Featured
ಯಾದಗಿರಿಯಲ್ಲಿ ವರುಣನ ರೌದ್ರವತಾರ: ಕೊಯಿಲೂರು ಗ್ರಾಮ ಜಲಾವೃತ, ಜಲ ದಿಗ್ಬಂಧನ

ರೈಸಿಂಗ್ ಕನ್ನಡ :
ಯಾದಗಿರಿ:
ಯಾದಗಿರಿ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿಯಿಂದ ಸುರಿದ ಮಳೆಯ ರೌದ್ರಾವತ್ತಾರಕ್ಕೆ ಇಲ್ಲಿನ ಕೂಯಿಲೂರ ಗ್ರಾಮ ಸಂಪೂರ್ಜಣ ಲಾವೃತವಾಗಿದೆ.
ಯಾದಗಿರಿ ತಾಲೂಕಿನ ಮುಷ್ಟೂರು, ಪಗಲಾಪುರ ಹಾಗೂ ಕೂಯಿಲೂರ ಗ್ರಾಮದಲ್ಲಿ 80 ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಗ್ರಾಮದ ಎರಡು ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದ ಹಿನ್ನೆಲೆ, ಕೊಯಿಲೂರ ಗ್ರಾಮಕ್ಕೆ ವರುಣ ಜಲದಿಗ್ಬಂಧನ ಹಾಕಿದ್ದಾನೆ.

ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಪಟ್ಟಣಕ್ಕೆ ತೆರಳಲು ಜನರು ಪರದಾಡುತ್ತಿದ್ದಾರೆ. ಅಪಾರ ಪ್ರಮಾಣದ ಆಹಾರ ಧಾನ್ಯ ನೀರಲ್ಲಿ ಮುಳಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡ ಮಾಣಿಕರೆಡ್ಡಿ ಕುರುಕುಂದಿ ಭೇಟಿ ನೀಡಿ, ಮಳೆ ನೀರಿನ ಅವಾಂತರ ವೀಕ್ಷಿಸಿದರು. ಅಲ್ಲದೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ಯಾದಗಿರಿ ನಗರದಲ್ಲೂ ವರುಣನ ಕೇಕೆ:
ಹೌದು, ಯಾದಗಿರಿ ನಗರದ ಹೊರವಲಯದ ಮೈಲಾಪುರ ಬೆಸ್ ಸಮೀಪದ ದೊಡ್ಡ ಕೆರೆ ಬಡಾವಣೆಗೆ ಕೆರೆ ನೀರು ನುಗ್ಗಿವೆ. ಬಡಾವಣೆಗೆ ತೆರಳದಂತ ಪರಸ್ಥಿತಿ ಎದುರಾಗಿದೆ. ಜನರು ಹರಿಯುತ್ತಿರುವ ನೀರಲ್ಲಿನಲ್ಲೆ ದಾಟಿ ಹೋಗಿದ್ದಾರೆ. ಯಾದಗಿರಿ ದೊಡ್ಡ ಕೆರೆ ಸಂಪೂರ್ಣ ಭರ್ತಿಯಾಗಿದ್ದು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿವೆ. ಮಳೆಯಿಂದ ಜಿಲ್ಲೆಯ ಜನರು ಅಸ್ತವ್ಯಸ್ತತೆಗೊಂಡಿದ್ದಾರೆ.
ಮಳೆ ಅವತಾರಕ್ಕೆ ಬಿತ್ತಿದ ಬೆಳೆ ನೀರು ಪಾಲು:
ಯಸ್, ಕಳೆದ ಒಂದು ವಾರದಿಂದ ಇದೇ ರೀತಿ ಮಳೆ ಜೋರಾಗಿ ಸುರಿದ ಪರಿಣಾಮ ಸಾಕಷ್ಟು ಜನರ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಈಗ ಮತ್ತೊಮ್ಮೆ ಮಳೆರಾಯ ಅಬ್ಬರಿಸಿದ್ದು ಜನರಿಗೆ ಜಲ ದಿಗ್ಬಂಧನ ಹಾಕಿದ್ದಾನೆ. ಯಾದಗಿರಿ ತಾಲೂಕಿನ ಮುಂಡರಗಿ ಹಾಗೂ ವಡಗೇರಾ ತಾಲೂಕಿನ ಕುರುಕುಂದಿ, ಬೆಂಡೆಬೆಂಬಳಿಯಲ್ಲಿ ಮಳೆ ಅರ್ಭಟಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು. ಹಲವು ಗ್ರಾಮಗಳಿಗೆ ಮಳೆ ನೀರು ನುಗಿವೆ. ಭಾರೀ ಮಳೆಗೆ ಹಲವು ಗ್ರಾಮದಲ್ಲಿ ಜನರು ರಾತ್ರಿಯಿಡಿ ಜಾಗರಣೆ ಮಾಡುವಂತ್ತಾಯ್ತು.
ನೀರಲ್ಲಿ ಮುಳಗಿದ ಮನೆ- ಜನರ ಕಂಗಾಲು..
ಯಾದಗಿರಿ ಜಿಲ್ಲೆಯಾದ್ಯಂತ ನಿನ್ನೆ ಧಾರಕಾರ ಮಳೆಯಾಗಿದ್ದು, ಮಹಾ ಮಳೆಗೆ ಅಕ್ಷರಶಃ ತಗ್ಗು ಪ್ರದೇಶದ ಜನರು ಕಂಗಲಾಗಿದ್ದಾರೆ. ಯಾದಗಿರಿದ ಅಂಬೇಡ್ಕರ್ ಬಡಾವಣೆ, ಗಿರಿ ನಗರ, ಹೋಸಹಳ್ಳಿ ಹಾಗೂ ಲ್ಯಾಡಿಸ್ ಗಲ್ಲಿಯಲ್ಲಿ ಜನರು ಮಳೆಗೆ ತತ್ತರಿಸಿದ್ದಾರೆ.

ಇಷ್ಟು ದಿನ ಕೊರೋನಾಗೆ ತತ್ತರಿಸಿದ ಜನರಿಗೆ ಈಗ ಮಳೆರಾಯನ ಕಾಟ ಶುರುವಾಗಿದೆ. ಸಾಕಪ್ಪ ಸಾಕು ಮಳೆಕಾಟ ಸಾಕು ಅಂತಿದ್ದಾರೆ ಜಿಲ್ಲೆಯ ಜನತೆ. ಇನ್ನಾದ್ರು ಸರ್ಕಾರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಜನರ ನೇರವಿಗೆ ಬರಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?