ರೈಸಿಂಗ್ ಕನ್ನಡ:
ಕೊರೊನಾ ಮಹಾಮಾರಿಯ ಆಟ ಇನ್ನೂ ದೂರವಾಗಿಲ್ಲ. ಜಗತ್ತಿನ ಬಹತೇಕ ದೇಶಗಳು ಕೋವಿಡ್19 ರಣಕೇಕೆಯಿಂದ ತತ್ತರಿಸಿ ಹೋಗಿವೆ. ಈ ಮಧ್ಯೆ ಹಂಟಾ, ಬಬೂನಿಕ್ ಪ್ಲೇಗ್ಗಳು ಕೂಡ ಅಟ್ಟಹಾಸ ಮೆರೆಯಲು ಕಾಯುತ್ತಿವೆ. ಕೊರೊನಾದ ಕೊಟ್ಟ ಏಟಿನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ವೈರಸ್ ಹುಟ್ಟಿಕೊಂಡಿದೆಯಂತೆ. ಪ್ರಾಣಕ್ಕೆ ಅಪಾಯಕಾರಿಯಾಗಿರುವ ಈ ವೈರಸ್ ಬಗ್ಗೆ ಇನ್ನೂ ವಿಜ್ಞಾನಿಗಳಿಗೆ ಸಣ್ಣ ಕ್ಲೂ ಕೂಡ ಸಿಕ್ಕಿಲ್ಲ. ಆದ್ರೆ ಅದಾಗಲೇ ಈ ವೈರಸ್ ಮನುಕುಲದ ಜೊತೆಗೆ ಆಟಕ್ಕೆ ಇಳಿದಿದೆ.
ಕೊರೊನಾ ಮರಣ ಮೃದಂಗದ ಜೊತೆ ಕಜಕಿಸ್ತಾನದಲ್ಲಿ ಅನಾಮಧೇಯ ವೈರಸ್ ಹರಡುತ್ತಿದೆ. ಹೀಗಂತ ಚೀನಾ ರಾಯಬಾರ ಕಚೇರಿ ಇದರ ಬಗ್ಗೆ ಮಾಹಿತಿ ನೀಡಿದೆ. ಸೆಂಟ್ರಲ್ ಏಷ್ಯಾದ ಚೀನಾ ರಾಯಬಾರ ಕಚೇರಿ ನೀಡಿರುವ ಮಾಹಿತಿಯಂತೆ ಈ ಅನಾಮಧೇಯ ವೈರಸ್ ಕಳೆದ 6 ತಿಂಗಳುಗಳಿಂದ ಕಜಕಿಸ್ತಾನದಲ್ಲಿ 1772 ಜನರ ಪ್ರಾಣ ತಿಂದಿದೆ. ಜೂನ್ ತಿಂಗಳಲ್ಲಿ ಈ ವೈರಸ್ಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 628.
ಈ ನಿಗೂಢ ವೈರಸ್ ಬಗ್ಗೆ ಕಜಕಿಸ್ತಾನದಲ್ಲಿ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ. ಕಜಕಿಸ್ತಾನದಲ್ಲಿರುವ ಈ ನಿಗೂಢ ವೈರಸ್ ಕೊರೊನಾ ವೈರಸ್ನ ರೂಪಾಂತರವೇ ಅಥವಾ ಬೇರೆಯದ್ದೇ ಅನ್ನುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕಜಕಿಸ್ತಾನದಲ್ಲಿರುವ ಚೀನಾ ಪ್ರಜೆಗಳು ಕೂಡ ಈ ವೈರಸ್ಗೆ ಬಲಿಯಾಗಿದ್ದಾರೆ. ಕೊರೊನಾ ಜಗತ್ತಿಗೆ ಹರಡಿದ ಹಾಗೇ ಈ ನಿಗೂಢ ವೈರಸ್ ಕಜಕಿಸ್ತಾನದಿಂದ ಹೊರ ಬಾರದಂತೆ ಕ್ರಮಕೈಗೊಳ್ಳುವ ಅಗತ್ಯವಿದೆ. ಈಗಾಗಲೇ ಚೀನಾ ಕಜಕಿಸ್ತಾನ ಗಡಿಯನ್ನು ಬಂದ್ ಮಾಡಿದೆ.
ಕಜಕಿಸ್ತಾನದ ಆರೋಗ್ಯ ಸಚಿವಾಲಯ ಕೂಡ ಈ ಬಗ್ಗೆ ಕ್ರಮಕೈಗೊಳ್ಳುತ್ತಿದೆ. ಕೊರೊನಾಗೆ ಹೋಲಿಸಿದ್ರೆ ಈ ಅನಾಮಧೇಯ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಎರಡರಿಂದ 3 ಪಟ್ಟು ಹೆಚ್ಚಿದೆ. ಕಜಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಜೊತೆಗೆ ಈ ನಿಗೂಢ ವೈರಸ್ ಸೋಂಕಿಗೆ ಒಳಗಾದವರ ಸ್ಥಿತಿಯೇ ಗಂಭೀರವಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?