Featured
ಆತ್ಮಹತ್ಯೆಗೆ ಯತ್ನಿಸಿದ ನಟಿ ವಿಜಯಲಕ್ಷ್ಮೀ: ನಟ ಸೀಮನ್ರಿಂದ ಕಿರುಕುಳ ಆರೋಪ ?

ರೈಸಿಂಗ್ ಕನ್ನಡ :
ಚೆನ್ನೈ:
ದಕ್ಷಿಣ ಭಾರತದ ಖ್ಯಾತ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರಗೆ ದಾಖಲಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಆತ್ಮಹತ್ಯೆಯ ಯತ್ನಕ್ಕೂ ಮುನ್ನ ವಿಡಿಯೊವನ್ನ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿರುವ ವಿಜಯಲಕ್ಷ್ಮೀ ನನ್ನ ಸಾವಿಗೆ ನಟ,ರಾಜಕಾರಣಿ ಸೀಮನ್ ಮತ್ತು ಹರಿಂದರನ್ ಅವರೇ ಕಾರಣ ಎಂದು ದೂರಿ ಬಿ.ಪಿ ಮಾತ್ರಗಳನ್ನ ಸೇವಿಸಿದ್ದಾರೆ.

ವಿಡಿಯೊದಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಮಾತನಾಡಿ, ನಾನು ಕರ್ನಾಟಕದಲ್ಲಿ ಹುಟ್ಟಿದ್ದೀನಿ ಎನ್ನುವ ಕಾರಣಕ್ಕೆ ಸೀಮನ್ ಮತ್ತು ಹರಿಂದ್ರನ್ ನನಗೆ ಹಿಂಸೆ ಕೊಡುತ್ತಿದ್ದಾರೆ. ಮಹಿಳೆಯಾಗಿ ನಾನೆಷ್ಟು ತಡೆದುಕೊಂಡಿದ್ದೇನೊ ಅಷ್ಟು ತಡೆದುಕೊಂಡಿದ್ದೇನೆ. ಇದಲ್ಲದೇ ನಾನು ವೇಶ್ಯಾ ವೃತ್ತಿ ಮಾಡುತ್ತಿದ್ದೇನೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಇವರು ನನಗೆ ಬದುಕಲು ಬಿಡುತ್ತಿಲ್ಲ. ನನಗೆ ಇನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ನಾನು ಹುಟ್ಟಿದ್ದು ಕರ್ನಾಟಕದಲ್ಲಿ ಆದರೆ ನನ್ನ ಮಾತೃ ಭಾಷೆ ತಮಿಳು ಅನ್ನೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದನ್ನೆ ನಪವಾಗಿಟ್ಟುಕೊಂಡು ನನಗೆ ತೊಂದರೆ ಕೊಡುತ್ತಿದ್ದಾರೆ. ನಾನೀನಗ ಸ್ವಲ್ಪ ಬಿಪಿ ಮಾತರಗಳನ್ನ ನುಂಗಿದ್ದೇನೆ ಇನ್ನು ಸ್ವಲ್ಪ ಹೊತ್ತಿನಲ್ಲಿ ಬಿಪಿ ಕಮ್ಮಿ ಆಗಲಿದೆ ಅಂತಾ ವಿಡಿಯೊದಲ್ಲಿ ಹೇಳಿದ್ದಾರೆ.
ನಟ ಸೀಮನ್ ವಿರುದ್ಧ ನಟಿ ವಿಜಯಲಕ್ಷ್ಮೀ ದೂರುತ್ತಿರುವುದು ಇದೇ ಮೊದಲಲ್ಲ ಕಳೆದ ಫೆಬ್ರವರಿಯಲ್ಲಿ ಸೀಮನ್ ನನಗೆ ಮದುಯಾಗುತ್ತೇನೆ ಎಂದು ಹೇಳಿ ಮೋಸ ಮಾಡಿದ್ದ ಎಂದು ವಿಜಯಲಕ್ಷ್ಮೀ ದೂರಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?