ರೈಸಿಂಗ್ ಕನ್ನಡ :
ಯಾದಗಿರಿ :
ಕಿಲ್ಲರ್ ಕೊರೊನಾಗೆ ಮಾಜಿ ಸಚಿವ ಮದನಗೋಪಾಲ ನಾಯಕ (70) ಬಲಿಯಾಗಿದ್ದಾರೆ. ಸುರಪುರ ಆರೋಗ್ಯ ಅಧಿಕಾರಿ ಡಾ. ರಾಜಾವೆಂಕಟಪ್ಪ ನಾಯಕರಿಂದ ಮಾಹಿತಿ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಿವಾಸಿ ನ್ಯುಮೋನಿಯಾ, ಬಿಪಿ, ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ಕಳೆದ ಜು. 23 ರಂದು ಅಸ್ವಸ್ಥತೆ ಹಿನ್ನೆಲೆ ಕಲಬುರಗಿ ಇಎಸ್ ಐ ಆಸ್ಪತ್ರೆಗೆ ದಾಖಲಾಗಿದ್ದರು.
24 ರಂದು ಕೊರೋನಾ ಸೋಂಕು ದೃಢವಾಗಿತ್ತು.ಸೋಮವಾರ ಬೆಳಗ್ಗಿನ ಜಾವ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
1974 ರಿಂದ ರಾಜಕೀಯ ಅಖಾಡಕ್ಕೆ ಧುಮಿಕಿದ್ದರು.1992-94 ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಲವು ಬದಲಾವಣೆ ತಂದಿದ್ದರು.
ಸುರಪುರ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.2014ರಲ್ಲಿ ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತ್ತಿದ್ದರು.ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ಬೆಂಬಲಿಸಿದ್ದರು.ಸಾಯುವ ಕೊನೆವರೆಗೂ ರಾಜಕೀಯದಲ್ಲಿ ಮಾಜಿ ಸಚಿವರು ಲವಲವಿಕೆಯಿಂದ ಇದ್ದರು.
ಅಪಾರ ಆಪ್ತಮಿತ್ರರು, ಅಭಿಮಾನಿಗಳು, ಕಾರ್ಯಕರ್ತರುನ್ನು ಅಗಲಿದ್ದಾರೆ. ಮಾಜಿ ಸಚಿವರ ಪಾರ್ಥೀವ ಶರೀರವನ್ನ ಸುರಪುರದಲ್ಲಿ ಕೋವಿಡ್ 19 ನಿಯಮದಂತೆ ಅಂತ್ಯ ಸಂಸ್ಕಾರಕ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?