ಇತ್ತೀಚೆಗೆ ಮಕ್ಕಳಾಗುವುದೇ ಸವಾಲಿನ ಕೆಲಸ ಎನ್ನುವ ಮಟ್ಟಿಗೆ ದಂಪತಿಗಳು ನಿರ್ಧಾರ ಮಾಡಿಬಿಡುತ್ತಾರೆ. ಆದ್ರೆ ಮಗು ಹುಟ್ಟಿದ ಮೇಲೆ ತಾಯಿ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಮಗುವಿಗೆ ಎದೆಹಾಲಿಗಿಂತ ದೊಡ್ಡ ವಿಟಮಿನ್ ಬೇರೆ ಇಲ್ಲ. ಆದರೆ ಮಗುವಿಗೆ ಹಾಲುಣಿಸಲು ಎದೆಹಾಲು ಇರುವುದೇ ಇಲ್ಲ. ಇದಕ್ಕೆ ಆಯುರ್ವೇದದಲ್ಲಿ ಸುಲಭ ಮನೆ ಮದ್ದು ಇದೆ. ಪುರಾಣಿಕ್ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ತಾಯಂದಿರ ಎದೆಹಾಲು ಹೆಚ್ಚಿಸಲು ಸುಲಭ ಉಪಾಯ ಹೇಳಿಕೊಡುತ್ತಿದೆ.
ಮೊದಲು ಏಳೆಂಟು ಶತಾವರಿ ಬೇರುಗಳನ್ನು ತೆಗೆದುಕೊಂಡು ಶುದ್ಧ ಬಿಸಿನೀರಿನಲ್ಲಿ ತೊಳೆಯಬೇಕು. ಆ ನಂತರ ಒಂದು ಪಾತ್ರೆಯಲ್ಲಿ 2ಗ್ಲಾಸ್ ನೀರು ಹಾಕಿ ಶತಾವರಿ ಬೇರಿನ ಜೊತೆಗೆ ಕಲ್ಲು ಸಕ್ಕರೆ ಹಾಕಿ ಕುದಿಸಬೇಕು. ಸುಮಾರು 15 ನಿಮಿಷ ಕುದಿಸಿದ ಬಳಿಕ ಕಷಾಯ ಸಿದ್ಧವಾಗುತ್ತದೆ. ಈ ಕಷಾಯವನ್ನು ದಿನಕ್ಕೆ 2 ಬಾರಿ ಸೇವಿಸಿದರೆ ಬಾಣಂತಿಯರಲ್ಲಿ ಎದೆಹಾಲು ವೃದ್ಧಿ ಆಗುತ್ತದೆ. ಮಗುವಿಗೆ ಸಮೃದ್ಧವಾಗಿ ಹಾಲುಣಿಸಲು ಸಾಧ್ಯವಾಗುತ್ತದೆ ಮತ್ತು ಮಗು ಆರೋಗ್ಯದಿಂದ ಇರುತ್ತದೆ.
ಇದರ ಜೊತೆಗೆ ಕರಿಬೇವಿನ ಚಿತ್ರಾನ್ನ ಕೂಡ ಸೇವಿಸಿದರೆ ಉತ್ತಮ. ಕರಿಬೇವಿನಿಂದ ಆರೋಗ್ಯಕ್ಕೆ ವಿಟಮಿನ್ K ಜೊತೆಗೆ ಹಲವು ಲಾಭಗಳಿವೆ. ಕರಿಬೇವು ಸಾಕಷ್ಟು ತೆಗೆದುಕೊಂಡು ಅದಕ್ಕೆ ಬಿಳಿ ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ ಸೇರಿಸಿಕೊಳ್ಳವೇಕು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಣಮೆಣಸು ಸೇರಿಸಿಕೊಂಡು ಚಿತ್ರಾನ್ನದ ಗೊಜ್ಜು ತಯಾರಿಸಿಕೊಳ್ಳಬೇಕು. ಈ ಗೊಜ್ಜನ್ನು ಅನ್ನಕ್ಕೆ ಕಲಸಿ ತಿನ್ನಬೇಕು. ಹೇರಳದವಾದ ವಿಟಮಿನ್ಗಳ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ.
ಆಯುರ್ವೇದ ಹಾಗೂ ಮನೆ ಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಗೆ ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಸಂಪರ್ಕಿಸಿ.
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
ಭಾರತದಲ್ಲಿ 34 ಲಕ್ಷ ದಾಟಿದ ಕೊರೊನಾ ಕೇಸ್: 24 ಗಂಟೆಯಲ್ಲಿ 1,021 ಸಾವು
ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬೇಕು- ಯುಜಿಸಿ ಸುತ್ತೋಲೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಮೈದಾನಕ್ಕಿಳಿದ ರೆಡ್ ಆರ್ಮಿ: ಬ್ಲೂಪ್ರಿಂಟ್ ರೆಡಿ ಮಾಡಿದ ತ್ರಿಮೂರ್ತಿಗಳು…!
ಯಾದಗಿರಿಯಲ್ಲಿ ದಿಢೀರ್ರಾಗಿ ಜಿಲ್ಲಾಧಿಕಾರಿ ವರ್ಗಾವಣೆ: ನೂತನ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಅಧಿಕಾರ ಸ್ವೀಕಾರ
ಮತ್ತೆ ಭಾರತ-ಚೀನಾ ಯೋಧರ ಮುಖಾಮುಖಿ-ಪಾಕ್ ಸೈನಿಕರಿಂದಲೂ ಯುದ್ಧ ತಾಲೀಮು..!