ರೈಸಿಂಗ್ ಕನ್ನಡ :
ಬೆಳಗಾವಿ :
ಒಂದೆಡೆ ಕೊರೊನಾ ಸೋಂಕು ಎಗ್ಗಿಲ್ಲದೇ ಸಾಗುತ್ತಿದ್ರೆ, ಮತ್ತೊಂದು ಅದು ಸೃಷ್ಟಿಸುತ್ತಿರೋ ಯಡವಟ್ಟುಗಳು ಸಾಕಷ್ಟು ತಲೆನೋವಿಗೆ ಕಾರಣವಾಗಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಮಹಾ ಯಡವಟ್ಟು ಮಾಡಿದ್ದಾರೆ. ಬಿಮ್ಸ್ ಸಿಬ್ಬಂದಿ ಕೊರೊನಾ ಸೋಂಕಿತರ ವಾರ್ಡ್ಗೆ ಸಾಮಾನ್ಯ ರೋಗಿಯನ್ನ ಶಿಫ್ಟ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ವಿಷ್ಯವಾಗಿ ರೋಗಿ ಕಡೆಯವರು, ಆಸ್ಪತ್ರೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಬೆಡ್ಗಳ ಕೊರತೆಯೂ ಎದುರಾಗಿದೆಯಂತೆ, ಹೀಗಾಗಿ ಸಾಮಾನ್ಯ ರೋಗಿಗಳನ್ನ ಕೊಲ್ಲಬೇಡಿ ಎಂದು ಜನ ಪ್ರಾರ್ಥಿಸುತ್ತಿದ್ದಾರಂತೆ. ಅಲ್ಲದೇ ಬೆಡ್ ಸಿಗದೆ ಸಾಮಾನ್ಯ ರೋಗಿಯೊಬ್ಬರು ಮೃತಪಟ್ಟಿದ್ದಾರಂತೆ.
ಅಲ್ಲದೇ ವ್ಯಕ್ತಿಯೋರ್ವ ಹೊಟ್ಟೆನೋವು ತಾಳಲಾರದೆ ಒದ್ದಾಡಿದ್ದಾನೆ. ಎಷ್ಟೇ ಚೀರಾಡಿದ್ರೂ, ಯಾರೂ ಕೂಡ ರೋಗಿಗೆ ಸ್ಪಂಧಿಸಿಲ್ಲ ಅನ್ನೋ ಆರೋಪವೂ ಕೇಳಿಬಂದಿದೆ. ಅಥಣಿ ತಾಲೂಕಿನ ವ್ಯಕ್ತಿಯೊಬ್ಬರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ರೆ, ಬೆಡ್ ಖಾಲಿ ಇಲ್ಲ ಅನ್ನೋ ಕಾರಮಕ್ಕೆ ಚಿಕಿತ್ಸೆಯೇ ಸಿಕ್ಕಿಲ್ಲವಂತೆ. ಅಲ್ಲದೇ ಅವರಿಗೆ ಕೊರೊನಾ ಸೋಂಕು ಇರೋದು ದೃಢಪಟ್ಟಿದೆ.
ಇನ್ನೂ ಬೆಳಗಾವಿಯಲ್ಲಿ ಕೊರೊನಾ ವೈರಸ್ ಮಾಹಾಮಾರಿ ಅಬ್ಬರವೂ ಹೆಚ್ಚಾಗಿದೆ. ಬಿಮ್ಸ್ ಆಸ್ಪತ್ರೆ ಸೋಂಕಿತರಿಂದ ಭರ್ತಿಯಾಗಿದೆ. ಇಷ್ಟಾದ್ರೂ ಜನಪ್ರತಿನಿಧಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ಇದ್ದಾರಂತೆ. ಜಿಲ್ಲೆಯಲ್ಲೇ ಡಿಸಿಎಂ ಸೇರಿದಂತೆ ಮೂವರು ಸಚಿವರಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದ ಜನರ ಅಳಲಾಗಿದೆ. ಜನರ ತೊಳಲಾಟದ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?