Featured
ಸೀಲ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಮಿಡಿದ ರೆಡ್ಡಿ ಶ್ರೀನಿವಾಸ – ಸ್ವಂತ ಖರ್ಚಿನಲ್ಲಿ ತರಕಾರಿ ಖರೀದಿಸಿ, ಹಂಚಿದ ನಾಯಕ

ರೈಸಿಂಗ್ ಕನ್ನಡ :
ಪ್ರತಿನಿಧಿ : ನಾಗರಾಜ್. ವೈ
ಕೊಪ್ಪಳ :
ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡೋರು ನಿಜವಾದ ಜನನಾಯಕರಾಗ್ತಾರೆ ಅನ್ನೋ ಮಾತಿಗೆ ರೆಡ್ಡಿ ಶ್ರೀನಿವಾಸ್ ಉದಾಹರಣೆ. ಕೊಪ್ಪಳ ಜಿಲ್ಲೆಯಲ್ಲಿ ಸೀಲ್ಡೌನ್ ಆದ ಗ್ರಾಮಗಳ ನೂರಾರು ಕುಟುಂಬಗಳಿಗೆ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಪಿಎಂಸಿ ಸದಸ್ಯರಾದ ರೆಡ್ಡಿ ಶ್ರೀನಿವಾಸ ನೆರವಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸತತ ಎರಡು ತಿಂಗಳಿಂದ ಸ್ವಂತ ತಮ್ಮ ಹಣದಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸಿ ಉಚಿತವಾಗಿ ಹಂಚಿದ್ದಾರೆ.
ಇನ್ನೂ ಗಂಗಾವತಿ ತಾಲೂಕಿನ ಮರಳಿ ಹೋಬಳಿಯ ಚಿಕ್ಕಚಂತಗಲ್ ಗ್ರಾಮದಲ್ಲಿ ಒಂದು ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಂಡಿತ್ತು. ಇದ್ರಿಂದ ಇಡೀ ಅರ್ಧ ಗ್ರಾಮವನ್ನೇ ಸೀಲ್ಡೌನ್ ಮಾಡಲಾಗಿತ್ತು. ಇದ್ರಿಂದಾಗಿ ಜನರು ಕೆಲಸವೂ ಇಲ್ಲದೇ ಅತ್ತ ದಿನಬಳಕೆಯ ಸಾಮಾಗ್ರಿ, ತರಕಾರಿಯೂ ಸಿಗದೆ ಪರದಾಡಿದ್ರು. ಇದನ್ನು ಮನಗಂಡ ರೆಡ್ಡಿ ಶ್ರೀನಿವಾಸ ಅವರು, ತಾವೇ ಸಾವಿರಾರು ಕುಟುಂಬಗಳಿಗೆ ತರಕಾರಿ ಕಿಟ್ ವಿತರಿಸಿ ಮಾದರಿಯಾದ್ರು.
ಇದೇ ವೇಳೆ ಮಾತನಾಡಿದ ರೆಡ್ಡಿ ಶ್ರೀನಿವಾಸ, ನಾವು ಮೂಲತಃ ರೈತ ಕುಟುಂಬದವರಾಗಿದ್ದು, ರೈತರ ನೋವು ಗೊತ್ತಿದೆ. ಅಲ್ಲದೆ ನಮ್ಮ ಜಮೀನಿನಿಂದ ಬಂದ ಲಾಭದ ಸಂಪೂರ್ಣ ಹಣವನ್ನು ಕೊರೊನಾ ಸಲುವಾಗಿ ಬಳಕೆ ಮಾಡುತ್ತಿದ್ದು, ಇದಕ್ಕೆಲ್ಲಾ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯನವರು ಹಾಗೂ ಮಾಜಿ ಸಚಿವರಾದ ಶಿವರಾಜ್ ತಂಗಡಗಿಯವರ ಮಾರ್ಗದರ್ಶನ ಕಾರಣ ಎಂದ್ರು. ಇದೇ ವೇಳೆ ತಾಲೂಕ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ರಫಿ, ಜಿಲ್ಲಾಪಂಚಾಯತ್ ಸದಸ್ಯ ಅಮರೇಶ ಗೋನಾಳ್, ತಾಲೂಕ ಪಂಚಾಯತ್ ಸದಸ್ಯ ಹುಲಗಪ್ಪ, ಶ್ರೀರಾಮನಗರ ಗ್ರಾಮ ಪಂಚಾಯತ್ ಸದಸ್ಯ ಮೆಹಬೂಬ್, ಮುಖಂಡರಾದ ಬಟಾರಿ ಯಂಕಣ್ಣ, ಹಿರಿಯರಾದ ದ್ಯಾಮಣ್ಣ,ರಾಜೇಂದ್ರ ಸೇರಿದಂತೆ ಅನೇಕ ಗ್ರಾಮದ ಮುಖಂಡರು ಭಾಗಿಯಾಗಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?