Connect with us

ಆರೋಗ್ಯ

ಗೃಹಸ್ಥ ಧರ್ಮ..! ಒಬ್ಬ ಗೃಹಸ್ಥನಾದವ ಮೂರು ರೀತಿಯಲ್ಲಿ ಇರಬೇಕಂತೆ…

  1. ನೀರಿನಲ್ಲಿ ಇರುವ ದೋಣಿಯಂತೆ
  2. ನೀರಿನಲ್ಲಿರುವ ಮೀನಿನಂತೆ …
  3. ನೀರಿನಲ್ಲಿರುವ ಕಮಲದ ಪತ್ರದಂತೆ…

    ದೋಣಿ ನೀರಲ್ಲಿ ತೇಲುತ್ತಾ ಸಾಗುತ್ತದೆ…
    ತನ್ನ ಆಶ್ರಯಕ್ಕೆ ಬರುವವರನ್ನು ನೀರಿನಲ್ಲಿ ತೇಲಿಸುತ್ತದೆ… ಮತ್ತು ದಾಟಲು ಬಾರದ ಅವರೆಲ್ಲರನ್ನೂ ಆಚೆಯ ಬದಿ ತಲುಪಿಸುತ್ತದೆ.
    ಅಂದರೆ ಗೃಹಸ್ಥ ತನ್ನೊಡನೆ
    ತನ್ನ ಆಶ್ರಯವನ್ನ ಬಯಸಿ ಬಂದವರಿಗೆ
    ಆಶ್ರಯ ಕೊಟ್ಟು ಸಂಸಾರ ಸಾಗರ
    ದಾಟಲು ಸಹಾಯ ಮಾಡಬೇಕು.ಸಂಸಾರದಲ್ಲಿ ಮುಳುಗದಂತೆ ನೋಡಿಕೊಳ್ಳಲೂಬೇಕು.
    ಇನ್ನೊಂದು ನೀರಿನೊಳಗಿನ ಮೀನಿನಂತೆ…
    ಮೀನು ನೀರೊಳಗೆ ಇದ್ದು ನೀರನ್ನು ಸ್ವಚ್ಛ ಮಾಡುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ…
    ಹಾಗೆಯೇ ಗೃಹಸ್ಥ ಸಮಾಜದಲ್ಲಿ ಇದ್ದು ಸಮಾಜದ ಕಶ್ಮಲವನ್ನು ತೊಳೆಯುತ್ತಾ ಸಮಾಜವನ್ನು ಶುದ್ಧವಾಗಿಸಬೇಕು.ತಾನೂ ಬದುಕಬೇಕು.
    ಕೊನೆಯದಾಗಿ ಗೃಹಸ್ಥನು ಕಮಲದ ಪತ್ರದಂತಿರಬೇಕು… ಅಂದರೆ ನೀರಲ್ಲಿ ಇದ್ದೂ ನೀರನ್ನು ಅಂಟಿಸಿಕೊಳ್ಳದಂತಿರಬೇಕು.
    ಗೃಹಸ್ಥ ಸಂಬಂಧಗಳನ್ನು ನಿಭಾಯಿಸುತ್ತಾ ಇದ್ದರೂ ಸಂಬಂಧಗಳಿಗೆ ಅತಿಯಾಗಿ ಅಂಟಿಕೊಳ್ಳದಂತೆ ಬಾಳಿ ಬದುಕಬೇಕಂತೆ.
    ಈ ರೀತಿಯಾಗಿ ಬಾಳಿ ಬದುಕಲು ಕಲಿಯೋಣ.
    ಧನ್ಯೋ ಗೃಹಸ್ಥಾಶ್ರಮಃ
    ಅಲ್ಲವೇ?!?.
    ಮೂರು ಸಂದರ್ಭಗಳಲ್ಲಿ ನಾವು ಮಾತನಾಡಬಾರದಂತೆ…
    ೧. ಸ್ನಾನ ಮಾಡುವಾಗ
    ೨. ಊಟ ಮಾಡುವಾಗ
    ೩. ಯಜ್ಞ ಯಾಗ ಮಾಡುವಾಗ
    ಸ್ನಾನ ಮಾಡುವಾಗ ಮಾತನಾಡಿದರೆ ವರುಣದೇವ ನಮ್ಮ ಕಾಂತಿಯನ್ನು ಅಪಹರಿಸುತ್ತಾನಂತೆ…
    ಊಟ ಮಾಡುವಾಗ ಮಾತನಾಡಿದರೆ ಯಮದೇವ ನಮ್ಮ ಆಯುಸ್ಸು ಅಪಹರಿಸುತ್ತಾನಂತೆ….
    ಯಾಗ ಯಜ್ಞ ಮಾಡುವಾಗ ಮಾತನಾಡಿದರೆ ಅಗ್ನಿದೇವ ನಮ್ಮ ಸಂಪತ್ತನ್ನು ಅಪಹರಿಸುತ್ತಾನಂತೆ..
    ಇಲ್ಲಿ ಯಾಕೆ ಇಂತಹಾ ನಿಯಮ ಹಾಕಿದ್ದಾರೆ.. ಈ ಮೂರು ಕ್ರಿಯೆಗಳೂ ಕೇವಲ ಕ್ರಿಯೆ ಮಾತ್ರವಲ್ಲ…
    ಸ್ನಾನ ಅನ್ನೋದು ನಮ್ಮೊಳಗಿನ ದೇವನ ಅಭಿಷೇಕ.. ಹಾಗಾಗಿ ಅಲ್ಲಿ ತಾದಾತ್ಮ್ಯತೆ ಬೇಕು…
    ಊಟ ಅನ್ನೋದು ಒಂದು ಯಾಗ
    ಹಾಗಾಗಿ ಅಲ್ಲಿಯೂ ತಾದಾತ್ಮ್ಯತೆ ಬೇಕು .
    ಇನ್ನು ಯಾಗ ಅನ್ನೋದರಲ್ಲಿ ಹಲವಾರು ಅನುಷ್ಠಾನಗಳಿವೆ.. ಅಲ್ಲೂ ತಾದಾತ್ಮ್ಯತೆ ಬೇಕು. ಮಾತುಗಳು ನಮ್ಮ ಈ ಏಕಾಗ್ರತೆಯನ್ನ ಭಂಗ ಗೊಳಿಸುವ ಕಾರಣ ಇಲ್ಲಿ ಮಾತಿಗೆ ನಿರ್ಬಂಧ ಹಾಕಲಾಗಿರಬೇಕು.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ