ಚಿತ್ರದುರ್ಗ : ಆ್ಯಂಬುಲೆನ್ಸ್ ವಾಹನಗಳು ಗಡಿಬಿಡಿಯಲ್ಲಿ ಇರುತ್ವೆ. ರೋಗಿಗಳ ಪ್ರಾಣ ಉಳಿಸೋಕೆ ಇನ್ನಿಲ್ಲದ ಕಸರತ್ತು ಪಡಬೇಕಾಗುತ್ತೆ. ಆದ್ರೆ, ಒಬ್ಬರನ್ನು ಉಳಿಸಲು ಹೋಗಿ, ಮತ್ತೊಬ್ಬರ ಪ್ರಾಣ ತೆಗೆಯಬಾರದು. ಆದ್ರೆ, ಚಿತ್ರದುರ್ಗದಲ್ಲಿ ಆಗಬಾರದ್ದೇ ಆಗಿ ಹೋಗಿದೆ. ರಸ್ತೆ ದಾಟುತ್ತಿದ್ದ ಯುವತಿಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದು, ಯುವತಿ ಸ್ಥಳದಲ್ಲೇ ಮೃತಪಟ್ಟಿರೋ ದಾರುಣ ಘಟನೆ ನಡೆದಿದೆ.
ಚಿತ್ರದುರ್ಗ ಬಳಿಯ ಸಿಂಗಾಪುರ ಗ್ರಾಮದ ಬಳಿ ಪಲ್ಲವಿ ಎಂಬ ಯುವತಿ ರಸ್ತೆ ದಾಟ್ತಿದ್ರು. ಈ ವೇಳೆ, ವೇಗವಾಗ ಬರ್ತಿದ್ದ ಆ್ಯಂಬುಲೆನ್ಸ್ ಯುವತಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಯುವತಿ ಪಲ್ಲವಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯುವತಿ ಮೃತದೇಹವನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಸಂಬಂಧಿಕರ ಆಕ್ರೋಶ, ಆಕ್ರಂದನ ಮುಗಿಲು ಮುಟ್ಟಿತ್ತು.
ಈ ವೇಳೆ ಸಂಬಂಧಿಕರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೀತು. ನಮಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಸ್ಪತ್ರೆ ಎದುರು ಯುವತಿ ಪೋಷಕರು, ಸಂಬಂಧಿಕರು ಪಟ್ಟು ಹಿಡಿದ್ರು. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆ್ಯಂಬುಲೆನ್ಸ್ ಹೊಳಲ್ಕೆರೆಯಿಂದ ಚಿತ್ರದುರ್ಗಕ್ಕೆ ಆಗಮಿಸ್ತಿತ್ತು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?