ರೈಸಿಂಗ್ ಕನ್ನಡ :
ಬೆಂಗಳೂರು :
ಆತ ಇಂಟೀರಿಯರ್ ಡಿಸೈನರ್ ಆಗಿ ಮಂಗಳೂರಿನಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕ್ರಿಯಾಶೀಲ ಯುವಕ. ಉತ್ತಮ ಆಫರ್ ಮೇಲೆ ಕುವೈತ್ಗೆ ತೆರಳಿದ್ದ ಆತ, ಅಲ್ಲೂ ಕೂಡ ಕೈ ತುಂಬ ದುಡಿಯುತ್ತಿದ್ದ. ಆದ್ರೆ, ವಿಧಿಯಾಟವೇ ಬೇರೆಯಾಗಿತ್ತು. ಯೆಸ್ ಈ ಫೋಟದಲ್ಲಿ ಇರುವ ಯುವಕನ ಹೆಸರು ಅನೀಸ್. 28 ವರ್ಷದ ಇವರು ಮಂಗಳೂರಿನ ಕಿನ್ನಿಗೋಳಿಯವರು. ಕುವೈತ್ನ ಸಾಲ್ಮಿಯಾ ಬೀಚ್ನಲ್ಲಿ ಮುಳುಗುತ್ತಿದ್ದ ಇಬ್ಬರು ಈಜಿಪ್ಟ್ ಪ್ರಜೆಗಳನ್ನು ರಕ್ಷಿಸಿದ ಅನೀಸ್, ತಾನೇ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಕರುಣಾಜನಕ ಘಟನೆ ನಡೆದಿದೆ.
ಅನೀಸ್ ಶನಿವಾರ ಸಂಜೆ ತನ್ನ ಸ್ನೇಹಿತರ ಜತೆಗೆ ತಿರುಗಾಡಲು ಕುವೈಟ್ನ ಸಾಲ್ಮಿಯಾ ಬೀಚ್ಗೆ ತೆರಳಿದ್ದರು. ಕೊಂಚ ಹೊತ್ತು ನೀರಿನಲ್ಲಿ ಈಜಾಡಿ ದಡಕ್ಕೆ ಬಂದಿದ್ದರು. ಈ ಸಂದರ್ಭ ಬೀಚ್ಗೆ ತಿರುಗಾಡಲು ಬಂದ ಇಬ್ಬರು ಈಜಿಪ್ಟ್ ಪ್ರಜೆಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದರು.
ಇದನ್ನು ನೋಡಿದ ಅನೀಸ್ ತನ್ನ ಜೀವದ ಹಂಗು ತೊರೆದು, ಸಮುದ್ರಕ್ಕೆ ಜಿಗಿದು, ಇಬ್ಬರನ್ನು ರಕ್ಷಣೆ ಮಾಡಿ ದಡಕ್ಕೆ ತಲುಪಿಸಿದ್ದಾರೆ. ಆದರೆ ಅಷ್ಟರಲ್ಲಿ ಬೃಹತ್ ಅಲೆಯೊಂದು ಅನೀಸ್ ಅವರನ್ನು ಸೆಳೆದುಕೊಂಡಿತ್ತು. ಕೆಲವೇ ಕ್ಷಣದಲ್ಲಿಅನೀಸ್ ಸಮುದ್ರದಲ್ಲಿ ನಾಪತ್ತೆಯಾದರು. ಅನೀಸ್ ಪತ್ತೆಗಾಗಿ ಕುವೈಟ್ ನೇವಿ, ಕೋಸ್ಟ್ಗಾರ್ಡ್ ಕಾರ್ಯಾಚರಣೆ ನಡೆಸಿದ್ದು, ಭಾನುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?