ರೈಸಿಂಗ್ ಕನ್ನಡ ವೆಬ್:
ಕೊಪ್ಪಳ:
ಈಗ ಬಿತ್ತನೆ ಸಮಯ. ಈ ಸಂದರ್ಭದಲ್ಲಿ ಕಳಪೆ ಬಿತ್ತನೆ ಬೀಜ, ಗೊಬ್ಬರ, ಔಷಧಿ ಮಾರಾಟ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವವರ ಆಟ ಇನ್ನು ಮೇಲೆ ನಡೆಯಲ್ಲ. ಕಳಪೆ ಬೀಜ, ಗೊಬ್ಬರ ಮಾರಾಟ ಮಾಡುವವರ ಕತೆ ಮುಗಿಸುತ್ತೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದರು.
ಕೊಪ್ಪಳದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ರಾಜ್ಯದಲ್ಲಿ ಇದು ಬಿತ್ತನೆ ಸಮಯ. ರೈತರಿಗೆ ಒಳ್ಳೆಯದನ್ನ ಬಯಸೋದು ನಮ್ಮ ಕರ್ತವ್ಯ. ಇಷ್ಟು ವರ್ಷ ಕಳಪೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ವಿರುದ್ಧ ಕ್ರಮ ಆಗಿರಲಿಲ್ಲ. ಈಗ ರಾಜ್ಯಾದ್ಯಂತ ಈ ಬಗ್ಗೆ ಸಂಪೂರ್ಣ ನಿಗಾ ವಹಿಸಲಾಗಿದೆ. ಈಗಾಗಲೇ 15 ಕೋಟಿ ರೂಪಾಯಿ ಮೌಲ್ಯದ ಕಳಪೆ ಬೀಜ, ಗೊಬ್ಬರ ವಶಕ್ಕೆ ಪಡೆಯಲಾಗಿದೆ. ರಾಯಚೂರು, ಬೀದರ್, ಹಾವೇರಿಯಲ್ಲಿ ಈ ಬಗ್ಗೆ ಕೇಸ್ ದಾಖಲಿಸಲಾಗಿದೆ. ಬೀಜ, ಗೊಬ್ಬರ ಪೂರೈಕೆದಾರರು ದಾವೆ ಹೂಡಿದ್ದಾರೆ. ನಾವೂ ಸಹ ರೈತರ ಪರ ಹೋರಾಡುತ್ತೇವೆ ಎಂದು ಗುಡುಗಿದರು. ಸರಕಾರ ಒತ್ತಡ-ಒತ್ತಾಯಗಳಿಗೆ ಮಣಿಯಲ್ಲ, ತಂತ್ರ-ಕುತಂತ್ರಗಳಿಗೆ ಬಗ್ಗಲ್ಲ. ನನಗೂ ಕಳಪೆ ಬೀಜ ಪೂರೈಕೆ ಮಾಡುವವರಿಂದ ಒತ್ತಡ ಬಂದಿತ್ತು. ನಾನು ಮಣಿದಿಲ್ಲ, ಮಣಿಯಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಮತ್ತೆ 6 ಕೊರೊನಾ ಕೇಸ್ ದೃಢ ಆಗಿವೆ. ಜನರು ಜಾಗೃತರಾಗಬೇಕು.ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು. ಕೊರೊನಾ ದೃಢಪಟ್ಟಿರುವವರ ಸಂಪರ್ಕಿತರು ಸ್ವ ಇಚ್ಛೆಯಿಂದ ಬಂದು ಹೇಳಿದರೆ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸರಕಾರದೊಂದಿಗೆ ಕೈ ಜೋಡಿಸಿ ಎಂದು ಸಚಿವ ಪಾಟೀಲ ಮನವಿ ಮಾಡಿದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?