ರೈಸಿಂಗ್ ಕನ್ನಡ:
ಕುಮಾರ್ ಜಿ.ಕೆ.ಕೋಲಾರ:
ಸಾವು ಯಾರಿಗೆ ಹೇಗೆ ಬೇಕಾದರೂ ಬರಬಹುದು. ಆದರೆ ಸತ್ತ ವ್ಯಕ್ತಿಗೆ ಸೂಕ್ತ ಗೌರವ ಕೊಡಲೇ ಬೇಕು. ಮಾನವೀಯತೆಯ ದೃಷ್ಟಿಯಿಂದ ಶವ ಸಂಸ್ಕಾರವನ್ನು ಮಾಡಬೇಕು. ಇತ್ತೀಚೆಗೆ ಕೊರೊನಾದಿಂದ ಮೃತ ಪಟ್ಟವನ್ನು ಹೇಗೆ ಬೇಕೋ ಹಾಗೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಅನ್ನೋ ವಿಡಿಯೋ ಹರಿದಾಡ್ತಿದೆ. ಮಾನವೀಯತೆ ನೆಲೆಯಲ್ಲಿ ಶವಕ್ಕೆ ಬೀಳ್ಗೊಡುಗೆ ನೀಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೇಸರದಿಂದ ಹೇಳಿದ್ದಾರೆ.
ಸರಕಾರಕ್ಕೆ ತಿಳಿವಳಿಕೆಯ ಕೊರತೆ ಇದೆ, ಬೇಜಾವಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಜನರಲ್ಲಿ ಜಾಗೃತಿ ಬದಲಾಗಿ ಹೆದರಿಕೆ ಹುಟ್ಟಿದೆ. ಅರಿವಿನ ಕೊರತೆಯಿಂದ ಕೊರೊನಾ ವಾರಿಯರ್ಸ್ಗೆ ಭಯವಾಗ್ತಿದೆ. ನಮ್ಮಲ್ಲಿ ಬಂಧು ಬಳಗ, ರಕ್ತ ಸಂಬಂಧ, ಮಾನವೀಯತೆ ಸತ್ತು ಹೋಗಿದೆ. ಖಾಯಿಲೆಗಿಂತ ಹೆಚ್ಚಾಗಿ ರಾಕ್ಷಸರಂತೆ ವರ್ತಿಸುತ್ತಿದ್ದೇವೆ
ಇತ್ತೀಚಿಗೆ ಕೋವಿಡ್ 19 ನಿಂದ ಮೃತಪಟ್ಟವರನ್ನು ನೆಲದ ಮೇಲೆ ಎಳೆದುಕೊಂಡು ಹೋಗಿ, ಶವಗಳನ್ನು ಒಂದರ ಮೇಲೊಂದರಂತೆ ಒಂದೇ ಗುಂಡಿಯಲ್ಲಿ ಹಾಕುವ ವಿಡಿಯೋಗಳು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡೀಯೋಗಳು ಎಲ್ಲಿಯದ್ದು ಅಂತ ತನಿಖೆ ನಡೆಯುತ್ತಿದೆ. ಅಲ್ಲದೆ ಅದರ ಸತ್ಯಾಸತ್ಯತೆ ಬಗ್ಗೆಯೂ ತನಿಖೆ ಆಗುತ್ತಿದೆ. ಆದ್ರೆ ಕೋವಿಡ್ 19 ಸೋಂಕಿತರನ್ನ ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿರುವುದು ಮಾನವೀಯತೆಗೆ ಹಿಡಿದ ಸಾಕ್ಷಿ ಅಲ್ಲ. ಅಷ್ಟೇ ಅಲ್ಲ ವಿದ್ಯಾವಂತರು, ಬುದ್ಧಿವಂತರಾದ ಮನುಷ್ಯ ಎತ್ತ ಸಾಗುತ್ತಿದ್ದಾನೆ ಅನ್ನೋದನ್ನ ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊರೊನಾದಿಂದ ಮೃತ ಪಟ್ಟವರನ್ನು 15 ಅಡಿ ಆಳ ತೆಗೆದು ಅಂತ್ಯಕ್ರಿಯೆ ಮಾಡಬಹುದು. ಆದರೆ ಈ ಬಗ್ಗೆ ಹೇಳುವವರು ಯಾರು..? ಸಿಬ್ಬಂಧಿಗಳಿಗೆ ಅರಿವು ಮೂಡಿಸುವವರು ಯಾರು..? ಅನ್ನುವ ಪ್ರಶ್ನೆ ಕಾಡುತ್ತಿದೆ. ಸರಕಾರ ಬೇಜಾವಬ್ದಾರಿಯಿಂದ ವರ್ತಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ರಕ್ತ ಸಂಬಂಧಿಗಳಿಗೆ ಹೀಗೆ ಆದ್ರೆ ಹೇಗೆ ಅನ್ನೋ ಪ್ರಜ್ಞೆ ಸರಕಾರ ನಡೆಸುವವರಿಗೆ ಇರಬೇಕು. ನಾನು ಮಂತ್ರಿ, ಸರಕಾರ ಅನ್ನೋದನ್ನ ಬಿಡಬೇಕಿದೆ, ಅಧಿಕಾರ ಶಾಶ್ವತವಲ್ಲ, ಮಾನವೀಯತೆ ಶಾಶ್ವತ ಎಂದು ಮಾಜಿ ಸ್ಪೀಕರ್ ಸರಕಾರದ ವಿರುದ್ಧ ಹರಿಹಾಯ್ದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?