Featured
ಮತ್ತಷ್ಟು ದಿನ ಯಡಿಯೂರಪ್ಪ ಏಕಪಾತ್ರ ಅಭಿನಯ : ಸಂಪುಟ ವಿಸ್ತರಣೆಗೆ ನೋ ಗ್ರೀನ್ಸಿಗ್ನಲ್..!

ಬೆಂಗಳೂರು/ನವದೆಹಲಿ : ಈ ಮೊದಲೇ ರೈಸಿಂಗ್ ಕನ್ನಡ ವೆಬ್ಸೈಟ್ನಲ್ಲಿ ಹೇಳಿದಂತೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಆಗೋದಿಲ್ಲ. ದೆಹಲಿಗೆ ಹೋಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಬ್ಯುಸಿ ಇದ್ದ ಕಾರಣ ಹಾಗೂ ಸುಷ್ಮಾ ಸ್ವರಾಜ್ ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವರ ಲಿಸ್ಟ್ ಇನ್ನೂ ಫೈನಲ್ ಆಗಿಲ್ಲ. ಇದರ ಮಧ್ಯೆ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಹೆಚ್ಚಾಗಿರೋ ಕಾರಣ, ಯಡಿಯೂರಪ್ಪ ವಾಪಸ್ ರಾಜ್ಯಕ್ಕೆ ಬಂದಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇವತ್ತು ಸಿಎಂ ಯಡಿಯೂರಪ್ಪ ಸಚಿವ ಸಂಪುಟಕ್ಕೆ ಯಾಱರು ಆಯ್ಕೆ ಆಗಿದ್ದಾರೋ ಅವರ ಹೆಸರು ತರಬೇಕಿತ್ತು. ಆದ್ರೆ, ಎಲ್ಲವೂ ಉಲ್ಟಾ ಆಗಿದೆ. ಯಡಿಯೂರಪ್ಪ ದೆಹಲಿಗೆ ಹೋಗಿ, ಸುಮ್ಮನೆ ವಾಪಸ್ ಆಗಿದ್ದಾರೆ. ವೇಳಾಪಟ್ಟಿಯಂತೆ ಇವತ್ತು ರಾತ್ರಿ ಬೆಂಗಳೂರಿಗೆ ವಾಪಸ್ ಆಗಬೇಕಿದ್ದ ಯಡಿಯೂರಪ್ಪ, ಮಧ್ಯಾಹ್ನವೇ ವಾಪಸ್ ಬಂದು, ಬಳಿಕ ಬೆಳಗಾವಿ ತೆರಳಿದ್ರು.
ರಾಜ್ಯದಲ್ಲಿ ಪ್ರವಾಹ ಸ್ಥಿತಿ ಹೆಚ್ಚಾಗಿದ್ದು, ಮೊದಲು ರಕ್ಷಣಾ ಕಾರ್ಯ ಹಾಗೂ ಪರಿಸ್ಥಿತಿಯನ್ನ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ, ಯಡಿಯೂರಪ್ಪ ತತ್ಕ್ಷಣ ವಾಪಸ್ ಆಗಿದ್ದಾರೆ. ಇಂದು ರಾತ್ರಿ ಬೆಳಗಾವಿಯಲ್ಲೇ ಉಳಿಯಲಿರೋ ಯಡಿಯೂರಪ್ಪ, ನಾಳೆ ಅಂದ್ರೆ ಗುರುವಾರ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಗಂಜಿ ಕೇಂದ್ರಗಳಿಗೂ ಭೇಟಿ ನೀಡಿ, ಸಂತ್ರಸ್ತರ ಅಳಲು ವಿಚಾರಿಸಲಿದ್ದಾರೆ.
ಹಾಗಿದ್ರೆ ಸಚಿವ ಸಂಪುಟ ವಿಸ್ತರಣೆ ಯಾವಾಗ..?
ಒಂದೆರಡು ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆ ಆಗಬಹುದು ಎಂಬುದು ಸಿಎಂ ಯಡಿಯೂರಪ್ಪ ಲೆಕ್ಕಾಚಾರ. ಹೀಗಾಗಿ, ಎರಡು ಮೂರು ದಿನ ಸಮರೋಪಾದಿಯಲ್ಲಿ ಕೆಲಸ ಮಾಡಿ, ಬಳಿಕ ದೆಹಲಿಗೆ ಹೋಗುವ ಲೆಕ್ಕಾಚಾರ ಸಿಎಂಗಿದೆ. ಇದರ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ, ಮೂರು ದಿನ ಆದ್ಮೇಲೆ ಕೊಂಚ ಬಿಡುವು ಮಾಡಿಕೊಳ್ತಾರೆ. ಹೀಗಾಗಿ ಮತ್ತೆ ಆಗಸ್ಟ್ 11 ಅಥವಾ 12ರಂದು ದೆಹಲಿಗೆ ಹೋಗಿ, ಸಂಪುಟ ಆಕಾಂಕ್ಷಿಗಳ ಪಟ್ಟಿ ಫೈನಲ್ ಮಾಡುವ ಪ್ಲಾನ್ ಯಡಿಯೂರಪ್ಪ ಅವರದ್ದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?