ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಅನ್ನುವ ಹಿರಿಯರ ಮಾತು ಕೊರೊನಾ ಬರುವ ಮುಂಚೆ ಮರೆತು ಹೋಗಿತ್ತು. ಆದ್ರೆ ಕೊರೊನಾ ಈಗ ಜೀವನವನ್ನು ಬದಲಿಸಿದೆ. ಯಾವುದು ಬೇಕಾಗಿಲ್ಲ ಅಂತ ಬದಿಗಿಟ್ಟಿದ್ದೆವೋ ಅದು ಈಗ ಬೇಕಾಗಿದೆ. ಆಯುರ್ವೇದ ಚಿಕಿತ್ಸೆಯೇ ಉತ್ತಮ ಅನ್ನುವ ನಿರ್ಧಾರಕ್ಕೆ ಬರುವಂತಾಗಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಅವಶ್ಯಕ ಅನ್ನುವುದು ಈಗ ಖಚಿತವಾಗಿದೆ. ಅದಕ್ಕಾಗಿ ಮನೆ ಮದ್ದು ಅತ್ಯುತ್ತಮ ಅನ್ನುವುದು ಸಾಭೀತಾಗಿದೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ದಿನಕ್ಕೊಂದು ಮನೆ ಮದ್ದು ಹೇಳಿಕೊಡುತ್ತಿದೆ. ಇವತ್ತು ಸುಗಂಧಿ ಬಳ್ಳಿ ಆರೋಗ್ಯಕ್ಕೆ ಹೇಗೆ ಸಹಾಯಕ ಅನ್ನುವುದನ್ನು ತಿಳಿಸಿದೆ.
ಸುಗಂಧಿ ಬಳ್ಳಿ ಇದನ್ನು ಕನ್ನಡದಲ್ಲಿ ಹಾಲು ಬ ಳ್ಳಿ ಅಂತಲೂ, ಸಂಸ್ಕೃತದಲ್ಲಿ ಸಾರಿವಾ ಅಂತಲೂ ಕರೆಯುತ್ತಾರೆ. ಇದನ್ನು ಬೇರು ಸಮೇತ ಕಿತ್ತು, ಎಲೆಗಳನ್ನು ತೊಳೆದು, ಜಜ್ಜಿ ಕಷಾಯ ಮಾಡಿಕೊಂಡು ಕುಡಿಯಬೇಕು. ಸುಗಂಧಿ ಬಳ್ಳಿಯ ಬೇರಿನ ಕಷಾಯ ಜ್ವರ, ತಲೆನೋವು, ನೆಗಡಿಯನ್ನು ಬಹುಬೇಗ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಇದರಲ್ಲಿ ರಕ್ತ ಶುದ್ಧಿ ಮಾಡುವ ಗುಣವಿದೆ.
ಸುಗಂಧಿ ಬಳ್ಳಿಯನ್ನು ರುಚಿಗಾಗಿಯೂ ಬಳಸಬಹುದು. ಹಾಲಿನೊಂದಿಗೆ ಸುಗಂಧಿ ಬಳ್ಳಿಯ ಬೇರು ಸೇರಿಸಿ ಕುಡಿಯುವುದರಿಂದ ಸುವಾಸನೆಯ ಜೊತೆಗೆ ರುಚಿಯೂ ಹೆಚ್ಚುತ್ತದೆ. ಅಷ್ಟೇ ಅಲ್ಲ ಆರೋಗ್ಯಕ್ಕೂ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ.
ಸುಗಂಧಿ ಬಳ್ಳಿಯ ಉಪಯೋಗ ಇಷ್ಟೇ ಅಲ್ಲ. ಅದು ಸಾಕಷ್ಟು ವೈದ್ಯಕೀಯ ಗುಣಗಳನ್ನು ಹೊಂದಿದೆ. ಆದ್ರೆ ಸುಗಂಧಿ ಬಳ್ಳಿಯನ್ನು ಉಪಯೋಗಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಸಂಪರ್ಕಿಸಿ.
ರಕ್ತ ಮೂಲವ್ಯಾಧಿಗೆ ಮಜ್ಜಿಗೆ ಮ್ಯಾಜಿಕ್..!
ರಕ್ತಮೂಲವ್ಯಾಧಿಗೆ ಸುಲಭ ಪರಿಹಾರ- ಮನೆಯಲ್ಲೇ ಇದೆ ರಾಮಬಾಣ
ಚೇಳು ಕಚ್ಚಿದಾಗ ಏನು ಮಾಡಬೇಕು..? ಆಯುರ್ವೇದದಲ್ಲಿದೆ ಸರಳ, ಸುಲಭ ಪರಿಹಾರ
ಬಾಯಾರಿಕೆ, ಪಿತ್ತ ವಿಕಾರಕ್ಕೆ ಮನೆಯಲ್ಲೇ ಮದ್ದು- ಗುಲಾಬಿ, ಸೀಬೆ ಹೂವಿನಲ್ಲಿದೆ ಆಯುರ್ವೇದ ಚಿಕಿತ್ಸೆ..!
ಮನೆಯಲ್ಲಿ ಇದ್ದರೆ ಬಿಲ್ವಪತ್ರೆ, ದೇಹಕ್ಕೆ ಬೇಕಾಗಿಲ್ಲ ಮಾತ್ರೆ..!
ಕಾಮಾಲೆ ರೋಗಕ್ಕೆ ಬಿಲ್ವಪತ್ರೆಯಲ್ಲಿ ಮನೆಮದ್ದು- ಒಂದೇ ವಾರದಲ್ಲಿ ಪಕ್ಕಾ ರಿಸಲ್ಟ್..!