Featured
30 ಕಿಲೋಮೀಟರ್ ಸೈಕಲ್ನಲ್ಲೇ ಬರ್ತಾರೆ- ಕರ್ತವ್ಯವೇ ದೇವರು ಅಂತಾರೆ.. ಜನಮೆಚ್ಚಿದ ಸರ್ಕಾರಿ ನೌಕರ ನೀಲಪ್ಪ..!

ರೈಸಿಂಗ್ ಕನ್ನಡ:
ನಾಗರಾಜ್.Y.ಕೊಪ್ಪಳ:
ಕೆಲಸಕ್ಕೆ ಹೋಗಬೇಕು ಅನ್ನೋ ಆಸೆ ಇರುವವರು ಹೇಗಾದರೂ ಮಾಡಿ ಕೆಲಸದ ಜಾಗ ಸೇರಿಕೊಳ್ಳುತ್ತಾರೆ. ಆದರೆ ಕೊರೊನಾ ಲಾಕ್ಡೌನ್ನಿಂದ ಅದೆಷ್ಟೋ ಜನರು ಕೆಲಸದ ಜಾಗ ತಲುಪಲು ಆಗುತ್ತಿಲ್ಲ. ಅತ್ತ ಬಸ್ಗಳೂ ಇಲ್ಲ, ಇತ್ತ ಸ್ವಂತ ವಾಹನವನ್ನು ರಸ್ತೆಗಿಳಿಸುವ ಹಾಗಿಲ್ಲ. ಹೀಗಾಗಿ ಕೆಲಸ ಮಾಡುವ ಜಾಗಕ್ಕೆ ತಲುಪುವುದು ಕಷ್ಟವೇ ಸರಿ.
ಕೊರೊನಾದ ಈ ಕಾಲದಲ್ಲಿ ಎಷ್ಟೋ ಜನ ನೌಕರರು ತಮ್ಮ ಮನೆಯಿಂದ ಕಚೇರಿ ತಲುಪಲು ಬಸ್ ಇಲ್ಲ ಎನ್ನುವ ಕಾರಣಕ್ಕೆ ಕೆಲಸಕ್ಕೆ ಹಾಜರಾಗಲ್ಲ. ಇಂಥವರ ಮಧ್ಯೆ ಯಲಬುರ್ಗಾ ಕೆಎಸ್ಆರ್ಟಿಸಿ ಘಟಕದ ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್. 30 ಕಿಲೋಮೀಟರ್ ಸೈಕಲ್ ತುಳಿದು ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ನೀಲಪ್ಪ ಯಲಬುರ್ಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರೂ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಮನೆ ಹೊಂದಿದ್ದು, ನಿಡಗುಂದಿಯಿಂದ ಯಲಬುರ್ಗಾಕ್ಕೆ ಸೈಕಲ್ ಹೊಡೆದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಸದ್ಯ ಸಾರಿಗೆ ಸೌಕರ್ಯ ಅಷ್ಟಾಗಿ ಇಲ್ಲ. ಖಾಸಗಿ ವಾಹನಗಳ ಸಂಚಾರವೂ ವಿರಳವಾಗಿದೆ. ಹಾಗಾಗಿ ಸೈಕಲ್ ಸವಾರಿ ಅನಿವಾರ್ಯ. ಇದರಿಂದ ಕಳೆದುಕೊಳ್ಳುವಂಥದ್ದು ಏನಿಲ್ಲ, ಬದಲಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಹಗಲಿರುವಾಗಲೇ ಡ್ಯೂಟಿ ಮುಗಿದರೆ ಸೈಕಲ್ ಮೂಲಕ ಮರಳಿ ಮನೆ ಸೇರಲು ಅನುಕೂಲವಾಗಬಹುದು. ಇಂಥ ಸಿಬ್ಬಂದಿ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ, ಪ್ರೋತ್ಸಾಹ ನೀಡಲಿ.
ಈ ಕುರಿತು ಯಲಬುರ್ಗಾ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ರಮೇಶ್ ಜಿಂಗ್ಲಿ ಮಾತನಾಡಿ, ಇಂಥ ನೌಕರರು ನಮ್ಮಲ್ಲಿರುವುದು ನಿಜಕ್ಕೂ ಹೆಮ್ಮೆ. ನೀಲಪ್ಪನವರ ಕರ್ತವ್ಯಪ್ರಜ್ಞೆಯನ್ನು ಅಭಿನಂದಿಸುತ್ತೇವೆ ಎಂದರು.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?