ರೈಸಿಂಗ್ ಕನ್ನಡ :
ಬೀದರ್:
ಜನರಿಗೆ ಸರ್ಕಾರಿ ಸಾರಿಗೆ ಭಾಗ್ಯ ದೊರೆಯದಂತೆ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು L &T ಕಂಪನಿ ವಿರುದ್ಧ ಇಲ್ಲಿನ ಬೋರಳ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಬೋರಾಳ ಗ್ರಾಮ ರಾಷ್ಟ್ರೀಯ ಹೆದ್ದಾರಿ 65 ರಿಂದ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿ ಬರುತ್ತದೆ. ಅಲ್ಲದೆ ಇದು ಮನ್ನಾಖೇಳಿ ಗ್ರಾಮದಿಂದ ಎರಡು ಕಿಲೋಮೀಟರ್ ಅಂತರದಲ್ಲಿದೆ. ಈ ಗ್ರಾಮ ಮೀನಕೆರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರಲಿದ್ದು ಇಲ್ಲಿನ ಜನರು ಮನ್ನಾಖೇಳಿ ಗ್ರಾಮಕ್ಕೆ ಬರುತ್ತಾರೆ ಆದರೆ ಮೀನಕೇರಾ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅವೈಜ್ಞಾನಿಕ ನಿರ್ಣಯದಿಂದ ನಿರ್ಮಿಸಲಾದ ಸೇತುವೆ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್ ಓಡಿಸಲು ಸಾಧ್ಯವಿಲ್ಲದಂತಾಗಿದೆ.
ಆದರೆ ಈ ಗ್ರಾಮಕ್ಕೆ ಸಂಬಂಧ ಪಟ್ಟ ಮೀನಕೆರಾ ಗ್ರಾಮ ಪಂಚಾಯತ್ ಅಧ್ಯಕ್ಷರಾಗಲಿ PDO ಆಗಲಿ ಇಲ್ಲಿಯ ವರಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾಗಲಿ ಅಥವಾ ಹೆದ್ದಾರಿ ನಿರ್ಮಿಸಿ ಗ್ರಾಮಕ್ಕೆ ಸರ್ವಿಸ್ ರಸ್ತೆ ಕೂಡ ಮಾಡಿಕೊಡದೆ ತನ್ನ ಪಾಡಿಗೆ ತಾನು ಟೋಲ್ ಸಂಗ್ರಹ ಮಾಡುತಿರುವ L &T ಕಂಪನಿಯವರಿಗಾಗಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮದ ರಸ್ತೆಯ ಬಗ್ಗೆ ಯಾವುದೆ ರೀತಿಯ ದೂರು ಅಥವಾ ಮನವಿಗಳನ್ನ ಸ್ವೀಕರಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೆ ಗ್ರಾಮಕ್ಕೆ ಬಸ್ ಓಡಾಡಲು ಸಾಧ್ಯವಾಗದಂತೆ ನಿರ್ಮಿಸಲಾದ ಸೇತುವೆ ಕಟ್ಟುತಿದ್ದರೂ ಯಾವುದೇ ಪ್ರತಿ ರೋಧ ವ್ಯಕ್ತ ಪಡಿಸದನ್ನು ನೋಡಿದರೆ ಅವರು ಗುತ್ತಿಗೆ ದಾರರ ನೀಡುವ ಎಂಜಲು ಕಾಸಿಗೆ ಗ್ರಾಮದ ಸಾರಿಗೆ ವ್ಯವಸ್ಥೆ ಯನ್ನು ಬಲಿ ಕೊಟ್ಟಿದ್ದಾರೆ ಎಂದು ಸ್ಥಳೀಯರು ಅನುಮಾನ ಪಟ್ಟಿದ್ದಾರೆ.ಇನ್ನಾದರೂ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಎಚ್ಚೆತ್ತು ಗ್ರಾಮಕ್ಕೆ ಹೋಗಲು ಪರದಾಡುವ ನಾಗರಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?