Featured
ಯಾದಗಿರಿಯಲ್ಲಿ ವರುಣ ಆರ್ಭಟಕ್ಕೆ ವೃದ್ಧೆ ಬಲಿ: ಧಾರಕಾರ ಮಳೆಗೆ ಜನಜೀವನ ತತ್ತರ- 50 ಸಾವಿರ ಪರಿಹಾರ ಕೊಟ್ಟ ಶಾಸಕ ನಾಗಣಗೌಡ

ರೈಸಿಂಗ್ ಕನ್ನಡ :
ಯಾದಗಿರಿ:
ಕಳೆದ ಹತ್ತು ದಿನಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಗೆ ನಗರ, ಗ್ರಾಮೀಣ ಭಾಗದ ಜನರು ಹೈರಣಾಗಿದ್ದಾರೆ. ಒಂದು ಕಡೆ ಕೊರೋನಾ ಆಪತ್ತು, ಮತ್ತೊಂದು ಕಡೆ ಮಳೆರಾಯನವ ಅರ್ಭಟಕ್ಕೆ ಜಿಲ್ಲೆಯ ಜನತೆ ತತ್ತರಿಸಿದ್ದಾರೆ.
ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಕುಸಿತ ತಪ್ಪಿದ ಅನಾಹುತ: ಯಾದಗಿರಿ ನಗರದ ಹೊರವಲಯದ ಡಾನ್ ಬಾಸ್ಕೋ ಮುಂಭಾಗದ ಬೈಪಾಸ್ ರಸ್ತೆ ಮಳೆ ಆರ್ಭಟಕ್ಕೆ ಕುಸಿದು ಬಿದ್ದಿದೆ. ರೈಲ್ವೆ ಬ್ರಿಡ್ಜ್ ಗೆ ಹೊಂದಿಕೊಂಡ ರಸ್ತೆ ಕುಸಿದಿರುವುದು ದೊಡ್ಡ ಅನಾಹುತ ಸೃಷ್ಟಿಸಿದೆ. ನಿತ್ಯ ಇದೇ ರಸ್ತೆ ಮೂಲಕ ನೂರಾರು ವಾಹನಗಳ ಓಡಾಟ ನಡೆಸುತ್ತವೆ. ಗುರುಸಣಗಿ ಹೊಗುವ ರಸ್ತೆ ಕುಸಿದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಮಳೆಗೆ ಮನೆ ಕುಸಿದು ಮಹಿಳೆ ಬಲಿ:
ಹಗಲು ರಾತ್ರಿ ಎನ್ನದೆ ಬಹಳಷ್ಟು ಆಕ್ರಮಣಕಾರಿಯಾಗಿ ಮಳೆ ಸುರಿಯುತ್ತಿರುವುದರಿಂದ ಹಳ್ಳಿಗಳಲ್ಲಿನ ಮಣ್ಣಿನ ಮನೆಗಳು ಸಂಪೂರ್ಣ ಶಿಥಲಗೊಂಡಿವೆ. ಇದರ ಪರಿಣಾಮವಾಗಿ ಗೋಡೆ ಕುಸಿದು ಓರ್ವ ವೃದ್ಧೆ ಸಾವನ್ನಪ್ಪುತ್ತಿದ ಘಟನೆ, ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ 65 ವರ್ಷ ವೃದ್ಧೆ ತನ್ನ ಮನೆ ಮುಂದೆ ಬಟ್ಟೆ ತೊಳೆಯುವ ವೇಳೆ ಮುಂದಿನ ಮನೆಯ ಗೋಡೆ ಏಕಾಏಕಿ ವೃದ್ಧೆ ಮೇಲೆ ಕುಸಿದು ಬಿದ್ದ ಪರಿಣಾಮ, ಸಾವಿತ್ರಮ್ಮ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಮೃತ ಶಾಂತಮ್ಮಳ ಕುಟುಂಬಕ್ಕೆ ಗುರುಮೀಠಕಲ್ ಶಾಸಕ ನಾಗಣಗೌಡ ಕಂದೂರು ವೈಯಕ್ತಿಕ 50 ಸಾವಿರ ಪರಿಹಾರ ನೀಡಿದ್ದಾರೆ.
ಇನ್ನೂ ಸತತ ಮಳೆಯಿಂದಾಗಿ ಜಿಲ್ಲೆಯ ಬಿಳ್ಹಾರ, ಕೊಡಲಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿ, ಕೆಸರು ಗದ್ದೆಗಳಾಗಿವೆ. ಇದರಿಂದಾಗಿ ಗ್ರಾಮಸ್ಥರು ರಸ್ತೆಯಲ್ಲಿ ಸಂಚಾರ ಮಾಡಲು ಆಗುತ್ತಿಲ್ಲ.
ಮಳೆಯಿಂದ ಇಷ್ಟೇಲ್ಲ ರದ್ದಾಂತ ಆಗಿದ್ರು ಜಿಲ್ಲಾಡಳಿತ ಮಾತ್ರ ಕಣ್ಣುಮುಚ್ಚಿ ಕುಳಿತ್ತಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಜಿಲ್ಲಾಡಳಿತ ಕೊರೊನಾ ಜೊತೆಗೆ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?