Featured
ಭಾರತೀಯ ಮೂಲದ ಇಬ್ಬರಿಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ – ದೇಶವೇ ಹೆಮ್ಮೆಪಡುವ ವಿಚಾರ

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಭಾರತೀಯ ಮೂಲದ ಇಬ್ಬರೂ ಸಾಧಕರಿಗೆ ಅಮೆರಿಕ ಪ್ರತಿಷ್ಠಿತ ವಲಸಿಗ ಸಾಧಕರ ಪ್ರಶಸ್ತಿ ನೀಡಿದೆ. ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ ನೆನಪಿಗಾಗಿ ಅಮೆರಿಕ ಫೌಂಡೇಷನ್ ನೀಡುವ ಪ್ರತಿಷ್ಠಿತ ಗೌರವ ಇದಾಗಿದೆ. ಭಾರತ ಮೂಲದ ಸಿದ್ದಾರ್ಥ ಮುಖರ್ಜಿ ಮತ್ತು ಹಾರ್ವರ್ಡ್ ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೋ. ರಾಜ್ ಶೆಟ್ಟಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನ್ಯೂಯಾರ್ಕ್ನ ಕಾರ್ನೀಜ್ ಕಾರ್ಪೋರೇಷನ್ ಈ ಇಬ್ಬರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕೊರೊನಾ ಸಂಕಷ್ಟದಲ್ಲಿ ಆರೋಗ್ಯ ಕ್ಷೇತ್ರದ ಬಿಕ್ಕಟ್ಟು ಎದುರಿಸುವಲ್ಲಿ ಈ ಇಬ್ಬರೂ ಸಲ್ಲಿಸಿರುವ ಸೇವೆಯನ್ನ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರೊ. ರಾಜ್ ಶೆಟ್ಟಿ ನವದೆಹಲಿಯಲ್ಲಿ ಮೂಲದವರು. ಹಾರ್ವರ್ಡ್ ವಿವಿಯ ಇತಿಹಾಸದಲ್ಲೇ ಈ ಪ್ರಶಸ್ತಿ ಪಾತ್ರರಾಗುತ್ತಿರೋ ಅತಿ ಕಿರಿಯ ಪ್ರಾಧ್ಯಾಪಕರಾಗಿದ್ದಾರೆ. ಶೆಟ್ಟಿ ಅವರು ಆಪರ್ಚ್ಯುನಿಟಿ ಅನ್ಸೈಟ್ಸ್ ಹೆಸರಿನ ಸಂಶೋಧನ ಪ್ರಯೋಗಾಲಯವನ್ನ ನಡೆಸುತ್ತಿದ್ದಾರೆ. ಜನರ ಆರ್ಥಿಕ ವ್ಯವಸ್ಥೆಯ ಮೇಲೆ ಕೊರೊನಾ ಪರಿಣಾಮ ಕುರಿತ ಅಧ್ಯಯನಕ್ಕೆ ಅವರು ಅಗತ್ಯ ಸಂಪನ್ಮೂಲ ಒದಗಿಸಿದ್ದರು. ಇದು ನೀತಿ ನಿರೂಪಕರಿಗೆ ವಾಸ್ತವ ಸಂಗತಿಯನ್ನು ಆದರಿಸಿ, ಅಗತ್ಯ ಆಡಳಿತ ತೀರ್ಮಾನಗಳನ್ನು ಕೈಗೊಳ್ಳಲು ಅಮೆರಿಕಾಗೆ ನೆರವಾಗಿದೆ.
ಇನ್ನೂ ದೆಹಲಿ ಮೂಲದವರೇ ಆದ ಸಿದ್ದಾರ್ಥ ಮುಖರ್ಜಿ ಹೆಸರಾಂತ ಜೀವಶಾಸ್ತ್ರಜ್ಞರು. ಹಲವು ಕೃತಿಗಳನ್ನು ರಚಿಸಿರುವ ಅವರು ಪ್ರತಿಷ್ಠಿತ ಪುಲಿಟ್ಜಿರ್ ಪ್ರಶಸ್ತಿ ಪಡೆದಿದ್ದಾರೆ. ಅವರು ಕೊಲಂಬಿಯಾ ವಿವಿಯ ಬೋಧಕ ಸಿಬ್ಬಂದಿ ಆಗಿದ್ದು, ಭಾರತ ಸರ್ಕಾರ 2014ರಲ್ಲಿ ಪದ್ಮಶ್ರೀ ಗೌರವ ನೀಡಿದೆ. ಅವರು ನ್ಯೂಯಾರ್ಕ್ ರಾಜ್ಯಪಾಲರು ರಚಿಸಿರುವ 15 ಸದಸ್ಯರ ಬ್ಲೂರಿಬ್ಬರನ್ ಕಮಿಷನ್ ಸದಸ್ಯರೂ ಆಗಿದ್ದಾರೆ. ಒಟ್ಟಿನಲ್ಲಿ ಇಂತಹ ಸಾಧಕರು ನಮ್ಮ ದೇಶದವರು ಅನ್ನೋದು ಹೆಮ್ಮೆಯ ಸಂಗತಿಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?