ಆಯುರ್ವೇದಲ್ಲಿ ಆಸ್ಪತ್ರೆಗೆ ಹೋಗಿಯೇ ಔಷಧಿ ,ಮಾಡಬೇಕು ಎಂದಿಲ್ಲ. ಸಣ್ಣ ಸಣ್ಣ ಕಾಯಿಲೆಗಳಿಗೆ ಮತ್ತು ದೇಹದಲ್ಲಿನ ತೊಂದರೆಗಳಿಗೆ ಮನೆಮದ್ದನ್ನು ಬಳಸಿಕೊಳ್ಳಬಹುದು. ಖರ್ಚು ಕಡಿಮೆ ಜೊತೆಗೆ ಆರೋಗ್ಯದ ಮೇಲೆ ಸೈಡ್ ಎಫೆಕ್ಟ್ ಇಲ್ಲದ ಔಷಧಿ ಅಂದರೆ ಆಯುರ್ವೇದ ಮಾತ್ರ. ಆಯುರ್ವೇದದಲ್ಲಿ ಮನೆಮದ್ದು ಅತ್ಯಂತ ಹೆಚ್ಚು ಉಪಯೋಗಕಾರಿ. ಹೀಗಾಗಿ ಪುರಾಣಿಕ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ದಿನಕ್ಕೊಂದು ಮನೆಮದ್ದು ಹೇಳಿಕೊಡುತ್ತಿದೆ.
ಪಿತ್ತ ವಿಕಾರ ಮತ್ತು ಬಾಯಾರಿಕೆ ತೊಂದರೆ ಸಾಮಾನ್ಯ ಕಾಯಿಲೆ ಆಗಿದೆ. ಇದಕ್ಕೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು. ಪಿತ್ತವಿಕಾರ ಮತ್ತು ಬಾಯಾರಿಕೆ ತೊಂದರೆಯನ್ನು ನಿವಾರಿಸಲು ಪುರಾಣಿಕ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಮನೆ ಮದ್ದು ಹೇಳಿಕೊಟ್ಟಿದೆ.
ಮೊದಲು ಸೀಬೆ ಹೂವು ಅನ್ನು 1 ತೊಲದಷ್ಟು ತೆಗೆದುಕೊಳ್ಳಬೇಕು. ಜೊತೆಗೆ 1 ತೊಲದಷ್ಟು ಗುಲಾಬಿ ಹೂವು ಮತ್ತು 1 ತೊಲ ಲಾವಂಚವನ್ನು ತೆಗೆದುಕೊಂಡು ತೊಳೆದುಕೊಳ್ಳಬೇಕು. ಇದರ ಜೊತೆಗೆ ತಲಾ 2 ಕಾಳು ಏಲಕ್ಕಿ, ಲವಂಗ ಮತ್ತು ಮೆಣಸನ್ನು ಸೇರಿಸಿಕೊಳ್ಳಬೇಕು.ಇವೆಲ್ಲವನ್ನು ಸೇರಿಸಿ ಚೆನ್ನಾಗಿ ಅರೆದು ನೀರಿನ ಜೊತೆ ಚೆನ್ನಾಗಿ ಬೆರಸಬೇಕು. ಆಮೇಲೆ ಶೋಧನೆ ಮಾಡಬೇಕು. ನಂತರ ಕಲ್ಲು ಸಕ್ಕರೆಯನ್ನು ಸೇರಿಸಿ ಕುಡಿಯುವುದರಿಂದ ಬಾಯೂರಿ, ಬಾಯಾರಿಕೆ ಮತ್ತು ಪಿತ್ತ ವಿಕಾರದಂತಹ ಕಾಯಿಲೆಗಳು ದೂರವಾಗುತ್ತದೆ.
ಯಾವುದೇ ಕಾಯಿಲೆಗಳಿದ್ದರೂ ಮನೆ ಮದ್ದು ಮಾಡುವುದು ಒಳ್ಳೇಯದು. ಆದರೆ ಕಾಯಿಲೆ ಬಗ್ಗೆ ವೈದ್ಯರಲ್ಲಿ ಸಲಹೆ ಪಡೆಯುವುದು ಉತ್ತಮ. ಆಯುರ್ವೇದದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?