Featured
ತೆರೆ ಮೇಲೆ ವಿಲನ್ ಆದ್ರೆ ನಿಜ ಜೀವನದಲ್ಲಿ ನಟ ಸೋನು ಸೂದ್ ರಿಯಲ್ ಹೀರೊ- ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ

ರೈಸಿಂಗ್ ಕನ್ನಡ :
ಅಮರಾವತಿ :
ಬಾಲಿವುಡ್ ನಟ ಸೋನು ಸೂದ್ ಇತ್ತಿಚೆಗೆ ಲಾಕ್ಡೌನ್ ಸಂದರ್ಭದಲ್ಲಿ ಮುಂಬೈನಲ್ಲಿ ದುಡ್ಡಿಲ್ದೇ ಪರದಾಡುತ್ತಿದ್ದ ಅದೆಷ್ಟೊ ಮಂದಿಗೆ ಸಹಾಯ ಮಾಡಿ ಸುದ್ದಿಯಲ್ಲಿದ್ದರು. ಇದೀಗ ಸೋನು ಸೂದ್ ರೈತರೊಬ್ಬರಿಗೆ ಸಹಾಯ ಮಾಡಿ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಮದನಪಲ್ಲಿಯ ರೈತರಿಗೆ ಟ್ರ್ಯಾಕ್ಟರ್ ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಹೆಣ್ಣು ಮಕ್ಕಳಿಗೆ ಎತ್ತುಳಿಲ್ಲದೇ ತಾವೆ ಹೆಗಲು ಕೊಟ್ಟು ಉಳುತ್ತಿದ್ದ ವಿಡಿಯೊವನ್ನ ಪತ್ರಕರ್ತರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.ಈ ವಿಡಿಯೊ ಸಖತ್ ಸದ್ದು ಮಾಡಿತ್ತು.
ಅದ್ಹೇಗೊ ಈ ವಿಡಿಯೊ ನೋಡಿದ ಸೋನು ಸೂದ್ ಅವರ ಮನ ಕರಗಿತು. ಈ ರೈತರಿಗೆ ಜೋಡೆತ್ತುಗಳನ್ನ ಕೊಡಿಸುವುದಾಗಿ ಹೇಳಿದರು. ಜೊತಗೆ ವಿದ್ಯಾಭ್ಯಾಸದ ಕಡೆಗೂ ಗಮನಕೊಡಿ ಎಂದು ಸಲಹೆ ನೀಡಿದರು.

ಕೆಲವು ದಿನಗಳ ನಂತರ ಟ್ವೀಟ್ ಮೂಲಕ ಈ ಹೆಣ್ಣು ಮಕ್ಕಳ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ್ದಾರೆ.ಈ ಕುಟುಂಬಕ್ಕೆ ಟ್ರ್ಯಾಕ್ಟರ್ ಅವಶ್ಯಕತೆ ಇತ್ತು ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
ಸೋನು ಸೂದ್ ತೆರೆ ಮೇರೆ ವಿಲನ್ ಆದರೆ ನಿಜ ಜೀವನದಲ್ಲಿ ರಿಯಲ್ ಹೀರೋ.ಸೂನ್ ಸೂದ್ ಅವರ ಕಾರ್ಯ ಇತರೆ ಸೆಲೆಬ್ರೇಟಿಗಳಿಗೂ ಮಾದರಿಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?