ರೈಸಿಂಗ್ ಕನ್ನಡ:
ಬೇಸಿಗೆ ಸಮಯದಲ್ಲಿ ಖುಷಿಯ ವಿಚಾರಎಂದರೆ ಅದು ಹಣ್ಣುಗಳ ರಾಜ ಮಾವಿನ ನ ಹಣ್ಣಿನ ಬೆಳೆಯೋ ಸಮಯ. ಮಾವಿನ ಹಣ್ಣು ಮಾರುಕಟ್ಟೆಗೆ ಪ್ರವೇಶಿಸಿದೆ. ಇದು ಬೇಸಿಗೆ ಸಮಯ ಹೊರಗೆ ಬಿಸಿಲು, ಸೆಕೆ, ಉರಿ ಆದರೆ ಬೇಸಿಗೆ ಸಮಯದಲ್ಲಿ ಮಾವಿನ ಹಣ್ಣು ತಿನ್ನುವುದು ಮಜಾ ಬೇರೆ ಇದೆ.
ಮಾವಿನ ಹಣ್ಣು ಸಿಹಿಯಾಗಿರುತ್ತದೆ. ಎಂದು ಹೆಚ್ಚಾಗಿ ಸೇವಿಸಿದರೆ ಕೊಬ್ಬು ಹೆಚ್ಚಾಗಬಹುದು, ರಕ್ತದೊತ್ತಡ ಜಾಸ್ತಿಯಾಗಬಹುದು, ಈಗ ಕ್ವಾರಂಟೈನ್ ಸಮಯ ಬೇರೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು ಭಾವನೆಯಾಗುತ್ತದೆ.
ತಾಜಾ ಮಾವಿನ ಹಣ್ಣು ತಿಂದರೆ ಯಾವುದೇ ತೊಂದರೆ ಆಗುವುದಿಲ್ಲ.ಇದರಿಂದ ಸಕ್ಕರೆ ಪ್ರಮಾಣ ಹೆಚ್ಚಾಗುವುದಾಗಲಿ, ಕೊಬ್ಬು ಬರುವುದಾಗಲಿ ಆಗುವುದಿಲ್ಲ. ಕೆಟ್ಟ ಜೀವಶೈಲಿ,ಜಂಕ್ ಫುಡ್ ಗಳಿಂದ ಕಡಿಮೆ ನಿದ್ದೆ , ಒತ್ತಡಗಳು ಜಾಸ್ತಿಯಾಗುತ್ತವೆ.
ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ, ಎ, ಕೆ, ಮತ್ತು ವಿಟಮಿನ್ ಬಿ6 ಹೇರಳವಾಗಿರುತ್ತದೆ. ಅದರಲ್ಲಿ ಕ್ಯಾಲ್ಸಿಯಂ ,ಕಬ್ಬಿಣದ ಅಂಶ, ಮೆಗ್ನೇಷಿಯಂ, ಪೊಟ್ಯಾಷಿಯಂ ಮತ್ತು ಕ್ವೆರ್ಸೆಟಿನ್, ಅಸ್ಟ್ರಾಗಾಲಿನ್ ಮತ್ತು ಬೀಟಾ- ಕ್ಯಾರೋಟಿನ್ ನಂತಹ ಕೆಲವು ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ.
ಆರೋಗ್ಯ ಲಾಭಗಳು :-
ಮಾವಿನ ಹಣ್ಣಿನಲ್ಲಿ ಹೆಚ್ಚು ನಾರಿನಾಂಶವಿರುತ್ತದೆ . ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಬಿಡದೆ ನಾರಿನಾಂಶವಾಗಿದೆ. ಮಾವಿನ ಹಣ್ಣಿನ ಬೀಜ ಸೇವನೆ ಮಾಡುವುದರಿಂದ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ.
ಮಾನಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಕೆ ಇರುತ್ತದೆ. ಮೂಳೆ ಬಲಿಷ್ಟವಾಗಿ ಬೆಳೆಯಲು ವಿಟಮಿನ್ ಕೆ ಬೇಕಾಗುತ್ತದೆ. ಹೃದ್ರೋಗವನ್ನು ತಡೆಗಟ್ಟಲು,ರಕ್ತ ಹೆಪ್ಪುಗಟ್ಟಲು ವಿಟಮಿನ್ ಕೆ ಅಗತ್ಯ ಮತ್ತು ಇತರ ದೈಹಿಕ ಪ್ರಕ್ರಿಯೆಗಳಲ್ಲಿ ಇದು ನಿರ್ಣಾಯಕ ಬಾಗವಾಗಿರುತ್ತದೆ.
ಬಿ ಜೀವಸತ್ವಗಳು ಮತ್ತು ವಿವಿಧ ಪೋಷಕಾಂಶಗಳು ಮಳೆಯಾಗುವ ಮುನ್ನವೇ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಆದ್ದರಿಂದ ಬೇಸಿಗೆಯಲ್ಲಿ ಮಾವಿನ ಹಣ್ಣು ಹೇರಳವಾಗಿ ಬೆಳೆದು ಜನರಿಗೆ ಸಿಗುವಂತೆ ಪ್ರಕೃತಿಯೇ ನಮಗೆ ವರದಾನವಾಗಿ ನೀಡಿದೆ.
ಮಾವಿನ ಹಣ್ಣಿನಲ್ಲಿರುವ ವಿಶೇಷ ವಸ್ತುವೆಂದರೆ ಅದು ಮ್ಯಾಂಗಿಫೇರಸ್, ಇದು ದೇಹದ ಮೇಲೆ ಆ್ಯಂಟಿ-ವೈರಲ್ ಮತ್ತು ಉರಿಯೂತದ ಪರಿಣಾಮವನ್ನು ಬೀರುತ್ತದೆ. ಇದು ಯಕೃತ್ತಿನಿಂದ ಕೊಬ್ಬಿನಾಂಶಗಳನ್ನು ತೆಗೆದುಹಾಕುತ್ತದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?