Featured
ರಾಜ್ಯದಲ್ಲಿ ಲಾಕ್ಡೌನ್ ಪ್ರಶ್ನೆಯೇ ಇಲ್ಲ- ಹಾಸನ, ಹುಬ್ಬಳ್ಳಿಯಲ್ಲಿ ಸಚಿವರ ಸ್ಪಷ್ಟನೆ

ರೈಸಿಂಗ್ ಕನ್ನಡ:
ಬೆಂಗಳೂರು:
“ಕರ್ನಾಟಕ ಮತ್ತೊಮ್ಮೆ ಲಾಕ್ ಆಗುವುದಿಲ್ಲ. ಇಡೀ ರಾಜ್ಯದಲ್ಲಿ ಲಾಕ್ ಡೌನ್ ಹೇರುವಂತಹ ಯೋಚನೆ ಕೂಡ ಇಲ್ಲ”
- ಆರ್. ಅಶೋಕ್, ಕಂದಾಯ ಸಚಿವ
ಇಡೀ ರಾಜ್ಯ ಲಾಕ್ ಡೌನ್ ಇಲ್ಲ- ಅಗತ್ಯಬಿದ್ದ ಕಡೆ ಸೀಲ್ ಡೌನ್ ಮಾಡಬಹುದು. ಪ್ರತೀ ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್- ಈ ಕ್ಷಣದ ತನಕ ಬೇರೆ ದಿನಗಳಲ್ಲಿ ಬೇರೆ ದಿನಗಳಲ್ಲಿ ಸಂಪೂರ್ಣ ಲಾಕ್ ಡೌನ್ ಇಲ್ಲ.
- ಜಗದೀಶ್ ಶೆಟ್ಟರ್, ಸಚಿವರು ಕರ್ನಾಟಕ ಸರಕಾರ
ರಾಜ್ಯ ಸರ್ಕಾರದ ಇಬ್ಬರು ಪ್ರಭಾವಿ ಸಚಿವರು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆಗುತ್ತೆ ಅನ್ನುವ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕಳೆದ ಒಂದು ವಾರದಿಂದ ಕರ್ನಾಟಕ ಅದ್ರಲ್ಲೂ ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್ಗಳು ಹೆಚ್ಚುತ್ತಿದ್ದಂತೆಯೇ ಮತ್ತೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆ ಸುದ್ದಿ ಹಬ್ಬಿತ್ತು. ಆದ್ರೆ ಈಗ ಇಬ್ಬರು ಸಚಿವರು ಲಾಕ್ ಡೌನ್ ಇಲ್ಲ ಅನ್ನುವುದನ್ನ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಅನ್ಲಾಕ್ 2.0ಗೆ ರಾಜ್ಯ ಸಿದ್ಧವಾಗ್ತಿದೆ. ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಅನ್ಲಾಕ್ 2.0ಗೆ ಸಿದ್ಧವಾಗಿದೆ.
- ಜುಲೈ5 ಭಾನುವಾರದಿಂದ ಮುಂದಿನ ಆದೇಶದ ತನಕ ಪ್ರತೀ ಭಾನುವಾರ ಸಂಪೂರ್ಣ ಲಾಕ್ಡೌನ್
- ಜುಲೈ 31ರ ತನಕ ಜಿಮ್, ಈಜುಕೊಳ ತೆರೆಯುವ ಹಾಗಿಲ್ಲ
- ಮೆಟ್ರೋ ರೈಲು, ಪಬ್-ಕ್ಲಬ್, ಥಿಯೇಟರ್ಗಳಿಗೆ ಅವಕಾಶ ಇಲ್ಲ
- ಜುಲೈ 31ರತನಕ ಶಾಲಾ-ಕಾಲೇಜುಗಳಿಲ್ಲ
- ರಾತ್ರಿ 8ರಿಂದ ಬೆಳಗ್ಗೆ 5ರತನಕ ಕರ್ಫ್ಯೂ ಜಾರಿ
- ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದಿದ್ದರೆ 200 ರೂಪಾಯಿ ದಂಡ
- ಪಾಲಿಕೆ ವ್ಯಾಪ್ತಿ ಹೊರತು ಪಡಿಸಿ ಉಳಿದ ಕಡೆ ಮಾಸ್ಕ್ ಹಾಕದೇ ಇದ್ರೆ 100 ರೂ ದಂಡ
- ಧಾರ್ಮಿಕ, ರಾಜಕೀಯ ಸಭೆ ಸಮಾರಂಭ ನಿಷೇಧ
- ದೇಶೀಯ ವಿಮಾ ಹಾರಟ ಹಂತ ಹಂತವಾಗಿ ಹೆಚ್ಚಳ
- ಜುಲೈ 31ರ ತನಕ ಅಂತರಾಷ್ಟ್ರೀಯ ವಿಮಾನ ನಿಷೇಧ
- ಮದುವೆಗೆ 50ಕ್ಕೆ ಹೆಚ್ಚು ಜನರು ಸೇರುವಂತಿಲ್ಲ
- ಸಾವಿನ ಮನೆಯಲ್ಲಿ 20ಕ್ಕಿಂತ ಹೆಚ್ಚು ಜನರು ಇರುವಂತಿಲ್ಲ
- ಕಂಟೈನ್ ಮೆಂಟ್ ಝೋನ್ ನಲ್ಲಿ ಈ ಹಿಂದಿನಂತೆ ಯಥಾಸ್ಥಿತಿ

You may like
ಬಿಜೆಪಿ ಜೊತೆ ಮೈತ್ರಿಗೆ ಚಂದ್ರಬಾಬು ಕಾತರ : ಹಿಂದಿರೋ ತಂತ್ರವೇನು..? ಯಾಕಿಷ್ಟು ಮಹತ್ವ..?
ಬಿಜೆಪಿಗೆ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ತಾಖತ್ ಇಲ್ಲ: ಸಿಎಂ
ಬ್ರ್ಯಾಂಡ್ ಬೆಂಗಳೂರು ರೂಪಿಸದಿದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ: ಪ್ರತಿಪಕ್ಷ ನಾಯಕ ಆರ್.ಅಶೋಕ
ವಿದ್ಯಾರ್ಥಿಗಳ ಜೊತೆ ಸರ್ಕಾರ ಚೆಲ್ಲಾಟ – ಅಶೋಕ್ ಆಕ್ರೋಶ
ದೇಶದ್ರೋಹಿಗಳನ್ನು ಬಂಧಿಸುವವರೆಗೂ ಬಿಜೆಪಿಯಿಂದ ಹೋರಾಟ ನಿಲ್ಲಿಸಲ್ಲ
ಸಂವಿಧಾನ ಸಮಾವೇಶದ ಹೆಸರಲ್ಲಿ ಗಂಜಿ ಗ್ಯಾರೆಂಟಿ ಸಮಾವೇಶ | ಅಶೋಕ್ ಕಿಡಿ