ಆರೋಗ್ಯವೇ ಭಾಗ್ಯ ಅನ್ನುವುದು ಹಿಂದಿನಿಂದ ಬಂದಿರುವ ವೇದವಾಕ್ಯ. ಕೊರೊನಾ ಕಾಲದಲ್ಲಂತೂ ಮನೆಮದ್ದುಗಳದ್ದೇ ಮಾತು. ಪುರಾಣಿಕ್ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯ ಪರಿಷತ್ ಕೊರೊನಾ ಜೊತೆಗೆ ಹೋರಾಡಲು ಬೇಕಾಗುವ ರೋಗ ನಿರೋಧಕ ಶಕ್ತಿಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂದು ತಿಳಿಸಿಕೊಡುತ್ತಿದೆ. ಹೇರಳವಾಗಿ ವಿಟಮಿನ್ಗಳು ಸಿಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಮನೆ ಮದ್ದನ್ನು ಸುಲಭವಾಗಿ ತಯಾರಿಸಿಕೊಳ್ಳುವ ವಿಧಾನಗಳನ್ನು ತಿಳಿಸಿಕೊಡುತ್ತಿದೆ.
ಒಂದು ಕಟ್ಟು ಪುದೀನ ತೆಗೆದುಕೊಂಡು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು. ಖಾರಕ್ಕೆ ಬೇಕಾದಷ್ಟು ಒಣಮೆಣಸಿನಕಾಯಿ ಹಾಕಿಕೊಳ್ಳಿ. ಇದರ ಜೊತೆಗೆ 4-5 ಬೆಳ್ಳುಳ್ಳಿ, ಬಿಳಿ ಈರುಳ್ಳಿ, ಹಸಿಶುಂಠಿ ಮತ್ತು ಜೀರಿಗೆ ಸೇರಿಸಿಕೊಂಡು ತುಪ್ಪದಲ್ಲಿ ಫ್ರೈ ಮಾಡಿಕೊಳ್ಳಿ. ಫ್ರೈ ಮಾಡಿಕೊಂಡ ವಸ್ತುಗಳಿಗೆ ರುಚಿಗೆ ತಕ್ಕಷ್ಟು ಹುಣಸೆ ಹಣ್ಣು ಸೇರಿಸಿಕೊಂಡ ಮಿಕ್ಸಿಗೆ ಹಾಕಿ ರುಬ್ಬಿ. ಹೀಗೆ ತಯಾರಾದ ಚಟ್ನಿಯನ್ನು ಅನ್ನದ ಜೊತೆಗೆ ಅಥವಾ ಚಪಾತಿ ಜೊತೆಗೆ ಸೇರಿಸಿಕೊಂಡು ತಿನ್ನಬಹುದು.
ಪುದೀನಾ ಚಟ್ನಿಯಿಂದ ಏನು ಲಾಭ ಅನ್ನುವವರಿಗೆ ಉತ್ತರವೂ ಇಲ್ಲೇ ಇದೆ. ಕೊರೊನಾ ವಿರುದ್ಧ ಹೋರಾಟ ಮಾಡಬೇಕು ಅಂದ್ರೆ ದೇಹದಲ್ಲಿ ಹೇರಳವಾಗಿ ವಿಟಮಿನ್ಸ್ ಮತ್ತು ರೋಗನಿರೋಧಕ ಶಕ್ತಿ ಇರಬೇಕು. ಪುದೀನಾ ವಿಟಮಿನ್ C ಯನ್ನು ಒದಗಿಸಿಕೊಟ್ಟರೆ, ಹಸಿ ಶುಂಠಿಯಿಂದ ಗ್ಯಾಸ್ಟ್ರಿಕ್ ಮತ್ತು ಇನ್ಫೆಕ್ಷನ್ಗಳು ದೂರವಾಗುತ್ತವೆ. ಜೀರಿಗೆ ವಾಯು ಮತ್ತು ವಾತಕ್ಕೆ ಹೇಳಿ ಮಾಡಿಸಿದ ಮನೆಮದ್ದು. ಬಿಳಿ ಈರುಳ್ಳಿ ವಿಟಮಿನ್ 12ನ್ನು ಒದಗಿಸಿಕೊಡುವ ಜೊತೆಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ನರ ದೌರ್ಬಲ್ಯವನ್ನು ದೂರ ಮಾಡುತ್ತದೆ. ಹಿಗಾಗಿ ಒಂದು ಪುದೀನಾ ಚಟ್ನಿಯಿಂದ ಹಲವು ಲಾಭಗಳಿವೆ.
ಪುದೀನಾದಿಂದ ಮಾಡಿದ ಚಟ್ನಿಯನ್ನು ಎಲ್ಲರೂ ತಿನ್ನಬಹುದು. ಶರೀರಕ್ಕೆ ಯಾವುದೇ ತೊಂದರೆ ಇಲ್ಲ. 60 ವರ್ಷಕ್ಕೂ ಮೇಲ್ಪಟ್ಟವರಿಗೆ ಇದು ತುಂಬಾ ಉಪಯೋಗಕಾರಿ. ಗ್ಯಾಸ್ಟ್ರಿಕ್, ಜೀರ್ಣಕ್ರಿಯೆ ಸಮಸ್ಯೆಯನ್ನು ದೂರ ಮಾಡುತ್ತದೆ. ಕೊರೊನಾ ಓಡಿಸಲು ಬೇಕಾಗುವ ಶಕ್ತಿ ನೀಡಿ ಆರೋಗ್ಯಕರವಾಗಿ ಬದುಕಲು ಈ ಚಟ್ನಿ ರಾಮಬಾಣ.
ಆಯುರ್ವೇದದಲ್ಲಿ ಸಿಗುವ ಮದ್ದುಗಳನ್ನು ಕೆಳಗಿನ ನಂಬರ್ಗೆ ಕರೆ ಮಾಡಿ ಪಡೆದುಕೊಳ್ಳಬಹುದು.
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್