Featured
ಚೀನಾಕ್ಕೆ ಮತ್ತೊಂದು ಮಾಸ್ಟರ್ ಸ್ಟ್ರೋಕ್- “ಡಿಜಿಟಲ್ ಸ್ಟ್ರೈಕ್” ಬಳಿಕ “ಹೈವೇ ಸ್ಟ್ರೋಕ್” - ಹೆದ್ದಾರಿ ಯೋಜನೆಗಳಿಂದ ಡ್ರ್ಯಾಗನ್ ದೇಶ ಕಿಕ್ ಔಟ್..!

ರೈಸಿಂಗ್ ಕನ್ನಡ:
ಬೆಂಗಳೂರು:
ಭಾರತವನ್ನು ಕೆಣಕಿದ ಚೀನಾಕ್ಕೆ ಕೇಂದ್ರ ಸರ್ಕಾರ ಮುಟ್ಟಿ ನೋಡಿಕೊಳ್ಳುವಂತೆ ಕೊಡಲಿಯೇಟು ಕೊಡುತ್ತಿದೆ. ಚೀನಾ ದೇಶಕ್ಕೆ ಹಣದ ಹರಿಯುವಿಕೆಯನ್ನು ತಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಮೊನ್ನೆಯಷ್ಟೇ ಭಾರತೀಯ ಜನಮನ ಗೆದ್ದಿದ್ದ ಟಿಕ್ ಟಾಕ್, ಹಲೋ, ಶೇರ್ ಇಟ್ ಸೇರಿದಂತೆ 59 ಆ್ಯಪ್ಗಳನ್ನು ನಿಷೇಧ ಮಾಡಿದ ನೆನಪು ಮಾಸುವ ಮುನ್ನವೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಭಾರತದ ಯಾವುದೇ ಹೆದ್ದಾರಿ ಯೋಜನೆಗಳಲ್ಲಿ ಚೀನಾದ ಕಂಪನಿಗಳಿಗೆ ಅವಕಾಶವಿಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ಭಾರತದೊಂದಿಗೆ ಕಾಲುಕೆರದುಕೊಂಡು ಜಗಳಕ್ಕೆ ಬರುತ್ತಿದ್ದ ಡ್ರ್ಯಾಗನ್ ದೇಶ ಚೀನಾಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಏಟು ಕೊಟ್ಟಿದೆ.
ಕೆಲದಿನಗಳ ಹಿಂದೆ ಕೇಂದ್ರ ಗೃಹ ಸಚಿವಾಲಯ ಚೀನಾದ ಮೇಲೆ ಡಿಜಿಟಲ್ ಸ್ಟ್ರೈಕ್ ಮಾಡಿತ್ತು. ಈಗ ಟೆಂಡರ್ ಹೆದ್ದಾರಿ ಯೋಜನೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಚೀನಾದ ಕಂಪನಿಗಳಿಗಳಿಗೆ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಗಲ್ವಾನ್ ಘಟನೆ ಬಳಕ ಭಾರತದಲ್ಲಿ ಚೀನಾ ವಸ್ತುಗಳನ್ನು ನಿಷೇಧಿಸುವ ಬಗ್ಗೆ ಜಾಗೃತಿ ಹುಟ್ಟಿಕೊಂಡಿತ್ತು. ಜನರು ಬಾಯ್ಕಾಟ್ ಚೀನಾ ಗೂಡ್ಸ್ ಅನ್ನುವ ಸ್ಲೋಗನ್ ಅನ್ನೇ ಶುರುಮಾಡಿದ್ದರು. ಈಗ ಜನರ ಕೂಗಿದೆ ಕೇಂದ್ರ ಸರ್ಕಾರವೂ ಬೆಂಬಲ ಕೊಟ್ಟಿದೆ. ಚೀನಾದ ಒಂದೊಂದೇ ಬೆನ್ನು ಮೂಳೆಗಳನ್ನು ಮುರಿಯುತ್ತಿದೆ.
ಚೀನಾದ ಹಲವು ಕಂಪನಿಗಳು ಭಾರತದ ಹೆದ್ದಾರಿ ನಿರ್ಮಾಣ ಯೋಜನೆಗಳಲ್ಲಿ ಕೈ ಹಾಕಿದ್ದವು. ಶಾಂಘೈ ಟನೆಲ್ ಕನ್ಸ್ಟ್ರಕ್ಷನ್, ಸೇರಿದಂತೆ ಹಲವು ಮಧ್ಯಮ ಮತ್ತು ಬೃಹತ್ ಕಂಪನಿಗಳು ಭಾರತದಲ್ಲಿ ಹೆದ್ದಾರಿ ನಿರ್ಮಿಸಲು ದೊಡ್ಡ ಮಟ್ಟದ ಪ್ರಾಜೆಕ್ಟ್ ಹಾಕಿದ್ದವು. ಆದ್ರೆ ಕೇಂದ್ರ ಸರಕಾರದ ಈ ನಿರ್ಧಾರ ಈಗ ಚೀನಾದ ಕನ್ಸ್ಟ್ರಕ್ಷನ್ ಕಂಪನಿಗಳಿಗೆ ನುಂಗಲಾರದ ತುತ್ತಾಗಿದೆ. ಒಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಚೀನಾದ ಕುತಂತ್ರ ಬುದ್ದಿಗೆ ನೇರವಾಗಿ ನಿಂತು ಬುದ್ಧಿ ಕಲಿಸುತ್ತಿದೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?