ಶ್ರೀನಗರ : ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಮಹೇಂದರ್ ಸಿಂಗ್ ಧೋನಿ ಈಗ ಬಂದೂಕು ಹಿಡಿದಿದ್ದಾರೆ. ಭಾರತೀಯ ಸೇನೆಯ ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಪಡೆದಿರೋ ಧೋನಿ, ಈಗ ಜಮ್ಮು ಕಾಶ್ಮೀರದಲ್ಲಿ ಗಸ್ತು ತಿರುಗಲು ಶುರು ಮಾಡಿದ್ದಾರೆ.
ಯೆಸ್, ಜುಲೈ 31ರಿಂದ ಆಗಸ್ಟ್ 15ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಧೋನಿ ನಿಯೋಜನೆಗೊಂಡಿದ್ದಾರೆ. ಹೀಗಾಗಿ ಮುಂದಿನ 15 ದಿನಗಳ ಕಾಲ, ಧೋನಿ ಅರೆಸೇನಾ ಪಡೆಯ ವಿಕ್ಟರ್ ಫೋರ್ಸ್ನಲ್ಲಿ ಗಸ್ತು ತಿರುಗುತ್ತಾರೆ. ಇದೇ ವಿಕ್ಟರ್ ಫೋರ್ಸ್ ಸೈನಿಕರ ಜೊತೆ ಇರಲಿರುವ ಧೋನಿ, ಸೈನಿಕರು ಮಾಡುವ ಎಲ್ಲಾ ಕಾರ್ಯಗಳನ್ನೂ ತಾವೇ ಮಾಡಲಿದ್ದಾರೆ.
ಎಕೆ 47 ಬಂದೂಕಿನೊಂದಿಗೆ ಧೋನಿ..!
ಧೋನಿಗೆ ಇತರೆ ಸೇನಾಧಿಕಾರಿಗಳಂತೆ ಎಕೆ 47 ಬಂದೂಕು ನೀಡಲಿದ್ದಾರೆ. ಜೊತೆಗೆ ಅದಕ್ಕೆ ಬುಲೆಟ್ ತುಂಬಲು ಮೂರು ಮ್ಯಾಗಜಿನ್ಗಳನ್ನೂ ಸೇನೆ ನೀಡಲಿದೆಯಂತೆ. ತಮ್ಮ ಮುಂದಿನ 15 ದಿನಗಳ ಸೇನಾ ಕಾರ್ಯಾಚರಣೆಯ ಪಯಣದಲ್ಲಿ ಧೋನಿ, ವಿವಿಧ ಕ್ಯಾಂಪ್ಗಳ ಸೈನಿಕರನ್ನು ಭೇಟಿಯಾಗಲಿದ್ದಾರೆ. ಸೈನಿಕರ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ಸೇನಾ ಶಾಲೆಗಳಿಗೆ ಭೇಟಿ ನೀಡಲಿದ್ದು, ಅಲ್ಲಿ ಮಕ್ಕಳೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ, ಸ್ಥಳೀಯ ಕ್ರಿಕೆಟ್ ತಂಡಗಳ ಜೊತೆ ಕ್ರಿಕೆಟ್ ಸರಣಿ ಕೂಡ ಆಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2011ರಲ್ಲಿ ಧೋನಿಯನ್ನ ಭಾರತೀಯ ಸೇನೆ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕ ಮಾಡಿತ್ತು. ಈ ಹಿಂದೆ ಅಂದ್ರೆ, 2015ರಲ್ಲೂ ಕೂಡ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ತರಬೇಟಿ ಪಡೆದಿದ್ರು. ಆಗ ಆಗ್ರಾದಲ್ಲಿ 5 ತರಬೇತಿ ಪೂರ್ಣಗೊಳಿಸಿ, ಪ್ಯಾರಾಚೂಟರ್ ಆಗಿ ಸಕ್ಸಸ್ ಆಗಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?