ರೈಸಿಂಗ್ ಕನ್ನಡ:
ಚಿಕ್ಕೋಡಿ:
ಡಿನ್ನರ್ ಪಾರ್ಟಿ ಮಾಡಿದ್ದಾಯಿತು, ಬಿಜೆಪಿಯ ಹೈಕಮಾಂಡ್ ಮಂತ್ರಿ ಪಟ್ಟ ಕೊಡಲಿಲ್ಲ ಅಂತ ಮಾತನಾಡಿದ್ದೂ ಆಯಿತು, ಸಹೋದರನನ್ನು ರಾಜ್ಯಸಭೆಗೆ ಕಳುಹಿಸಬೇಕೆಂಬ ಕನಸೂ ನನಸಾಗಲಿಲ್ಲ. ಆದ್ರೆ ಹಿರಿಯ ಶಾಸಕ ಉಮೇಶ್ ಕತ್ತಿ ಮಾತ್ರ ತನ್ನ ಹಠ ಬಿಟ್ಟಿಲ್ಲ. ಅಷ್ಟೇ ಅಲ್ಲ ಹೊಸ ಕನಸು ಕೂಡ ಕಾಣ್ತಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಕೊರೊನಾ ವಾರಿಯರ್ಗಳಿಗೆ ಆಹಾರ ಕಿಟ್ ವಿತರಿಸುವ ವೇಳೆ ತನ್ನ ಕನಸನ್ನು ಬಿಚ್ಚಿಟ್ಟಿದ್ದಾರೆ. ನನಗೆ ಮತ್ತೆ ಜಸ್ಟ್ ಮಂತ್ರಿ ಆಗುವ ಆಸೆಯಿಲ್ಲ, ಆದ್ರೂ ರಾಜ್ಯದ ಮುಖ್ಯಮಂತ್ರಿ ಆಗ್ತಿನಿ ಎಂದು ಮಾಜಿ ಸಚಿವ ಉಮೇಶ ಕತ್ತಿ ಬಾಂಬ್ ಸಿಡಿಸಿದ್ದಾರೆ.
“ ನಾನು 8 ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. 13 ವರ್ಷ ರಾಜ್ಯದ ಮಂತ್ರಿಯಾಗಿ ಕೆಲಸವನ್ನ ಮಾಡಿದ್ದೇನೆ. ಈಗ ಮತ್ತೆ ನನಗೆ ಮಂತ್ರಿ ಆಗುವ ಆಸೆ ಇಲ್ಲವೇ ಇಲ್ಲ. ಮಂತ್ರಿ ಸ್ಥಾನ ಬಂದ್ರೆ ನೋಡೋಣಾ. ಆದ್ರೆ ನಾನು ರಾಜ್ಯದ ಮುಖ್ಯಮಂತ್ರಿ ಆಗ್ತಿನಿ. ಕರ್ನಾಟಕದ ರಾಜ್ಯ ಚುಕ್ಕಾಣಿ ಹಿಡಿಯಲು ನಾನು ಸಮರ್ಥನಾಗಿದ್ದೇನೆ”
ನಾನು ಉತ್ತರ ಕರ್ನಾಟಕದ ಸುಪುತ್ರ. ಮುಂದಿನ ದಿನಗಳಲ್ಲಿ ರಾಜ್ಯ ಮುಖ್ಯಮಂತ್ರಿ ಆಗಿ ಬರಲಿ ಅನ್ನೋ ಹಾರೈಕೆ ನನ್ನ ಮೇಲೆ ಇರಲಿ ಅಂತಾ ಉಮೇಶ ಕತ್ತಿ ಕ್ಷೇತ್ರದ ಜನತೆಗೆ ಮನವಿ ಮಾಡಿದ್ರು. ಬಿಜೆಪಿಯಲ್ಲಿ ಉಮೇಶ ಕತ್ತಿ ಸಹೋದರರಿಗೆ ಪದೇ ಪದೇ ಹಿನ್ನಡೆ ಆಗುತ್ತಿದೆ. ಸಹೋದರನಿಗೆ ಎಂ.ಪಿ ಟಿಕೆಟ್ ಸಿಗಲಿಲ್ಲ. ರಾಜ್ಯಸಭೆಗೆ ಮಾಡಿದ ಲಾಬಿ ಕೂಡ ಫಲ ನೀಡಲಿಲ್ಲ. ಕತ್ತಿ ಡಿನ್ನರ್ ಪಾರ್ಟಿ, ಅಸಮಾಧಾನ ಹೇಳಿಕೆಗಳಿಗೆ ಪಕ್ಷವೂ ಸೋಪ್ಪು ಹಾಕುತ್ತಿಲ್ಲ. ಆದ್ರೂ ಉಮೇಶ ಕತ್ತಿ ಆತ್ಮವಿಶ್ವಾಸದಿಂದ ನಾನು ರಾಜ್ಯದ ಮುಖ್ಯಮಂತ್ರಿ ಆಗ್ತಿನಿ ಅನ್ನೋ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಉಮೇಶ ಕತ್ತಿ ಈ ಹೇಳಿಕೆ ಮತ್ತೆ ರಾಜಕೀಯದಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಹಾಗೂ ಬಿಜೆಪಿ ಹೈಕಮಾಂಡ್ ಯಾವ ರೀತಿ ಕತ್ತಿ ಸಹೋದರರ ಅಸಮಾಧನವನ್ನ ಶಮನಗೊಳಿಸುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?