ಬಹಳಷ್ಟು ಮಂದಿ ನಾಗರ ಪಂಚಮಿ ಹಬ್ಬದ ಮಹತ್ವ ತಿಳಿಯದೇ ಆಚರಿಸುತ್ತಾರೆ. ಈ ಹಬ್ಬವು ಭಾರತದ ವಿವಿಧ ಭಾಗಗಳಲ್ಲಿ ಅನೇಕ ರೀತಿಯಲ್ಲಿ ಆಚರಿಸುತ್ತಾರೆ. ಇದರ ಹಿಂದೆ ಹಲವು ಬಗೆಯ ಕಥೆಗಳಿವೆ. ಕರ್ನಾಟಕದಲ್ಲಿ ಈ ಹಬ್ಬಕ್ಕೆ ಜಾನಪದ ಪರಂಪರೆಯಿದೆ.
ನಾಗರ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ವಿಧಾನ :
ಈ ಹಬ್ಬವನ್ನು ಪಂಚಮಿ ಹಬ್ಬ ಅಥವಾ ಒಡಹುಟ್ಟಿದವರ ಹಬ್ಬ ಎನ್ನುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ, ಸುಬ್ರಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತೆ. ಪ್ರೀತಿ, ಪ್ರೇಮ, ನಿಷ್ಠೆಯಿಂದ ಈ ಹಬ್ಬನ್ನು ಆಚರಿಸಲಾಗುತ್ತೆ. ಬೆಳಗ್ಗೆ ಮಂಗಳ ಸ್ನಾನ ಮಾಡಿ, ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡುತ್ತಾರೆ. ಕೆಲವರು ಹಾವಿನ ಆಕಾರದ ರಂಗೋಲಿ ಹಾಕುತ್ತಾರೆ. ಸಹೋದರ, ಸಹೋದರಿಯರು ನಮಸ್ಕಾರ ಮಾಡಿ, ಆಶೀರ್ವಾದ ಪಡೆಯುತ್ತಾರೆ.
ನಾಗರ ಪಂಚಮಿ ಹಬ್ಬದ ವಿಶೇಷತೆ ಅಂದ್ರೆ, ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ತಮ್ಮ, ಅಣ್ಣ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಮತ್ತು ಬೆನ್ನಿಗೆ ಸವರುತ್ತಾರೆ. ಯಾಕಂದ್ರೆ, ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ- ಮುಂದೆ ಬರುವ ಪೀಳಿಗೆ ಎಂದರ್ಥ. ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತವಾದ್ರೆ, ಬೆನ್ನು ಹಿಂದಿನ ಪೀಳಿಗೆ. ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಎಲ್ಲರು ಚೆನ್ನಾಗಿರಲಿ ಎಂದು ಹಾರೈಸು ಕಾರಣಕ್ಕೆ ಇದು ಒಡಹುಟ್ಟಿದವರ ಹಬ್ಬ.
ಊಟಕ್ಕೆ ಕಾಯಿ ಕಡಬು, ಉದ್ದಿನ ಕಡಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದು ಅಂತ ಯಾವುದೇ ರೀತಿಯ ಕರಿದ ತಿಂಡಿ, ಅಡುಗೆ ಮಾಡುವುದಿಲ್ಲ. ಅಲ್ಲದೆ, ಅಡಿಗೆಗೆ ಒಗ್ಗರಣೆಯೂ ಹಾಕುವುದಿಲ್ಲ.
ಈ ದಿನ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತೆ. ನಾಗರ ಕಲ್ಲುಗಳಿಗೆ ಪೂಜೆ ಮಾಡಲಾಗುತ್ತೆ. ಮನೆಯ ಹತ್ತಿರ ಹುತ್ತ ಇದ್ದರೆ, ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ನಾಗಪ್ಪ ಹಾಲು ಕುಡಿಯಲ್ಲ ಎಂದು ವಿಜ್ಞಾನ ಹೇಳಿದ್ರೂ, ಹಾಲು ಎರೆಯೋದನ್ನ ಮಾತ್ರ ಬಿಟ್ಟಿಲ್ಲ.
ಪಂಚಮಿ ಹಬ್ಬ ಎಂದು ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣುಮಗಳನ್ನು ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗ್ತಾರೆ.
ನಾಗರ ಪಂಚಮಿಗೆ ಮಹಾಭಾರತದ ಕಥನವಿದೆ :
ಕೃಷ್ಣ ತನ್ನ ಬಾಲ್ಯದಲ್ಲಿ ಆಟವಾಡ್ತಿರೋ ಸಮಯದಲ್ಲಿ ಚೆಂಡು ಯಮುನಾ ನದಿಯಲ್ಲಿ ಬೀಳುತ್ತೆ. ಈ ವೇಳೆ, ಚೆಂಡಿಗಾಗಿ ಕೃಷ್ಣ ಯಮುನಾ ನದಿಗೆ ಇಳಿದಾಗ, ಕಾಳಿಂಗ ಸರ್ಪವು ತನ್ನ ಅಪ್ಪಣೆ ಇಲ್ಲದೆ ನೀರಿಗೆ ಇಳಿದಿದ್ದು ಯಾಕೆ ಎಂದು ಕೇಳುತ್ತೆ. ಈ ವೇಳೆ ಕೃಷ್ಣ ಮತ್ತು ಕಾಳಿಂಗ ಸರ್ಪದ ನಡುವೆ ಮಾತಿನ ಚಕಮಕಿ ಆಗುತ್ತೆ. ಇನ್ನೇನು ಕೃಷ್ಣ ಸರ್ಪವನ್ನು ಕೊಲ್ಲಬೇಕು ಎನ್ನುವಷ್ಟರಲ್ಲಿ, ಕೃಷ್ಣನ ಮಹಾತ್ಮೆ ಕಾಳಿಂಗ ಸರ್ಪಕ್ಕೆ ಗೊತ್ತಾಗುತ್ತೆ. ಆಗ, ಇನ್ಮುಂದೆ ಜನರಿಗೆ ತೊಂದರೆ ಕೊಡುವುದಿಲ್ಲ ಎಂದು ಸರ್ಪ ಸುಮ್ಮನ್ನಾಗುತ್ತೆ. ದಯಾಮಯಿ ಕೃಷ್ಣ, ಸರ್ಪಕ್ಕೆ ತೋರಿದ ಕರುಣೆಯಿಂದಾಗಿ, ನಾಗರ ಪಂಚಮಿ ಹಬ್ಬವನ್ನ ಆಚರಿಸಲಾಗುತ್ತೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?