ರೈಸಿಂಗ್ ಕನ್ನಡ:
ಬೆಂಗಳೂರು:
ಕರ್ನಾಟಕದಲ್ಲಿ ಕೊರೊನಾ ಅಟಟಹಾಸ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸದಾಗಿ ಸಾವಿರಾರು ಪಾಸಿಟಿವ್ ಕೇಸ್ಗಳು ಕಾಣಿಸಿಕೊಳ್ಳುತ್ತಿವೆ. ವಿರೋದ ಪಕ್ಷಗಳಂತೂ ಸರ್ಕಾರವನ್ನು ಟೀಕಿಸುತ್ತಿವೆ. ರಾಜ್ಯದಲ್ಲಿ ಕೋವಿಡ್ ಟೆಸ್ವ್ ಪ್ರಮಾಣ ಕಡಿಮೆ ಇರುವುದೇ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.
ಈ ಮಧ್ಯೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪವನ್ನು ತಳ್ಳಿ ಹಾಕಿದ್ದಾರೆ. ಪ್ರತಿ ದಿನ 10 ಲಕ್ಷ ಜನಸಂಖ್ಯೆಗೆ 140 ಜನರಿಗೆ ಟೆಸ್ವ್ ಮಾಡಬೇಕು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು. ಆದ್ರೆ ಅದರ ದುಪ್ಪಟ್ಟುಗಿಂತಲೂ ಟೆಸ್ಟ್ ಕರ್ನಾಟಕದಲ್ಲಿ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಪ್ರತೀ 10 ಲಕ್ಷ ಜನರಲ್ಲಿ 297 ಜನರ ಕೋವಿಡ್ ಟೆಸ್ವ್ ಮಾಡಲಾಗುತ್ತಿದೆ. ಗುರಿ ತಲುಪಿದ ದೇಶದ ಟಾಪ್ 10 ರಾಜ್ಯಗಳಲ್ಲಿ ಕರ್ನಾಟಕ ಸೇರಿದೆ. ರಾಜ್ಯದಲ್ಲಿ ಈವರೆಗೆ 9.25 ಲಕ್ಷ ಟೆಸ್ವ್ ಮಾಡಲಾಗಿದ್ದು, ಇವೆಲ್ಲವೂ ನಿಖರ ಫಲಿತಾಂಶ ನೀಡುವ ಟೆಸ್ವ್ ಗಳಾಗಿವೆ. ನಾವು ಪ್ರತೀ 10 ಲಕ್ಷ ಜನರ ಪೈಕಿ 297 ಜನರಿಗೆ ಕೊರೊನಾ ಟೆಸ್ಟ್ ಮಾಡುತ್ತೇವೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೊರೊನಾ ಪರೀಕ್ಷೆ ವಿಷಯದಲ್ಲಿ ಸರ್ಕಾರವನ್ನು ಟೀಕಿಸಿದ್ದವು. ರಾಜ್ಯ ಸರ್ಕಾರ ಕೋವಿಡ್ ಟೆಸ್ಟ್ ಅನ್ನು ನೆಪ ಮಾತ್ರಕ್ಕೆ ಮಾಡುವುದರಿಂದಲೇ ಕೊರೊನಾ ರೋಗಿಗಳು ಪತ್ತೆಯಾಗುತ್ತಿಲ್ಲ ಎಂದು ಕಿಡಿಕಾರಿದ್ದವು. ಈಗ ವೈದ್ಯಕೀಯ ಸಚಿವರು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪ್ರವಾಸದ ವಿವರ ಏಪ್ರಿಲ್ 16, 2024
50 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್
ನಿರ್ಧರಿಸಿದೆ ದೊಡ್ಡಬಳ್ಳಾಪುರ ಮತ್ತೊಮ್ಮೆ ಮೋದಿ ಸರ್ಕಾರ
ಬಿಜೆಪಿ ಗೆದ್ರೆ ದೇಶವೇ ಇರಲ್ಲ: ಮಗನ ವಿರುದ್ಧ ತಿರುಗಿಬಿದ್ದ ಅಪ್ಪ.!
ಮಠಗಳಿಗೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದ ಡಾ.ಕೆ.ಸುಧಾಕರ್
ಇನ್ನೂ ನಾಲ್ಲೇ ದಿನದಲ್ಲಿ ಮ್ಯಾಜಿಕ್ ಆಗುತ್ತೆ ನೋಡ್ತಾರಿ ಎಂದ ವಿಜಯೇಂದ್ರ