ರೈಸಿಂಗ್ ಕನ್ನಡ :
ಅದ್ಭುತ, ಅಮೋಘ, ಅವೀಸ್ಮರಣೀಯ…. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಈ ಕ್ಷಣವನ್ನ ನಾವು ಮರೆಯೋಕೆ ಸಾಧ್ಯವಿಲ್ಲ. ಸರಿಯಾಗಿ 2013ರ ಜೂನ್ 23ರಂದು ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಬರ್ನಿಮಿಂಗ್ಹ್ಯಾಮ್ನಲ್ಲಿ ನಿಗದಿಯಾಗಿತ್ತು.
ಆದ್ರೆ, ಪಂದ್ಯದ ಆರಂಭಕ್ಕೆ ವರುಣ ಬಿಟ್ಟೂ ಬಿಡದೆ ಕಾಡಿದ್ದು. ಕಡೆಗೆ ಮ್ಯಾಚ್ ರೆಫ್ರಿಗಳು ಪಂದ್ಯವನ್ನ 20 ಓವರ್ಗೆ ಸೀಮಿತಗೊಳಿಸಿದ್ರು. ಹೊನಲು ಬೆಳಕಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 129 ರನ್ಗಳ ಸಾಧಾರಣ ಮೊತ್ತವನ್ನ ಮಾತ್ರ ಕಲೆಹಾಕಿತ್ತು.
ಆತಂಕದಲ್ಲೇ ಇದ್ದ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಮ್ಯಾಜಿಕ್ ಮಾಡಿದ್ರು. ಅಶ್ವಿನ್, ಜಡೇಜಾ, ಇಶಾಂತ್ ಶರ್ಮಾ ಮೋಡಿಗೆ ಆಂಗ್ಲರು ತಲೆಬಾಗಿದ್ರು. ರೋಚಕ ಹಂತಕ್ಕೆ ಸಾಗಿದ್ದ ಪಂದ್ಯವನ್ನ ಭಾರತ, ಕೇವಲ 5 ರನ್ಗಳಿಗೆ ಗೆದ್ದುಕೊಂಡಿತು. ಭಾರತೀಯ ಕಾಲಮಾನದ ಪ್ರಕಾರ, ಬೆಳಗಿನ ಜಾವ 3 ಗಂಟೆಗೆ ಪಂದ್ಯ ಗೆದ್ದ ಸಂಭ್ರಮ ಅದು.
ಭಾರತೀಯರು ಬೆಳಗೆದ್ದು ನೋಡುವಷ್ಟರಲ್ಲೇ ಎಲ್ಲೆಲ್ಲೂ ಸಂಭ್ರಮ. ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟಿದ್ದ ಧೋನಿ ನಾಯಕತ್ವಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಗರಿ ಸೇರ್ಪಡೆಯಾಗಿತ್ತು. ಈ ಸಂಭ್ರಮಕ್ಕೆ ಇದೀಗ 7 ವರ್ಷವಾಗಿದೆ. ಭಾರತೀಯ ಕ್ರಿಕೆಟ್ಗೆ ಮತ್ತಷ್ಟು ಯಶಸ್ಸು ಸಿಗಲಿ ಅಂತ ಆಶಿಸೋಣ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆಗೆ ಇಂದಿಗೆ ಏಳು ವರ್ಷ ಸಂದಿದೆ. 2013ರ ಜೂನ್ 23ರಂದು ನಡೆದ 50 ಓವರ್ ಗಳ ಮಿನಿ ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?