ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಒಳಗೆ ಯಾವುದೂ ಸರಿ ಇಲ್ಲ ಅನ್ನುವುದು ಮತ್ತೆ ಕಾಣಿಸಿಕೊಳ್ಳುತ್ತಿದೆ. ಕಳೆದ ಗುರುವಾರ ನಡೆದ ಕಾಂಗ್ರೆಸ್ ಸಂಸದರ ಸಭೆಯಲ್ಲಿ ಯುವ ಮತ್ತು ಹಿರಿಯ ಮುಖಂಡರ ನಡುವೆ ತೀವ್ರ ವಾಗ್ವಾದ ನಡೆದಿತ್ತು.ಯುವ ಮುಖಂಡರು ರಾಹುಲ್ ಗಾಂಧಿ ನಾಯಕತ್ವವನ್ನು ಬೆಂಬಲಿಸಿ, ಕಾಂಗ್ರೆಸ್ನ ಈಗಿನ ದುಃಸ್ಥಿತಿಗೆ ಮನಮೋಹನ್ ಸಿಂಗ್ ನೀಡಿದ ದುರ್ಬಲ ಆಡಳಿತವೇ ಕಾರಣ ಎಂದು ಆರೋಪ ಮಾಡಿದ್ದರು. ಈಗ ಹಿರಿಯ ಮುಖಂಡರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೆರವಿಗೆ ಬಂದಿದ್ದಾರೆ. ರಾಹುಲ್ ಗಾಂಧಿಯ ಹೊಣೆಗೇಡಿತನ ಮತ್ತು ದುರ್ಬಲ ಆಲೋಚನೆಗಳು ಕಾಂಗ್ರೆಸ್ ಅಧಃಪತನಕ್ಕೆ ಕಾರಣ ಎಂದು ದೂಷಿಸಿದ್ದಾರೆ.
2014ರ ಲೋಕಸಭೆ ಸೋಲಿಗೆ ಡಾ. ಮನಮೋಹನ್ ಸಿಂಗ್ ಕಾರಣ ಅಲ್ಲ. ಬದಲಾಗಿ ಪಕ್ಷದ ಅಸಹಕಾರ ಮತ್ತು ಬಿಜೆಪಿಯ ಅಪಪ್ರಚಾರ ಕಾರಣ ಎಂದು ಹಿರಿಯ ನಾಯಕ ಆನಂದ್ ಶರ್ಮಾ ಟ್ವೀಟ್ ಮಾಡಿದ್ದಅರೆ. ಅಷ್ಟೇ ಅಲ್ಲ ಈಗಲೂ ಕಾಂಗ್ರೆಸ್ ಒಂದಾಗಿಲ್ಲ ಅನ್ನೋದು ದುರ್ದೈವ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
ಆನಂದ್ ಶರ್ಮಾ ಮಾಡಿರುವ ಟ್ವೀಟ್ ಬೆಂಬಲಿಸಿ ಡಾ.ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಶಶಿ ತರೂರ್, ಮನಿಶ್ ತಿವಾರಿ ಮತ್ತು ಮಿಲಿಂದ್ ದೆವೊರಾ ಕೂಡ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಒಳಗೊಳಗೆ ಸಾಕಷ್ಟು ಬಣಗಳಿವೆ ಅನ್ನುವುದು ದಿನದಿಂದ ದಿನಕ್ಕೆ ಹೊರಬರುತ್ತಿದೆ.
ಶಿವರಾಜ್ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಕೋಟಿ ಸಾಲ ಗೊತ್ತಾ..?
ಬೆಂಗಳೂರು ಉತ್ತರ ಕ್ಷೇತ್ರದ ಜನರ ಮೂಡ್ ಯಾವ ಪಕ್ಷದತ್ತ?
ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ ಲಕ್ಷ್ಮಣ ಸವದಿ
ಬೆಳಗಾವಿ ಪುತ್ರ ಮೃಣಾಲ್ಗೆ ಆಶೀರ್ವಾದ ಮಾಡಿ : ಲಕ್ಷ್ಮೀ ಹೆಬ್ಬಾಳ್ಕರ್
ಮೈಸೂರು ಗೆಲ್ಲಲು ಕಾಂಗ್ರೆಸ್ ರಣತಂತ್ರ; ಬಿಎಸ್ವೈ ಆಪ್ತರಿಗೆ ಆಪರೇಷನ್!
ಸ್ಟಾರ್ ಚಂದ್ರು ಕಾಂಗ್ರೆಸ್ ಪಕ್ಷದ ಸಭೆಗೆ ಚಲುವರಾಯಸ್ವಾಮಿ, ರವಿ ಗಾಣಿಗ ಸಾಥ್