ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಬಾಲಿವುಡ್ನ ಸುಶಾಂತ್ ಸಿಂಗ್ ಡಿಪ್ರೆಶನ್ನಿಂದಲೇ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರ ದೇಶಾದ್ಯಂತ ಸಾಕಷ್ಟು ಚರ್ಚೆಯಾಗಿತ್ತು. ಅನೇಕ ತಾರೆಯರು ನಾವೂ ಕೂಡ ಡಿಪ್ರೆಶನ್ ಗೆ ಒಳಗಾಗಿದ್ದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೀಗ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3 ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಇದೀಗ ಡಿಪ್ರೆಶನ್ಗೆ ಒಳಗಾಗಿ ಫೇಸ್ ಬುಕ್ನಲ್ಲಿ ಐ ಕ್ವಿಟ್ ದಿಸ್ ವರ್ಲ್ಡ್ ಎಂದು ಫೋಸ್ಟ್ ಮಾಡಿ ಸೂಸೈಡ್ ಮಾಡಿ ದಿಢೀರ್ ಆತಂಕ ಸೃಷ್ಟಿಸಿದ್ದಾರೆ.
ಜಯಶ್ರೀ ತಮ್ಮ ಫೇಸ್ ಬುಕ್ನಲ್ಲಿ ಐ ಕ್ವಿಟ್ ದಿಸ್ ವರ್ಲ್ಡ್ ( ನನಗೆ ಈ ಜಗತ್ತೂ ಬೇಡ.. ಡಿಪ್ರೆಷನ್ ಬೇಡಾ ) ಎಂದು ಪೋಸ್ಟ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಜಯಶ್ರೀ ಫೋನ್ ಸ್ವಿಚ್ ಆಫ್ ಮಾಡಿಕೊಂಡ ಕೂಡಲೇ ನಟಿಯ ಪತ್ತೆಗಾಗಿ ಸ್ನೇಹಿತ-ಸ್ನೇಹಿತೆಯರಿಂದ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಜಯಶ್ರೀ ಫೇಸ್ ಬುಕ್ನಲ್ಲಿ ಮಾಡಿರು ಪೋಸ್ಟ್ಗೆ ಪಿನ್ ಮಾಡಿ ಆಕೆಯ ಅನೇಕ ಸ್ನೇಹಿತರು ಆಕೆಯ ಸರಣಿ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಜಯಶ್ರೀ ಡಿಪ್ರೆಷನ್ ಪೋಸ್ಟ್ ನೋಡಿದ ದೀಪು ಗೌಡ್ರು ಎನ್ನುವವರು, ಜಯಶ್ರೀ ರಾಮಯ್ಯ ಈಕೆಯ ಪರಿಚಯ, ಸ್ನೇಹ ಯಾರಿಗಾದ್ರೂ ಇದ್ರೇ, ಬೇಗ ಈಕೆಗೆ ಕಾಲ್ ಮಾಡಿ ಅಥವಾ ಅವರಿರುವ ಜಾಗಕ್ಕೆ ಭೇಟಿ ಮಾಡಿ ದಯವಿಟ್ಟು ಯಾರಾದರು ಆಕೆಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಮಾನಸಿಕ ಖಿನ್ನತೆಗೆ ಒಳಗಾಗಿ ಜಯಶ್ರೀ ಆತ್ಮಹತ್ಯೆಗೆ ಯತ್ನಿಸಿದ್ದು, ನನ್ನನ್ನು ಸಾಯಲು ಬಿಡಿ ನನಗೆ ಬದುಕಲು ಇಷ್ಟವಿಲ್ಲ ಎಂದು ಆಸ್ಪತ್ರೆಗೆ ಅಡ್ನಿಟ್ ಆಗಲು ನಿರಾಕರಿಸಿದ್ದಾರೆ. ಇದೀಗ ಸ್ನೇಹಿತರು ಹಾಗು ಕುಟುಂಬದವರು ಮನವೊಲಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಅಲ್ಲದೇ ಜಯಶ್ರೀ ಕೂಡ ಫೇಸ್ನಲ್ಲಿ ತಾನು ಆರಾಮಾಗಿ ಇರೋದಾಗಿ ಬರೆದುಕೊಂಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?