆ ಹಚ್ಚುತ್ತಿದ್ದಾರೆ.
ಇತ್ತಿಚೆಗೆ ದಾವಣಗೆರೆಯ ವ್ಯಕ್ತಿಯೊರ್ವ ವಿಡಿಯೊ ಮೂಲಕ ಕೊರೊನಾ ಫಲಿತಾಂಶವನ್ನ ಕೊಡಲು ಒಂದು ವಾರ ತೆಗೆದುಕೊಂಡಿದ್ದರ ಬಗ್ಗೆ ಮತ್ತು ಪಾಸಿಟಿವ್ ಫಲಿತಾಂಶವವನ್ನ ಹೇಳದೆ ಸತಾಯಿಸಿದ್ದರ ಬಗ್ಗೆ ಹೇಳಿದ್ದರು. ಒಂದು ವಾರದ ಅವಧಿಯಲ್ಲಿ ಪೊಲೀಸರು ಆ ವ್ಯಕ್ತಿಯ ಫೋನ್ ಸಂಪರ್ಕವನ್ನ ಕಾಲ್ ಡಿಟೇಲ್ ಮೂಲಕ ಸಂಪರ್ಕಿಸಿದ್ದರು. ಕೊನೆಗೆ ಸ್ನೇಹಿತನ ಮೂಲಕವೇ ಆ ವ್ಯಕ್ತಿಗೆ ಕೊರೊನಾ ಇರೋದು ದೃಢಪಟ್ಟಿತ್ತು.
ಕೊರೊನಾ ದೃಢಪಟ್ಟಿದ್ದರಿಂದ ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯರಿಗೆ ಸೋಂಕಿತನ ಸಂಪರ್ಕದಲ್ಲಿದ್ದವರನ್ನ ಹುಡುಕುವುದು ಕಷ್ಟವೆನಿಸಲಿಲ್ಲ. ಯಾಕಂದರೆ ದಾವಣಗೆರೆ ಪೊಲೀಸರು ಕಾಲ್ ಡಿಟೇಲ್ ರೆಕಾರ್ಡ್ಗಳನ್ನ ಕೊಟ್ಟಿದ್ದರು. ಕಾಲ್ ಡಿಟೇಲ್ಗಳ ಮೂಲಕ ವೈದ್ಯರು ಸೋಂಕಿತ ಸಂಪರ್ಕದಲ್ಲಿರುವವನ್ನ ಆಸ್ಪತ್ರೆಗೆ ಕರೆಸಿ ತಪಸಾಣೆ ಮಾಡುತ್ತಿದ್ದಾರೆ.
ದಾವಣಗೆರೆಯ ಪೊಲೀಸರ ಈ ತಂತ್ರವನ್ನ ಇದೀಗ ಬೆಂಗಳೂರು ಪೊಲೀಸರು ಮಾಡುತ್ತಿದ್ದಾರೆ. ಸರಿಯಾಗಿ ಫೋನ್ ಸಂಖ್ಯೆ ಮತ್ತು ವಿಳಾಸ ಕೊಡದಿದ್ದಾಗ ಪೊಲೀಸರು ಬೇರೆ ದಾರಿಯಿಲ್ಲದೇ ಈ ತಂತ್ರವನ್ನ ಅನುಸರಿಸುತ್ತಿದ್ದಾರೆ. ಕೋವಿಡ್ ಸೋಂಕಿತರ ಪತ್ತೆಗಾಗಿ ಪೊಲೀಸರು ಕಾಲ್ ಡಿಟೇಲ್ ರೆಕಾರ್ಡ್ಗಳ ಮೂಲಕ ಪತ್ತೆ ಹಚ್ಚುತ್ತಿರುವುದು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ವಜೀಲ ವಿನಯ್ ಶ್ರೀನಿವಾಸ್ ಹೇಳಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?