ದೇಶ-ವಿದೇಶ
ಆಂಧ್ರ ಸಿಎಂ ಜಗನ್ಗೆ ಕರ್ನಾಟಕದಲ್ಲಿ ಸರ್ಕಾರಿ ನೌಕರರ ಹಾಲಿನ ಅಭಿಷೇಕ : ಯಾಕೆ..? ಎಲ್ಲಿ ಗೊತ್ತಾ..?

ರೈಸಿಂಗ್ ಕನ್ನಡ : ಯೆಸ್. ನಂಬೋಕೆ ಅಸಾಧ್ಯವಾದ್ರೂ ಇದು ಸತ್ಯ. ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಫ್ಲೆಕ್ಸ್ಗಳಿಗೆ ಕರ್ನಾಟಕದಲ್ಲಿ ಹಾಲಿನ ಅಭಿಷೇಕ ಮಾಡಲಾಗಿದೆ. ಹೀಗೆ ಹಾಲಿನ ಅಭಿಷೇಕ ಮಾಡಿದವರೆಲ್ಲಾ ಕೆಎಸ್ಆರ್ಟಿಸಿ ನೌಕರರು ಅನ್ನೋದು ವಿಶೇಷ. ಯಾಕಂದ್ರೆ, ಜಗನ್ ಸಿಎಂ ಆದ ಬಳಿಕ ಆಂಧ್ರ ಪ್ರದೇಶ ಸಾರಿಗೆ ಇಲಾಖೆಯನ್ನ ಸರ್ಕಾರದೊಂದಿಗೆ ವಿಲೀನ ಮಾಡೋದಾಗಿ ಘೋಷಣೆ ಮಾಡಿದ್ರು. ಅದಕ್ಕೆ ತಂಕ್ಕತೆ ಆಂಧ್ರದಲ್ಲಿ ಕಮಿಟಿ ರಚನೆ ಮಾಡಲಾಗಿದೆ.
ಅದರಂತೆ ಕರ್ನಾಟಕದಲ್ಲೂ ಕೂಡ ಸಾಕಷ್ಟು ವರ್ಷಗಳಿಂದ ಈ ರೀತಿಯ ಕೂಗು ಹಾಗೂ ಒತ್ತಾಯವಿದೆ. ಕೆಎಸ್ಆರ್ಟಿಯ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡುವಂತೆ, ಸರ್ಕಾರದೊಂದಿಗೆ ವಿಲೀನ ಮಾಡುವಂತೆ ಬಹುದಿನಗಳ ಬೇಡಿಕೆ ಇದೆ. ಆದ್ರೆ, ರಾಜ್ಯದಲ್ಲಿ ಇನ್ನೂ ಈಡೇರಿಲ್ಲ. ಹೀಗಾಗಿ, ಆಂಧ್ರದಲ್ಲಿ ಮಾಡಿರುವಂತೆ ಕರ್ನಾಟಕದಲ್ಲಿ ಸಾರಿಗೆ ಇಲಾಖೆಯನ್ನ ಸರ್ಕಾರಿ ನೌಕರರು ಎಂದು ಪರಿಗಣಿಸಿ ಅಂತ ಬೇಡಿಕೆ ಇಡಲಾಗಿದೆ.
ಹೀಗಾಗಿಯೇ, ಆಂಧ್ರ ಸಿಎಂ ಜಗನ್ಗೆ ಹಾಲಿನ ಅಭಿಷೇಕ ಮಾಡಿ, ಜೈಕಾರ ಕೂಡ ಹಾಕಿದ್ದಾರೆ. ಆಂಧ್ರ ರೀತಿಯಲ್ಲೇ ನಮ್ಮಲ್ಲೂ ಮಾಡಿ ಎಂದು ಹೀರೇಕೇರೂರು ಕೆಎಸ್ಆರ್ಟಿಸಿ ಬಸ್ ಡಿಪೋ ಸಿಬ್ಬಂದಿ, ಜಗನ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?