ಕೊರೊನಾ ಕಾಲದಲ್ಲಿ ಕಷಾಯಗಳಿಗೆ ಸಖತ್ ಡಿಮ್ಯಾಂಡ್. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದೇ ನಮ್ಮ ಪುರಾತನ ಕಾಲದ ಬೇರುಗಳು ಮತ್ತು ಅವುಗಳಿಂದ ಮಾಡುವ ಕಷಾಯಗಳು. ಹಲವು ಮನೆ ಮದ್ದುಗಳು ಕೂಡ ಇಮ್ಯುನಿಟಿ ಬೂಸ್ಟರ್ಗಳಾಗಿ ಕೆಲಸ ಮಾಡುತ್ತಿವೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ಕಷಾಯ ಮಾಡಿಕೊಂಡು ಕುಡಿಯುವ ವಿಧಾನವನ್ನು ಪುರಾಣಿಕ ಮಠ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ತಿಳಿಸಿಕೊಟ್ಟಿದೆ.
ತಲೆ ನೋವು, ಕೆಮ್ಮು, ನೆಗಡಿ, ಜ್ವರ ಮಳೆಗಾಲದ ಸೀಸನ್ನಲ್ಲಿ ಕಾಮನ್. ಆದ್ರೆ ಈಗ ಇವೆಲ್ಲಾ ಬಂದ್ರೆ ಕೊರೊನಾ ಭಯವೂ ಜೊತೆಗಿರುತ್ತದೆ. ಆರೋಗ್ಯವಾಗಿ ಇರಬೇಕು ಅಂದ್ರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಇರಬೇಕು. ಮನೆಯಲ್ಲೇ ಸಿಗುವ ವಸ್ತುಗಳಿಂದ, ಕಷಾಯ ಮಾಡಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಬಹುದು.
ಕಷಾಯಕ್ಕೆ ಬೇಕಾದ ಸಾಮಾಗ್ರಿಗಳು
ಕಷಾಯ ಮಾಡುವ ವಿಧಾನ
ಹಸಿ ಶುಂಠಿಯನ್ನು ಜಜ್ಜಿ, ದನಿಯಾ, ಜೀರಿಗೆ ಜೊತೆಗೆ ಹಾಕಿ 2 ಗ್ಲಾಸ್ ನೀರಿನಲ್ಲಿ ಕುದಿಸಬೇಕು. ರುಚಿಗೆ ತಕ್ಕಷ್ಟು ಕಲ್ಲು ಸಕ್ಕರೆಯನ್ನು ಕೂಡ ಸೇರಸಿಕೊಳ್ಳಿ. ನೀರು 1 ಗ್ಲಾಸ್ನಷ್ಟು ಇರುವಾರ ಕಷಾಯವನ್ನು ಶೋಧಿಸಬೇಕು.
ಈ ಕಷಾಯನವನ್ನು ದಿನಕ್ಕೆ ಮೂರರಿಂದ 4 ಬಾರಿ ಸೇವಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚುತ್ತವೆ. ಈ ಕಷಾಯಕ್ಕೆ ಸ್ವಲ್ಪ ಚಕ್ಕೆ ಮತ್ತು ಲವಂಗವನ್ನೂ ಬೆರೆಸಿಕೊಂಡರೆ ಕುಡಿಯಲು ಉತ್ತಮವಾಗಿರುತ್ತದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?