Connect with us

Featured

ಕೊರೊನಾದಿಂದ ಸ್ತಬ್ಧವಾಗಿದೆ ಬೆಂಗಳೂರು ಲೈಫ್- ಕೈಯಲ್ಲಿ ಕಾಸಿಲ್ಲ, ಹೊಟೇಲ್ ತಿಂಡಿ, ಊಟ ತಿನ್ನೋಕೆ ಧೈರ್ಯ ಇಲ್ಲ- ಯಾವಾಗ ಸರಿಹೋಗುತ್ತೆ ಲೈಫು..?

ರೈಸಿಂಗ್​ ಕನ್ನಡ:

ಬೆಂಗಳೂರು:

Advertisement

ಕೊರೊನಾ ಮಹಾಮಾರಿಯ ಕಾಟಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸರ್ಕಾರ ಕೋವಿಡ್​ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದೆ. ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕ್ತಿದ್ದಾರೆ. ಹೀಗೇ ಮುಂದುರೆದ್ರೆ ಬೆಂಗಳೂರು ನಗರ ಭಣಗುಡುವುದು ಖಚಿತ.

50% ಸಣ್ಣ ಮತ್ತು ಮಧ್ಯಮ ಹೊಟೇಲ್​ಗಳು ಕ್ಲೋಸ್​​

ಬೆಂಗಳೂರಿನಲ್ಲಿ ಹೊಟೇಲ್​ ಮತ್ತು ದರ್ಶಿನಿಗಳದ್ದೇ ಕಾರುಬಾರು ಜೋರಾಗಿತ್ತು. ಆದ್ರೆ ಅದ್ಯಾವಗ ಕೊರೊನಾ ವಕ್ಕರಿಸಿತೋ ಅವತ್ತಿಂದ ಹೊಟೇಲ್​ ಮತ್ತು ದರ್ಶಿನಿಗಳ ಬ್ಯುಸಿನೆಸ್​ ನೆಲಕಚ್ಚಿದೆ. ಅನ್​ಲಾಕ್​​ ಫೇಸ್​ನಲ್ಲಿದ್ದರೂ ರಾಜಧಾನಿಯಲ್ಲಿ ಸುಮಾರು 50% ಸಣ್ಣ ಮತ್ತು ಮಧ್ಯಮ ಹೊಟೇಲ್​ಗಳು ಬಾಗಿಲು ತೆರೆದಿಲ್ಲ. ಇನ್ನು ಕೆಲವು ಕಡೆ ಹೊಟೇಲ್​ಗಳು ಬಾಗಿಲು ತೆರೆದುಕೊಂಡಿದ್ದರೂ ಗ್ರಹಾಕರಿಲ್ಲದೆ ಕಂಗಾಲಾಗಿವೆ.

Advertisement

ಕ್ಯಾಬ್​​, ಆಟೋಗಳಿಗಿಲ್ಲ ಜನ..!

ಆಟೋ ಮತ್ತು ಕ್ಯಾಬ್​ಗಳಿಂದಲೇ ಬೆಂಗಳೂರಿನಲ್ಲಿ ಟ್ರಾಫಿಕ್​ ಆಗುತ್ತೆ ಅಂತ ಅದೆಷ್ಟೋ ಜನರು ಬಾಯ್ಬಿಬಡ್ಕೊಂತಿದ್ರು. ಆದ್ರೆ ಈಗ ಆಟೋನೂ ಕಡಿಮೆ, ಕ್ಯಾಬ್​ ಕೂಡ ಎಷ್ಟು ಬೇಕೋ ಅಷ್ಟೇ ಇದೆ. ಆದ್ರೆ ಜನ ಮಾತ್ರ ಆಟೋ, ಕ್ಯಾಬ್​ಗಳಲ್ಲಿ ಓಡಾಟ ಮಾಡುವುದಕ್ಕಿಂತ ಸ್ವಂತ ವಾಹನಗಳಲ್ಲೇ ಓಡಾಡ್ತಿದ್ದಾರೆ. ಅನಿವಾರ್ಯ ಅಂತಾದರೆ ಮಾತ್ರ ಆಟೋ ಹತ್ತುವ ಸ್ಥಿತಿ ಬಂದಿದೆ.

ರಸ್ತೆಗಳು ಖಾಲಿ ಖಾಲಿ, ಖಾಲಿ, ಸಿಗ್ನಲ್​ಗಳು ಫ್ರೀ..!

ಬೆಂಗಳೂರಿನಲ್ಲಿ ಬಂದ್​ ಅಥವಾ ಸ್ಟ್ರೈಕ್​ ಆದ್ರೆ ಮಾತ್ರ ರಸ್ತೆಗಳು ಖಾಲಿ ಖಾಲಿಯಾಗುತ್ತಿದ್ದವು. ಆದ್ರೆ ಕೊರೊನಾ ಬಂದಮೇಲೆ ಪ್ರತಿದಿನ ರಸ್ತೆಗಳು ಖಾಲಿ ಖಾಲಿ. ಪ್ರಮುಖ ರಸ್ತೆಗಳದ್ದೇ ಈ ಸ್ಥಿತಿ ಆಗಿದ್ದರೆ ಬೇರೆ ರಸ್ತೆಗಳನ್ನು ಊಹಿಸಿಕೊಳ್ಳಿ. ದಿನದ 24 ಗಂಟೆಯೂ ರಾಜಧಾನಿಯ ಬಹುತೇಕ ಸಿಗ್ನಲ್​ಗಳು ಫ್ರೀಯಾಗಿ ಇರ್ತವೆ ಅಂದ್ರೆ ಅದಕ್ಕೆ ಕೊರೊನಾ ಮಹಾತ್ಮೆಯೇ ಕಾರಣ.

ಸಿಟಿಬಸ್​ಗೆ ಜನ ಇಲ್ಲ, ಕೆಲಸಕ್ಕೆ ಹೋಗೋಕೆ ಭಯ ಬಿಡಲ್ಲ..!

ಬಿಎಂಟಿಸಿ ಬಸ್​​ ನಲ್ಲಿ ಸೀಟು ಸಿಗೋದು ಬಿಡಿ, ನಿಂತ್ಕೊಂಡು ಹೋಗೋದಿಕ್ಕೂ ಕಷ್ಟವಾಗುವ ಕಾಲ ಒಂದಿತ್ತು. ಆದ್ರೆ ಈಗ ಸಿಟಿ ಬಸ್​ ಕಂಡ್ರೆ ಜನ ಹೌಹಾರುವ ಪರಿಸ್ಥಿತಿ ಬಂದಿದೆ. ಬಸ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ ಜನಕ್ಕೆ ಮಾತ್ರ ಬಸ್​ ಹತ್ತಲು ಒಂಥರಾ ನಡುಕ. ಇನ್ನು ಸದಾ ಕೆಲಸ ಕೆಲಸ ಅಂತ ಆಫೀಸ್​ಗೆ ಹೋಗ್ತಿದ್ದ ಮಂದಿ ಈಗ ವರ್ಕ್​ ಫ್ರಂ ಹೋಮ್​ ಬೆಟರ್​ ಅಂತ ಮನೆಯಲ್ಲೇ ಉಳಿದುಕೊಳ್ತಿದ್ದಾರೆ..?

Advertisement

ವಾಕಿಂಗ್​ ಇಲ್ಲ, ಜಾಗಿಂಗ್ ಬೇಡ, ಜಿಮ್​ ಅಂತು ಓಪನ್​ ಇಲ್ಲ..!

ಬೆಳಗ್ಗೆಯಾಗಲಿ, ಸಂಜೆಯಾಗಲಿ ಬೆಂಗಳೂರಿನ ಪಾರ್ಕ್​ಗಳು, ರಸ್ತೆಗಳಲ್ಲಿ ವಾಕ್​ ಮಾಡುವವರ ಸಂಖ್ಯೆ ಲೆಕ್ಕಹಾಕೋದು ಕಷ್ಟವಿತ್ತು. ತಾಕತ್​ ಇದ್ದವರು ಜಾಗಿಂಗ್​ ಬೇರೆ ಮಾಡ್ತಾ ಇದ್ರು. ಆದರೆ ಕಳೆದ 4 ತಿಂಗಳುಗಳಿಂದ ವಾಕಿಂಗೂ ಇಲ್ಲ, ಜಾಗಿಂಗೂ ಇಲ್ಲ. ಪಾರ್ಕ್​ಗಳು ಓಪನ್​ ಆಗಿದ್ರೂ ಜನ ಬರೋದೇ ಇಲ್ಲ. ಈ ಮಧ್ಯೆ ಜಿಮ್​ ಮಾಡ್ಕೊಂಡು ಟೈಟ್​​ ಬಾಡಿ ಮೈಂಟೇನ್​ ಮಾಡ್ತಿದ್ದವರು ಈಗ ಏನೂ ಇಲ್ಲದೆ ಕಂಗಾಲಾಗಿದ್ದರೆ. ಜಿಮ್​ ಓಪನ್​ ಆಗದೆ ಜಿಮ್​ ಓನರ್​ಗಳು ಕೂಡ ಕಂಗಾಲಾಗಿದ್ದಾರೆ.

ಯಾವಾಗ ಸರಿಹೋಗುತ್ತೆ ಇದು..?

ಇದು ಎಲ್ಲರ ಬಳಿ ಇರುವ ಪ್ರಶ್ನೆ. ಕೊರೊನಾಕ್ಕೆ ಯಾವಾಗ ಮೆಡಿಸಿನ್​ ಹುಡುಕ್ತಾರೋ ಅದ್ಯಾವಾಗ ನಾರ್ಮಲ್​ ಲೈಫ್​ ಶುರುವಾಗುತ್ತೋ ಅನ್ನೋ ಆಸೆ ಎಲ್ಲರ ಬಳಿ ಇದೆ. ಆದ್ರೆ ಸದ್ಯಕ್ಕೆ ಕೊರೊನಾದ್ದೇ ಆಟ. ಮುಂದೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ.

Advertisement

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ