ಹೊಸಪೇಟೆ : ಹೊಸಪೇಟೆ ಪಟ್ಟಣ ಠಾಣಾ ಪೋಲಿಸರ ಭರ್ಜರಿ ಕಾರ್ಯಾಚರಣೆ, ಗೂಡ್ಸ್ ವಾಹನ ಹಾಗೂ ಟಾಟಾಪಿಕಪ್ ವಾಹನದಲ್ಲಿ ಶ್ರೀ ಗಂಧ ಸಾಗಿಸುತ್ತಿದ್ದ ನಾಲ್ಕು ಜನರು ಪೊಲೀಸ ಬಲೆಗೆ ಬಿದ್ದಿದ್ದಾರೆ. ಹೊಸಪೇಟೆಯ ಸಂಡೂರು ರಸ್ತೆಯಿಂದ ಸೀರಸನಕಲ್ಲು ಮಾರ್ಗವಾಗಿ ಗಂಧದ ತುಂಡುಗಳ ಸಾಗಾಟ ಮಾಡುತ್ತಿದ್ದ ಮಾಹಿತಿ ತಿಳಿದು, ಪೊಲೀಸರು ನಾಲ್ಕು ಜನ ಖತರ್ನಾಕ್ ಕಳ್ಳರನ್ನ ಬಂಧಿಸಿದ್ದಾರೆ.
ಆರೋಪಿಗಳು ಎಲ್ ಗಂಗಾನಾಯ್ಕ್, ಮಹಾಂತೇಶ್, ಎಚ್ ಚೆನ್ನಪ್ಪ, ಹಾಗು ಎಚ್ ರಾಮಣ್ಣ ಎಂದು ಗುರುತಿಸಲಾಗಿದೆ. ಸುಮಾರು 30 ಲಕ್ಷದ 45 ಸಾವಿರ ಮೌಲ್ಯದ ಶ್ರೀಗಂಧ ಸಾಗಿಸುತ್ತಿದ್ದ ಎರಡು ವಾಹನ ಜಪ್ತಿ ಮಾಡಿದ್ದಾರೆ. ಇನ್ನು ಪರಾರಿಯಾಗಿರುವ ಇಬ್ಬರಿಗಾಗಿ ಎಸ್ಪಿ ಬಿ.ಎಲ್ ಶ್ರೀ ಹರಿಬಾಬು, ಅಡಿಷನಲ್ ಎಸ್ಪಿ ಸಲೀಮ್ ಪಾಷಾ, ಶ್ರೀ ಶರಣಬಸವೇಶ್ವರ, ಡಿ.ಎಸ್ಪಿ ಹಾಗೂ ಹೊಸಪೇಟೆ ಪಟ್ಟಣ ಪಿ.ಐ ಹಾಗು ಸಿಬ್ಬಂಧಿ ವರ್ಗ ಅಂತರರಾಜ್ಯ ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ ವರ್ಗಕ್ಕೆ ಎಸ್ಪಿ ಬಿ.ಎಲ್ ಶ್ರೀ ಹರಿಬಾಬು ಬಹುಮಾನ ಘೋಷಣೆ ಮಾಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?