Connect with us

Featured

ಸರಕಾರದ ವಿರುದ್ಧ ಹರಿಹಾಯ್ದ ರಮೇಶ್ ಕುಮಾರ್- ಮಂತ್ರಿ, ಸರಕಾರ ಅನ್ನುವುದನ್ನ ಬಿಟ್ಟುಬಿಡಿ- ಮಾನವೀಯತೆಗೆ ಬೆಲೆ ಕೊಡಿ

ರೈಸಿಂಗ್​ ಕನ್ನಡ:

ಕುಮಾರ್​ ಜಿ.ಕೆ.ಕೋಲಾರ:

Advertisement

ಸಾವು ಯಾರಿಗೆ ಹೇಗೆ ಬೇಕಾದರೂ ಬರಬಹುದು. ಆದರೆ ಸತ್ತ ವ್ಯಕ್ತಿಗೆ ಸೂಕ್ತ ಗೌರವ ಕೊಡಲೇ ಬೇಕು. ಮಾನವೀಯತೆಯ ದೃಷ್ಟಿಯಿಂದ ಶವ ಸಂಸ್ಕಾರವನ್ನು ಮಾಡಬೇಕು. ಇತ್ತೀಚೆಗೆ ಕೊರೊನಾದಿಂದ ಮೃತ ಪಟ್ಟವನ್ನು ಹೇಗೆ ಬೇಕೋ ಹಾಗೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಅನ್ನೋ ವಿಡಿಯೋ ಹರಿದಾಡ್ತಿದೆ. ಮಾನವೀಯತೆ ನೆಲೆಯಲ್ಲಿ ಶವಕ್ಕೆ ಬೀಳ್ಗೊಡುಗೆ ನೀಡಬೇಕು ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌  ಬೇಸರದಿಂದ ಹೇಳಿದ್ದಾರೆ.

ಸರಕಾರಕ್ಕೆ ತಿಳಿವಳಿಕೆಯ ಕೊರತೆ ಇದೆ, ಬೇಜಾವಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಜನರಲ್ಲಿ ಜಾಗೃತಿ ಬದಲಾಗಿ ಹೆದರಿಕೆ ಹುಟ್ಟಿದೆ. ಅರಿವಿನ ಕೊರತೆಯಿಂದ ಕೊರೊನಾ ವಾರಿಯರ್ಸ್​​ಗೆ ಭಯವಾಗ್ತಿದೆ. ನಮ್ಮಲ್ಲಿ ಬಂಧು ಬಳಗ, ರಕ್ತ ಸಂಬಂಧ, ಮಾನವೀಯತೆ ಸತ್ತು ಹೋಗಿದೆ. ಖಾಯಿಲೆಗಿಂತ ಹೆಚ್ಚಾಗಿ ರಾಕ್ಷಸರಂತೆ ವರ್ತಿಸುತ್ತಿದ್ದೇವೆ

  • ರಮೇಶ್​ ಕುಮಾರ್​, ವಿಧಾನಸಭೆ ಮಾಜಿ ಸ್ಪೀಕರ್​​

ಇತ್ತೀಚಿಗೆ ಕೋವಿಡ್​ 19 ನಿಂದ ಮೃತಪಟ್ಟವರನ್ನು ನೆಲದ ಮೇಲೆ ಎಳೆದುಕೊಂಡು ಹೋಗಿ, ಶವಗಳನ್ನು ಒಂದರ ಮೇಲೊಂದರಂತೆ ಒಂದೇ ಗುಂಡಿಯಲ್ಲಿ ಹಾಕುವ ವಿಡಿಯೋಗಳು ವೈರಲ್​ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡೀಯೋಗಳು ಎಲ್ಲಿಯದ್ದು ಅಂತ ತನಿಖೆ ನಡೆಯುತ್ತಿದೆ. ಅಲ್ಲದೆ ಅದರ ಸತ್ಯಾಸತ್ಯತೆ ಬಗ್ಗೆಯೂ ತನಿಖೆ ಆಗುತ್ತಿದೆ. ಆದ್ರೆ ಕೋವಿಡ್ 19 ಸೋಂಕಿತರನ್ನ ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿರುವುದು ಮಾನವೀಯತೆಗೆ ಹಿಡಿದ ಸಾಕ್ಷಿ ಅಲ್ಲ. ಅಷ್ಟೇ ಅಲ್ಲ ವಿದ್ಯಾವಂತರು, ಬುದ್ಧಿವಂತರಾದ ಮನುಷ್ಯ ಎತ್ತ ಸಾಗುತ್ತಿದ್ದಾನೆ ಅನ್ನೋದನ್ನ ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

 

ಕೊರೊನಾದಿಂದ ಮೃತ ಪಟ್ಟವರನ್ನು 15 ಅಡಿ ಆಳ ತೆಗೆದು ಅಂತ್ಯಕ್ರಿಯೆ ಮಾಡಬಹುದು. ಆದರೆ ಈ ಬಗ್ಗೆ ಹೇಳುವವರು ಯಾರು..? ಸಿಬ್ಬಂಧಿಗಳಿಗೆ ಅರಿವು ಮೂಡಿಸುವವರು ಯಾರು..? ಅನ್ನುವ ಪ್ರಶ್ನೆ ಕಾಡುತ್ತಿದೆ. ಸರಕಾರ ಬೇಜಾವಬ್ದಾರಿಯಿಂದ ವರ್ತಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ರಕ್ತ ಸಂಬಂಧಿಗಳಿಗೆ ಹೀಗೆ ಆದ್ರೆ ಹೇಗೆ ಅನ್ನೋ ಪ್ರಜ್ಞೆ ಸರಕಾರ ನಡೆಸುವವರಿಗೆ ಇರಬೇಕು. ನಾನು ಮಂತ್ರಿ, ಸರಕಾರ ಅನ್ನೋದನ್ನ ಬಿಡಬೇಕಿದೆ, ಅಧಿಕಾರ ಶಾಶ್ವತವಲ್ಲ, ಮಾನವೀಯತೆ ಶಾಶ್ವತ ಎಂದು ಮಾಜಿ ಸ್ಪೀಕರ್​​ ಸರಕಾರದ ವಿರುದ್ಧ ಹರಿಹಾಯ್ದರು.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ