Featured
ರಾಜಸ್ಥಾನ ರಾಜಕೀಯ ಬಿಕ್ಕಟ್ಟು:ಡಿಸಿಎಂ ಸಚಿನ್ ಪೈಲೆಟ್, ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಭೇಟಿ ?

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಬುಗಿಲೆದ್ದ ಬೆನ್ನಲ್ಲೆ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಸೋಮವಾರ ಬಿಜೆಪಿ ಮುಖ್ಯಸ್ಥ ಅವರನ್ನ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
30 ಎಂಎಲ್ಗಳ ಬೆಂಬಲ ಪಡೆದು ತಮ್ಮ ಪಕ್ಷ ಕಾಂಗ್ರೆಸ್ ವಿರುದ್ಧವೆ ತಿರುಗಿ ಬಿದ್ದಿರುವ ಸಚಿನ್ ಪೈಲೆಟ್ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು.ಇದೀಗ ರಾಜಸ್ಥಾನದಲ್ಲೂ ಕಾಂಗ್ರೆಸ್ ಜಾರಿ ಬೀಳುವ ಸೂಚನೆ ಎದುರಾಗಿದೆ.
ಸೋಮವಾರ ಸಿಎಂ ಗೆಹ್ಲೋಟ್ ಕರೆದಿರುವ ಶಾಸಕರ ಸಭೆಗೆ ಸಚಿನ್ ಪೈಲೆಟ್ ಗೈರು ಆಗಲಿದ್ದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರನ್ನ ಭೇಟಿಯಾದ ನಂತರ ಡಿಸಿಎಂ ಸಚಿನ್ ಪೈಲೆಟ್ ತಮ್ಮ ರಾಜಕೀಯದ ಜೀವನವನ್ನ ನಿರ್ಧರಿಸಲಿದ್ದಾರೆ.
ಇತ್ತ ರಾಜಸ್ಥಾನ ರಾಜಕೀಯವನ್ನ ಗಮನಿಸುತ್ತಿರುವ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
You may like
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ
ಮುಂಗಾರು ಅಧಿವೇಶನ: ಮೊದಲ ದಿನವೇ 30 ಸಂಸದರಿಗೆ ಕೊರೊನಾ ಸೋಂಕು
ತುಮಕೂರಿನಲ್ಲಿ ದ್ವಿಶತಕ ಬಾರಿಸಿದ ಕೊರೊನಾ: ಇಬ್ಬರು ಬಲಿ
ನಿಲ್ಲದ ಕೊರೊನಾ ಅಬ್ಬರ : 106 ಬಲಿ, 8,852 ಹೊಸ ಕೇಸ್
2021ರ ಅರಂಭದಲ್ಲೆ ಸಿಗಲಿದೆ ಕೊರೊನಾ ಲಸಿಕೆ : ಪುಣೆಯಲ್ಲಿ ಎರಡು ಲಸಿಕೆಗಳ ಮೇಲೆ ಪ್ರಯೋಗ
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ: ದಾಖಲೆಯ 8,161 ಕೇಸ್, 148 ಬಲಿ