Featured
ಮಂಡ್ಯದ ಕಾಮೇಗೌಡರಿಗೆ ಸಿಎಂ ಕರೆ – ಆಫರ್ಗಳ ಮೇಲೆ ಆಫರ್ – ಜೀವಿತಾವಧಿ KSRTC ಪಾಸ್..!

ರೈಸಿಂಗ್ ಕನ್ನಡ :
ಮಂಡ್ಯ :
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಒಳ್ಳೆ ಕೆಲಸಗಳನ್ನ ಮಾಡುತ್ತಾ ಹೋದ್ರೆ, ದೇವರು ಯಾವತ್ತಿಗೂ ಕೈಬಿಡೋದಿಲ್ಲ ಅನ್ನೋದಕ್ಕೆ ಮಂಡ್ಯದ ಭಗೀರಥ ಕಾಮೇಗೌಡರೇ ಸಾಕ್ಷಿ. ಮಂಡ್ಯದ ಮಳವಳ್ಳಿ ತಾಲ್ಲೂಕಿನ ದಾಸದೊಡ್ಡಿ ಗ್ರಾಮದವರಾದ ಕಾಮೇಗೌಡರು, ತಮ್ಮ ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸಿ ಸುದ್ದಿಯಾಗಿದ್ದರು.
ಇವರ ಈ ಕಾರ್ಯವನ್ನ, ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಮನ್ ಕಿ ಬಾಕ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು. ಆ ನಂತರದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಕಾಮೇಗೌಡರಿಗೆ ಕರೆ ಮಾಡಿ ಶುಭಕೋರಿದ್ದರು. ಆ ಸಂದರ್ಭದಲ್ಲಿ ಗೌಡರು ಕೆಲ ಸಮಸ್ಯೆಗಳನ್ನ ಕೇಂದ್ರ ಸಚಿವರ ಮುಂದಿಟ್ಟಿದ್ದಾರೆ. ಆ ಬಳಿಕ ಕೇಂದ್ರ ಸಚಿವರು ಅದನ್ನ ರಾಜ್ಯ ಸರ್ಕಾರದ ಗಮನಕ್ಕೂ ತಂದಿದ್ದಾರೆ. ಇದ್ರಿಂದಾಗಿ ಸ್ವತಃ ಮುಖ್ಯಮಂತ್ರಿಗಳೇ ಕಾಮೇಗೌಡರಿಗೆ ಕರೆ ಮಾಡಿ ಸಮಸ್ಯೆ ಆಲಿಸಿದ್ದಾರೆ. ಅದಕ್ಕೆ ಪರಿಹಾರವನ್ನೂ ನೀಡಿದ್ದಾರೆ.
ಕೆರೆಗಳ ಅಭಿವೃದ್ಧಿಗೆ ಹಣ, ಮನೆ ಕಟ್ಟಲು ಸೌಲಭ್ಯ, ಮಗನಿಗೆ ಸರ್ಕಾರಿ ಉದ್ಯೋಗ ನೀಡಲು ಕಾಮೇಗೌರಡು ಸಿಎಂ ಬಳಿ ಮನವಿ ಮಾಡಿದ್ದಾರೆ. ಅದಕ್ಕೆ ಸ್ಪಂಧಿಸಿರುವ ಸಿಎಂ ಬಿ.ಎಸ್ ಯಡಿಯೂರಪ್ಪನವರೂ, ಕೆರೆ ನಿರ್ಮಿಸಲು ಸರ್ಕಾರದಿಂದ 25 ಲಕ್ಷ ಹಣ ನೀಡೋದಷ್ಟೇ ಅಲ್ಲದೇ, ಸರ್ಕಾರದಿಂದ ಉಚಿತ ನಿವೇಶನ ನೀಡಿ ಮನೆ ಕಟ್ಟಿ ಕೊಡಲಾಗುವುದು ಎಂದಿದ್ದಾರೆ. ಮಗನಿಗೆ ಸರ್ಕಾರಿ ಕೆಲಸ ಕೊಡಿಸುವ ಆಶ್ವಾಸನೆಯನ್ನ ಸಹ ನೀಡಿದ್ದಾರೆ.
ಜೊತೆಗೆ ಕಾಮೇಗೌಡರ ಜೀವಿತಾವಧಿವರೆಗೆ ಉಚಿತ ಬಸ್ಪಾಸ್ ಕೇಳಿದ್ದು, ಅದನ್ನ ಅದಾಗಲೇ ವಿತರಿಸಿಯೂ ಆಗಿದೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?