ಬೆಂಗಳೂರು : ಬಹುಶಃ ಇದೆನಾದ್ರೂ ನಿಜವಾದ್ರೆ, ಕನ್ನಡ ಚಿತ್ರರಂಗದತ್ತ ಮತ್ತೊಮ್ಮೆ ಭಾರತೀಯ ಚಿತ್ರರಂಗವೇ ತಿರುಗಿ ನೋಡುತ್ತೆ. ಯೆಸ್, ಕೆಲವು ಮೂಲಗಳ ಪ್ರಕಾರ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಜೊತೆ ನಮ್ಮ ರಾಕಿಭಾಯ್ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡ್ತಾರಂತೆ. ಸದ್ಯ, ಸೋಶಿಯಲ್ ಮೀಡಿಯಾದ ಸೆನ್ಷೇಷನ್ ನ್ಯೂಸ್ ಇದೆ ಆಗಿದೆ. ಎಲ್ಲವೂ ಅಂದುಕೊಂಡತೆ ಆದ್ರೆ, ಯಶ್ ಜೊತೆ ಜನ ಗಣ ಮನ ಸಿನಿಮಾವನ್ನ ಪೂರಿ ಜಗನ್ನಾಥ್ ನಿರ್ದೇಶನ ಮಾಡಲಿದ್ದಾರೆ.
ಕೆಜಿಎಫ್ ಸಿನಿಮಾ ಮೂಲಕ ಯೂನಿವರ್ಸಲ್ ಸ್ಟಾರ್ ಆಗಿರೋ ಯಶ್, ಈಗ ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವತ್ತ ದೃಷ್ಟಿ ಹರಿಸಿದ್ದಾರೆ. ಪೂರಿ ಜಗನ್ನಾಥ್ ತಮ್ಮ ಡೇರ್ ಅಂಡ್ ಡ್ಯಾಶಿಂಗ್ ಚಿತ್ರಗಳಿಗೆ ಫೇಮಸ್. ಡೈಲಾಗ್ ಡೆಲಿವರಿ, ಹೀರೋಯಿಸಂಗೆ ಪೂರಿ ತನ್ನದೇ ಆದ ರೀತಿಯಲ್ಲಿ ಸಿನಿಮಾ ನಿರೂಪಣೆ ಮಾಡ್ತಾರೆ. ಇತ್ತೀಚೆಗೆ ಐಸ್ಮಾರ್ಟ್ ಶಂಕರ್ ಅನ್ನೋ ಸಿನಿಮಾ ಮೂಲಕ ಪೂರಿ, ತೆಲುಗಿನಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಈಗ ಯಶ್ ಜೊತೆ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ.
ಏನಿದು ಜನ ಗಣ ಮನ..?
ಜನ ಗಣ ಮನ ಈ ಟೈಟಲ್ ಈಗಾಗಲೇ ರಿಜಿಸ್ಟ್ರರ್ ಆಗಿದೆ. ಪೂರಿ ಈ ಸಿನಿಮಾವನ್ನ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಮಾಡೋದಾಗಿ ಘೋಷಣೆ ಕೂಡ ಮಾಡಿದ್ರು. ಫಸ್ಟ್ ಲುಕ್ ಕೂಡ ರಿಲೀಸ್ ಆಗಿತ್ತು. ಅದ್ಯಾಕೋ ಏನೋ, ಕೊನೆ ಕ್ಷಣದಲ್ಲಿ ಮಹೇಶ್ ಬಾಬು, ಈ ಸಿನಿಮಾದಿಂದ ಹೊರ ಬಂದ್ರು. ಇದೇ ಸಿನಿಮಾವನ್ನ ಮಾಡುವಾಸೆ ಪೂರಿಗೆ ಇದ್ದು, ಅದಕ್ಕೆ ಯಶ್ ಅವರನ್ನ ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿದೆ.
ನಟ ಯಶ್ ಜೊತೆ ಈಗಾಗಲೇ ಎರಡು ಬಾರಿ ಪೂರಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿಗೆ ಬಂದಿದ್ದ ಪೂರಿ ಜಗನ್ನಾಥ್, ಯಶ್ಗೆ ಕಥೆ ಹೇಳಿದ್ದು ಮತ್ತೊಮ್ಮೆ ಚರ್ಚೆ ನಡೆಯೋ ಸಾಧ್ಯತೆ ಇದೆ. ಸದ್ಯ ಯಶ್ ಈಗ ಕೆಜಿಎಫ್ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 2020ಕ್ಕೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಲಿದೆ. ಎಲ್ಲವೂ ಅಂದುಕೊಂಡತೇ ಆದ್ರೆ, ಯಶ್ ಜೊತೆ ಪೂರಿ ಸಿನಿಮಾ ಮಾಡೋದು ಪಕ್ಕಾ ಎನ್ನಲಾಗ್ತಿದೆ.
ಆದ್ರೆ, ಈ ಸುದ್ದಿ ಕುರಿತು ಈವರೆಗೆ ಯಶ್ ಆಗಲಿ, ನಿರ್ದೇಶಕ ಪೂರಿ ಜಗನ್ನಾಥ್ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಸುದ್ದಿ ನಿಜವಾಗುತ್ತಾ..? ಇಲ್ವೋ..? ಕೇವಲ ವದಂತಿಯಾಗುತ್ತಾ ಅನ್ನೋದನ್ನ ಕಾದುನೋಡೋಣ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?