Featured
ಕೊರೊನಾ ಸೋಂಕಿತರ ಬಗ್ಗೆ ಲಘುವಾದ ಮಾತು – ವಿವಾದಕ್ಕೀಡಾದ ಸಚಿವ ಸೋಮಣ್ಣ..!

ರೈಸಿಂಗ್ ಕನ್ನಡ :
ತುಮಕೂರು:
ಕೊರೊನಾ ವೈರಸ್ ಸೋಂಕಿತರ ಬಗ್ಗೆ ಸಚಿವ ಸೋಮಣ್ಣ ಲಘುವಾಗಿ ಮಾತನಾಡಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಮಂಗಳವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಕೋವಿಡ್ ಕೇಂದ್ರದಲ್ಲಿ ಎಲ್ಲಾ ಅವ್ರೆ ಸ್ವಾಮಿ. ಏನ್ ಮಾಡೋದು ಎಲ್ಲಿ ನೋಡಿದ್ರು ಗಿಜಿ ಗಿಜಿ ಅಂತಾರೆ ಎಂದು ಸೋಮಣ್ಣ ಲಘುವಾಗಿ ಮಾತನಾಡಿದ್ದರು. ಇನ್ನು ಸೋಮಣ್ಣ ಮಾತಿಗೆ ಮಾಜಿ ಶಾಸಕ ಸೊಗಡು ಶಿವಣ್ಣ ಸಾಥ್ ನೀಡಿದ್ದರು. ಕುರಿ ಮಂದೆ ಇದ್ದಂಗೆ ಇದ್ದಾರೆ ಅಂತ ಧ್ವನಿ ಗೂಡಿಸಿದ್ದರು ಸೊಗಡು ಶಿವಣ್ಣ.
ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಗಳ ಜೊತೆಯಲ್ಲಿ ಮಾತನಾಡುವ ಸಂದರ್ಭದಲ್ಲೇ, ಈ ರೀತಿಯಾಗಿ ಲಘುವಾದ ಹೇಳಿಕೆಯನ್ನ ಹೊರಬಿಟ್ಟಿದ್ದಾರೆ ಸಚಿವ ಸೋಮಣ್ಣ.
ಬೆಂಗಳೂರಿನ 53ನೇ ವಾರ್ಡ್ ನಲ್ಲಿ 26 ಕಡೆ ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. 24*7 ಸಹಾಯವಾಣಿ, ಆ್ಯಂಬುಲೆನ್ಸ್, ಒಂದು ಆಕ್ಸಿಜನ್ ಆ್ಯಂಬುಲೆನ್ಸ್ ಇದೆ.3 ಸಾವಿರ ಕೊಟ್ಟರೆ ಆಂಬ್ಯುಲೆನ್ಸ್ ನವ್ರು ಹೋಗ್ತಾರೆ ಎಂದು ಅಸಹಾಯಕತೆ ಹೇಳಿಕೊಂಡ ಸಚಿವ ಸೋಮಣ್ಣ. ಕೊರೋನಾ ಸೋಂಕಿತರ ಬಗ್ಗೆ ಸಚಿವರ ತತ್ಸಾರದ ಮಾತು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್