Featured
ಸೊಪ್ಪುಗಳ ಲೋಕದಲ್ಲಿ ಇದುವೇ ರಾಜ- ಆಯುರ್ವೇದದಲ್ಲಿ ಅನಾರೋಗ್ಯ ಓಡಿಸುವ ಸೂಪರ್ ಹೀರೊ..!

ಸೊಪ್ಪುಗಳ ಲೋಕದಲ್ಲಿ ಇದಕ್ಕೆ ರಾಜ ಮರ್ಯಾದೆ ಇದೆ. ಆಯುರ್ವೇದದಲ್ಲಿ ಇದಕ್ಕೆ ದೊಡ್ಡ ಪ್ರಾಮುಖ್ಯತೆ ಇದೆ. ಕ್ಯಾಲೋರಿ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ವನಗಣೆ ಸೊಪ್ಪು ಕೊರೊನಾ ಕಾಲದ ಸೂಪರ್ ಹಿರೋ…!ಸೊಪ್ಪುಗಳಲ್ಲೇ ಹೈ ಕ್ಯಾಲರಿ ಇರುವುದು ವನಗಣೆ ಸೊಪ್ಪಿನಲ್ಲಿ. ಬೆಂಗಳೂರು ಭಾಗದಲ್ಲಿ ಹೆಚ್ಚಾಗಿ ಈ ಸೊಪ್ಪನ್ನು ಉಪಯೋಗಿಸುತ್ತಾರೆ. ಕೋಲಾರಾ, ಚಿಕ್ಕಬಳ್ಳಾಪುರ, ತುಮಕೂರು ರಾಮನಗರ ಕಡೆಯ ಹಳ್ಳಿ ಜನರು ಈ ಸೊಪ್ಪಿನ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಎಲ್ಲಾ ವಿಟಮಿನ್ಗಳು ಮತ್ತು ರೋಗನಿರೋಧಕ ಶಕ್ತಿಯ ಜೊತೆಗೆ ಔಷಧೀಯ ಗುಣಗಳಲ್ಲಿ ಇದರಲ್ಲಿದೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಜನರಿಗಾಗಿ ವನಗಣೆ ಸೊಪ್ಪಿನ ವಿಶೇಷತೆ ಮತ್ತು ಉಪಯೋಗಿಸಬೇಕಾದ ರೀತಿಯನ್ನು ತಿಳಿಸಿಕೊಡುತ್ತಿದೆ.
ಏನು ಮಾಡಬೇಕು..?
ವನಗಣೆ ಸೊಪ್ಪನ್ನು ತೆಗೆದುಕೊಂಡು ಬಿಸಿನೀರಿಗೆ ಅರಷಿಣದ ಪುಡಿ ಹಾಕಿಕೊಂಡು ಚೆನ್ನಾಗಿ ತೊಳೆಯಬೇಕು. ಎರಡು ಲೀಟರ್ ನೀರಲ್ಲಿ ಬೇಯಿಸಿಕೊಳ್ಳಬೇಕು. ಸೊಪ್ಪು ನೀರಲ್ಲಿ ಇಂಗಬೇಕು. ನೀರು ಬಸಿದು ಬಸ್ಸಾರು ಮಾಡಿ ಚಪಾತಿ ಅಥವಾ ಮುದ್ದೆ ಜೊತೆ ತಿನ್ನಬಹುದು. ಇದರಿಂದ ಆರೋಗ್ಯ ಮತ್ತು ವಿಟಮಿನ್ಗಳೂ ಸಿಗುತ್ತದೆ. ಅಷ್ಟೇ ಅಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಇನ್ನು ಸೊಪ್ಪು ನೀರಿನಲ್ಲಿ ಇಂಗಿದ ಬಳಿಕ ಅದನ್ನು ಪಾತ್ರೆಯಲ್ಲಿ ಹಾಕಿ ಒಣಗಿಸಬೇಕು. ಸೊಪ್ಪು ಒಣಗಿದ ಮೇಲೆ ಅದನ್ನು ಪುಡಿ ಮಾಡಿಕೊಂಡು ಉಪಯೋಗಿಸಿಕೊಳ್ಳಬಹುದು. ಸೊಪ್ಪಿನ ಪುಡಿಯನ್ನು ಕೂಡ ಬಸ್ಸಾರು ಮಾಡಿಕೊಂಡು ಅನ್ನ, ಚಪಾತಿ ಮತ್ತು ಮುದ್ದೆ ಜೊತೆಗೆ ತಿನ್ನಬಹುದು. ಅಷ್ಟೇ ಅಲ್ಲ ಪುಡಿಯ ಜೊತೆಗೆ ಕಲ್ಲು ಸಕ್ಕರೆ ಅಥವಾ ಜೇನು ತುಪ್ಪ ಸೇರಿಸಿಕೊಂಡು ತಿನ್ನಬಹುದು.
ಯಾರಿಗೆ ಲಾಭ..?
ವನಗಣೆ ಸೊಪ್ಪು ವಯಸ್ಸಾದವರಿಗೆ, ಶುಗರ್ ಪೇಷೆಂಟ್ಗಳಿಗೆ, ಧನುರ್ವಾಯು ಕಾಯಿಲೆ ಇರುವವರಿಗೆ, ಅಸ್ತಮಾ, ನಿಶ್ಶಕ್ತಿ ಹೊಂದಿರುವವರಿಗೆ ಒಳ್ಳೇಯ ಮನೆಮದ್ದು. ಜೀರ್ಣಕ್ರಿಯೆ ಸರಿಯಿಲ್ಲದವರು ವನಗಣೆ ಸೊಪ್ಪಿನ ಸಾರು ತಿಂದರೆ ಕಾಯಿಲೆ ದೂರವಾಗುತ್ತದೆ. ವನಗಣೆ ಸೊಪ್ಪಿನಿಂದ ನರಗಳ ದೌರ್ಬಲ್ಯ, ನಿಶ್ಶಕ್ತಿ, ಅಜೀರ್ಣ, ಗ್ಯಾಸ್ಸ್ಟ್ರಿಕ್ಗಳನ್ನು ನಿಯಂತ್ರಿಸಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚುವುದರಿಂದ ಕಾಯಿಲೆಗಳಿಂದಲೂ ದೂರ ಇರಬಹುದು.
ಆಯುರ್ವೇದ ಚಿಕಿತ್ಸೆ ಮತ್ತು ಮನೆಮದ್ದುಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಕೆಳಗಿನ ನಂಬರ್ಗೆ ಕರೆಮಾಡಿ:
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್