Featured
ಅಂತ್ಯ ಸಂಸ್ಕಾರದ ವೇಳೆ ಕೋವಿಡ್ ನಿಯಮ ಮಾಯ- ಮಾಸ್ಕ್ ಮಾತೇ ಇಲ್ಲ, ಸಾಮಾಜಿಕ ಅಂತರವೂ ಇಲ್ಲ- ಹೀಗಾದ್ರೆ ಕೋರೊನಾ ಕಟ್ಟಿಹಾಕೋದು ಹೇಗೆ..?

ರೈಸಿಂಗ್ ಕನ್ನಡ:
ರಾಯಚೂರು:
ಪ್ರೇಮ ವಿವಾಹ ವಿರೋಧಿಸಿದಕ್ಕೆ ಐವರ ಬರ್ಬರ ಹತ್ಯೆ ಪ್ರಕರಣ ಇನ್ನು ಮಾಸಿಲ್ಲ. ಆದ್ರೆ ಈಗ ಇನ್ನೊಂದು ಎಡವಟ್ಟು ನಡೆದಿದೆ. ಕೊರೊನಾ ಮಹಾಮಾರಿ ರಾಯಚೂರಿನಾದ್ಯಂತ ಕೇಕೆ ಹಾಕುತ್ತಿದೆ. ಈ ಮಧ್ಯೆ ಜನ ಗುಂಪು ಗುಂಪಾಗಿ ಸೇರಿಕೊಂಡು ತಮ್ಮ ಜೊತೆ ಇನ್ನೊಬ್ಬರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಪ್ರೇಮ ಪ್ರಕರಣದಲ್ಲಿ ಕೊಲೆಯಾದವರ ಸಾಮೂಹಿಕ ಸಾಮೂಹಿಕ ಅಂತ್ಯ ಸಂಸ್ಕಾರಕ್ಕೆ ಏರ್ಪಾಡು ಮಾಡಲಾಗಿತ್ತು. ಅಂತ್ಯ ಸಂಸ್ಕಾರದ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಆಗಿದೆ. ಅಷ್ಟೇ ಅಲ್ಲ ಜನಜಾತ್ರೆಯೇ ಆಗಿ ಬಿಟ್ಟಿದೆ. ಸರ್ಕಾರಿ ನಿಯಮದ ಮೃತಪಟ್ಟವರ ರಕ್ತ ಸಂಬಂಧಿಗಳು ಸೇರಿ 20 ಜನ ಮಾತ್ರ ಭಾಗವಹಿಸಬೇಕು. ಆದರೆ ಸಿಂಧನೂರ ಪಟ್ಟಣದಲ್ಲಿ ನಡೆದ ಸಾಮೂಹಿ ಅಂತ್ಯಸಂಸ್ಕಾರದಲ್ಲಿ 400 ಕ್ಕು ಹೆಚ್ಚು ಜನ ಭಾಗಿಯಾಗಿದ್ದರು ಅಂತ ಹೇಳಲಾಗುತ್ತಿದೆ.
ಅಂತ್ಯಕ್ರಿಯೆಯಲ್ಲಿ ಭಾಗಿಯಾದ ನೂರಾರು ಜನ ಮಾಸ್ಕ್ ಧರಿಸಿಲ್ಲ. ಇನ್ನು ಸಾಮಾಜಿಕ ಅಂತರವಂತೂ ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು. ಸಿಂಧನೂರಿನಲ್ಲಿ 25 ಜನರಿಗೆ ಕೊರೊನಾ ವೈರಸ್ ವಕ್ಕರಿಸಿತ್ತು ಎಂದು ವರದಿಯಾಗಿತ್ತು. ನಿತ್ಯವೂ ಸಿಂಧನೂರ ತಾಲೂಕಿನಾದ್ಯಂತ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೆ. ಈ ಮಧ್ಯೆ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನ ಭಾಗವಹಿಸಿದ್ದು ವೈರಸ್ ಹರಡಲು ದಾರಿ ಮಾಡಿ ಕೊಟ್ಟಂತಾಗಿದೆ ಎಂದು ಸಾರ್ವಜನಿಕರು ತಲೆ ಕೆಡಿಸಿಕೊಂಡಿದ್ದಾರೆ. ಜಿಲ್ಲೆಯ ಸಿಂಧನೂರಿನ ಸುಕಾಲಪೇಟೆಯಲ್ಲಿ ಶನಿವಾರ ಸಂಜೆ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ ನಡೆದಿತ್ತು.
You may like
ಬ್ರಿಟನ್ ಕೊರೋನಾಗೆ ಕರ್ನಾಟಕವೇ ಹಾಟ್ ಸ್ಪಾಟ್ ಆಗುತ್ತಾ.? : ರೂಪಾಂತರಿ ಅಟ್ಟಹಾಸ..!
ಯಾದಗಿರಿಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯ
ಬೀಜಿಂಗ್ನಲ್ಲಿ ಮಾಸ್ಕ್ ಇಲ್ಲದೆ ಓಡಾಡಲು ಸರ್ಕಾರದ ಅನುಮತಿ- ಕೊರೊನಾ ತವರಿನಲ್ಲಿ ಜನಜೀವನ ಯಥಾಸ್ಥಿತಿ
ವಿದ್ಯುತ್ ಸ್ಪರ್ಶಿಸಿ ಯಾದಗಿರಿಯಲ್ಲಿ ಇಬ್ಬರು ಯುವಕರ ಸಾವು
ನವೆಂಬರ್16ಕ್ಕೆ ಶಬರಿಮಲೆ ಓಪನ್- ಕೊರೊನಾ ನೆಗಟಿವ್ ಸರ್ಟಿಫಿಕೇಟ್ ಇದ್ದವರಿಗೆ ದರ್ಶನ..!
ಕೊರೊನಾ ಕಾಟವೇ ಮುಗಿದಿಲ್ಲ…ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ- 60 ಜನರಿಗೆ ವಿಚಿತ್ರ ಕಾಯಿಲೆ..!